ರಾಜರಾಜೇಶ್ವರಿನಗರ: ಇಲ್ಲಿನ ಜ್ಞಾನ ಭಾರತಿ ಒಂದನೆಯ ಬ್ಲಾಕ್,ಆಶಾಕಿರಣ ಬಡಾವಣೆ ಹಾಗೂ ವಳಗೆರೆ ಹಳ್ಳಿಯ ಸುತ್ತ ಕಸದ ರಾಶಿಯನ್ನೇ ಸುರಿಯಲಾಗಿದ್ದು, ಕಾಲರಾ, ಡೆಂಗಿಯಂತಹ ಕಾಯಿಲೆಗಳ ಅಪಾಯ ಎದುರಿಸುತ್ತಿದ್ದಾರೆ ಸಾರ್ವಜನಿಕರು.
‘ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದ್ದು, ಅನಾರೋಗ್ಯಕ್ಕೆ ಈಡಾಗುತ್ತಿದ್ದೇವೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಆರೋಗ್ಯಾಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ’ ಎಂದು ಸ್ಥಳೀಯರು ಅಳಲು ತೋಡಿಕೊಳ್ಳುತ್ತಾರೆ.
‘ಬಡಾವಣೆಗಳು ಸೊಳ್ಳೆ, ಕ್ರಿಮಿ ಕೀಟಗಳು, ಹಾವು ಚೇಳುಗಳ ವಾಸಸ್ಥಾನಗಳಾಗಿ ಮಾರ್ಪಟ್ಟಿವೆ.ಕಿಡಿಗೇಡಿ ಗಳು ಇಲ್ಲಿಗೆ ಕಸ ತಂದು ಬಿಸಾಡುವುದರಿಂದ ದುರ್ವಾಸನೆ ಹೆಚ್ಚಾಗಿದೆ’ ಎಂದು ಸ್ಥಳೀಯರು ದೂರುತ್ತಾರೆ.
ಬಿಬಿಎಂಪಿ ಸದಸ್ಯೆ ಶಾರದಾ ಮುನಿರಾಜು, ‘ಕಸದ ಸಮಸ್ಯೆ ಕುರಿತು ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ, ಅವರು ನಿರ್ಲಕ್ಷಿಸುತ್ತಿದ್ದಾರೆ. ಈ ಬಗ್ಗೆ ಆಯುಕ್ತರ ಗಮನಕ್ಕೆ ತರಲಾಗುವುದು’ ಎಂದು ತಿಳಿಸಿದರು.