ಬಾರಿ ಅವರ ಕುಟುಂಬದವರ ಮೇಲೆ ಎಲ್ಎಟಿಯ ಇಬ್ಬರು ಉಗ್ರರು ದಾಳಿ ಮಾಡಿದ್ದಾರೆ. ಇದು ಪೂರ್ವಯೋಜಿತ. ವಾಸಿಂ ಅವರು ಭದ್ರತಾ ಅಧಿಕಾರಿಗಳ ಜತೆ ತಮ್ಮ ವಾರ್ಡ್ಗೆ ಭೇಟಿ ನೀಡಿ ಮನೆಗೆ ಹಿಂತಿರುಗಿದ್ದರು. ಆ ಬಳಿಕ ಈ ಅಧಿಕಾರಿಗಳು ತಮ್ಮ ಕೊಠಡಿಗಳಿಗೆ ತೆರಳಿದ್ದು ವಾಸಿ ಅವರು ತಂದೆ ಮತ್ತು ಸೋದರ ಇದ್ದ ಅಂಗಡಿ ಬಳಿ ಹೋಗಿದ್ದರು. ಆಗ ದಾಳಿ ನಡೆದಿದೆ ಎಂದು ಐಜಿಪಿ ವಿಜಯ್ಕುಮಾರ್, ವರದಿಗಾರರಿಗೆ ವಿವರಣೆ ನೀಡಿದ್ದಾರೆ.