‘ಕೋವಿಡ್–19 ಹಿನ್ನೆಲೆಯಲ್ಲಿ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳ ಅನ್ವಯವೇ ಗಣ್ಯರ ಪಟ್ಟಿಯನ್ನು ತಯಾರಿಸಲಾಗಿದೆ. ದೇವರ ಮೂರ್ತಿಗೆ ಯಾವ ದಿನ, ಯಾವ ಬಣ್ಣದ ದಿರಿಸು ತೊಡಿಸಬೇಕೆಂಬುದನ್ನು ಅರ್ಚಕರೇ ನಿರ್ಧರಿಸಲಿದ್ದಾರೆ. ಅವರ ತೀರ್ಮಾನವೇ ಅಂತಿಮ. ಯಾರೇ ಪ್ರಭಾವ ಬೀರಿದರೂ ಅದನ್ನು ಬದಲಿಸಲು ಸಾಧ್ಯವಿಲ್ಲ. ಸೋಮವಾರ ಶ್ವೇತವರ್ಣ, ಮಂಗಳವಾರ ಕೆಂಪುಬಣ್ಣ, ಬುಧವಾರ ಹಸಿರು ವರ್ಣದ ಉಡುಗೆ ತೊಡಿಸಲಾಗುತ್ತದೆ. ಹಳದಿ ಮತ್ತು ಕೇಸರಿ ಬಣ್ಣದ ಧಿರಿಸುಗಳನ್ನು ತೊಡಿಸುವ ಬಗ್ಗೆಯೂ ಚಿಂತಿಸಲಾಗಿದೆ’ ಎಂದು ತಿಳಿಸಿದ್ದಾರೆ.