‘ನ.14ರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಹೈಕೋರ್ಟ್ ಸಮೀಪದ ಪೋಸ್ಟ್ ಆಫೀಸ್ ಗೇಟ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದೆ. ರಾಜ್ಯಪಾಲರ ವಾಹನ ಬರುತ್ತಿರುವುದಾಗಿ ಸಂದೇಶ ಬಂದಿದ್ದರಿಂದ, ಕೇಂದ್ರ ಗ್ರಂಥಾಲಯದ ಕಡೆಯಿಂದ ಬರುತ್ತಿದ್ದ ವಾಹನಗಳ ಸಂಚಾರ ಕೆಲ ಕಾಲ ಬಂದ್ ಮಾಡಿದೆ. ಆಗ ವೇಗವಾಗಿ ಬಂದ ಟಾಟಾ ಇಂಡಿಗೊ ಕಾರು ನನಗೆ ಡಿಕ್ಕಿ ಹೊಡೆಯಿತು. ಚಾಲಕ ರಭಸವಾಗಿ ಬಾಗಿಲು ತೆಗೆದಾಗ ನನ್ನ ಮರ್ಮಾಂಗಕ್ಕೆ ಪೆಟ್ಟಾಯಿತು. ಕಾರಿನಿಂದ ಇಳಿದ ಇನ್ನಿಬ್ಬರು, ಎಳೆದಾಡಿ ಬಟ್ಟೆ ಹರಿದರು. ಎದೆಗೆ ಒದ್ದು ಹೊರಟು ಹೋದರು’ ಎಂದು ಅವರು ದೂರಿದ್ದಾರೆ.