ಈ ಸಂಬಂಧ ಮಂಡ್ಯದ ಶಂಕರನಗರ ನಿವಾಸಿ ಬಿ.ಆರ್.ಹೇಮಲತಾ ಅವರು ಬ್ಯಾಟರಾಯನಪುರ ಠಾಣೆಗೆ ದೂರು ಕೊಟ್ಟಿದ್ದಾರೆ. ‘ದೊಡ್ಡಬಳ್ಳಾಪುರದ ಆರ್ಎಲ್ಜೆಐಟಿ ಕಾಲೇಜಿನಲ್ಲಿ ಕೆಲಸ ಮಾಡುವ ನಾನು, ಮಂಡ್ಯಕ್ಕೆ ತೆರಳುವ ಸಲುವಾಗಿ ಜ.13ರ ಸಂಜೆ 4 ಗಂಟೆ ಸುಮಾರಿಗೆ ಸ್ಯಾಟಲೈಟ್ ನಿಲ್ದಾಣಕ್ಕೆ ಬಂದು ಕೆಎಸ್ಆರ್ಟಿಸಿ ಬಸ್ ಹತ್ತಿದ್ದೆ. ಈ ವೇಳೆ ಒಬ್ಬ ಮಹಿಳೆ ನನ್ನ ಪಕ್ಕದಲ್ಲಿ ಬಂದು ಕುಳಿತರೆ, ಇನ್ನೊಬ್ಬಾಕೆ ಪಕ್ಕದಲ್ಲೇ ನಿಂತುಕೊಂಡಿದ್ದಳು’ ಎಂದು ಹೇಮಲತಾ ವಿವರಿಸಿದ್ದಾರೆ.