‘ಯಾವುದೇ ಪಕ್ಷದ ಸರ್ಕಾರವೇ ಇರಲಿ, ಜಯಂತಿಗಳ ಆಚರಣೆಗೆ ತೆಗೆದುಕೊಂಡ ತೀರ್ಮಾನಕ್ಕೆ ಬದ್ಧವಾಗಿರಬೇಕು. ಎಲ್ಲ ಜನಪ್ರತಿನಿಧಿಗಳು ಅದಕ್ಕೆ ಸಮ್ಮತಿಸಬೇಕು. ಟಿಪ್ಪು ಜಯಂತಿಗೆ ಅವರು ಬಂದಿಲ್ಲ, ಇವರು ಬಂದಿಲ್ಲ, ಅವರು ವಿರೋಧಿಸಿದರು, ಇವರು ಸಮರ್ಥಿಸಿದರು ಎಂಬಂತಹ ನಡೆ ಮಹನೀಯರಿಗೆ ಮಾಡುವ ಅಪಚಾರ’ ಎಂದು ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಮತ್ತು ಕಾರ್ಯಕ್ರಮದಿಂದ ದೂರವುಳಿದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ವಿರುದ್ಧ ಹರಿಹಾಯ್ದರು.