<p><strong>ಶ್ರೀನಗರ: </strong>ಉತ್ತರ ಕಾಶ್ಮೀರದ ಬಂಡಿಪೋರಾದಲ್ಲಿ ಸ್ಥಳೀಯ ಬಿಜೆಪಿ ನಾಯಕ ವಾಸಿಂ ಬಾರಿ ಮತ್ತು ಆತನ ಕುಟುಂಬ ಸದಸ್ಯರ ಹತ್ಯೆಯಲ್ಲಿ ಲಷ್ಕರ್ ಎ ತಯಬಾ (ಎಲ್ಇಟಿ) ಕೈವಾಡವಿದೆ ಎಂದು ಪೊಲೀಸರು ಗುರುವಾರ ಹೇಳಿದ್ದಾರೆ.</p>.<p>ಬಿಜೆಪಿ ನಾಯಕನ ಭದ್ರತೆಗಾಗಿ ನೇಮಿಸಿದ್ದ ಎಲ್ಲಾ 10 ಮಂದಿ ಭದ್ರತಾ ಅಧಿಕಾರಿಗಳನ್ನು ವಜಾ ಮಾಡಲಾಗಿದೆ. ಈ 10 ಮಂದಿಯನ್ನು ಬಂಧಿಸಲಾಗಿದ್ದು ಹತ್ಯೆ ಪ್ರಕರಣದ ಬಗ್ಗೆ ವಿಚಾರಣೆ ನಡೆಸಲಾಗಿದೆ.</p>.<p>ಪೊಲೀಸ್ಠಾಣೆ ಸಮೀಪವೇ ಇರುವ ಅಂಗಡಿಯಲ್ಲಿ ವಾಸಿಂ ಬಾರಿ, ಅವರ ತಂದೆ ಬಹಿರ್ ಅಹ್ಮದ್ ಬಾರಿ ಮತ್ತು ಸೋದರ ಉಮರ್ ಬಾರಿ ಅವರು ಇದ್ದಾಗ ಬುಧವಾರ ರಾತ್ರಿ 8.45ರ ವೇಳೆಗೆ ಕೊಲೆಯಾಗಿದ್ದಾರೆ.</p>.<p>ಬಾರಿ ಅವರ ಕುಟುಂಬದವರ ಮೇಲೆ ಎಲ್ಎಟಿಯ ಇಬ್ಬರು ಉಗ್ರರು ದಾಳಿ ಮಾಡಿದ್ದಾರೆ. ಇದು ಪೂರ್ವಯೋಜಿತ. ವಾಸಿಂ ಅವರು ಭದ್ರತಾ ಅಧಿಕಾರಿಗಳ ಜತೆ ತಮ್ಮ ವಾರ್ಡ್ಗೆ ಭೇಟಿ ನೀಡಿ ಮನೆಗೆ ಹಿಂತಿರುಗಿದ್ದರು. ಆ ಬಳಿಕ ಈ ಅಧಿಕಾರಿಗಳು ತಮ್ಮ ಕೊಠಡಿಗಳಿಗೆ ತೆರಳಿದ್ದು ವಾಸಿ ಅವರು ತಂದೆ ಮತ್ತು ಸೋದರ ಇದ್ದ ಅಂಗಡಿ ಬಳಿ ಹೋಗಿದ್ದರು. ಆಗ ದಾಳಿ ನಡೆದಿದೆ ಎಂದು ಐಜಿಪಿ ವಿಜಯ್ಕುಮಾರ್, ವರದಿಗಾರರಿಗೆ ವಿವರಣೆ ನೀಡಿದ್ದಾರೆ.</p>.<p>ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪ್ರಕಾರ ಎಲ್ಇಟಿಯ ಇಬ್ಬರು ಉಗ್ರರು ದಾಳಿ ನಡೆಸಿದ್ದಾರೆ. ಒಬ್ಬನನ್ನು ಸ್ಥಳೀಯ ನಿವಾಸಿ ಅಬಿದ್ ಎಂದು ಮತ್ತೊಬ್ಬ ಹೊರಗಿನಿಂದ ಬಂದಿರುವಾತ ಎಂದು ಗುರುತಿಸಲಾಗಿದೆ. ಅಬಿದ್ ಪಿಸ್ತೂಲಿನಿಂದ ಗುಂಡು ಹಾರಿಸಿದ್ದರೆ, ಇನ್ನೊಬ್ಬಾತ ಆತನಿಗೆ ಸೂಚನೆ ನೀಡುತ್ತಿದ್ದ. ಈ ಇಬ್ಬರನ್ನೂ ಶೀಘ್ರ ಪತ್ತೆಹಚ್ಚಲಾಗುವುದು ಎಂದು ಅವರು ಹೇಳಿದ್ದಾರೆ.</p>.<p>ವಾಸಿಂ ಬಾರಿ ಅವರು 2014ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋತಿದ್ದರು. ಬಳಿಜ ಬಿಜೆಪಿ ಸೇರಿದ್ದು ಜಿಲ್ಲೆಯಲ್ಲಿ ಪಕ್ಷದ ಪ್ರಮುಖ ನಾಯಕನಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಗರ: </strong>ಉತ್ತರ ಕಾಶ್ಮೀರದ ಬಂಡಿಪೋರಾದಲ್ಲಿ ಸ್ಥಳೀಯ ಬಿಜೆಪಿ ನಾಯಕ ವಾಸಿಂ ಬಾರಿ ಮತ್ತು ಆತನ ಕುಟುಂಬ ಸದಸ್ಯರ ಹತ್ಯೆಯಲ್ಲಿ ಲಷ್ಕರ್ ಎ ತಯಬಾ (ಎಲ್ಇಟಿ) ಕೈವಾಡವಿದೆ ಎಂದು ಪೊಲೀಸರು ಗುರುವಾರ ಹೇಳಿದ್ದಾರೆ.</p>.<p>ಬಿಜೆಪಿ ನಾಯಕನ ಭದ್ರತೆಗಾಗಿ ನೇಮಿಸಿದ್ದ ಎಲ್ಲಾ 10 ಮಂದಿ ಭದ್ರತಾ ಅಧಿಕಾರಿಗಳನ್ನು ವಜಾ ಮಾಡಲಾಗಿದೆ. ಈ 10 ಮಂದಿಯನ್ನು ಬಂಧಿಸಲಾಗಿದ್ದು ಹತ್ಯೆ ಪ್ರಕರಣದ ಬಗ್ಗೆ ವಿಚಾರಣೆ ನಡೆಸಲಾಗಿದೆ.</p>.<p>ಪೊಲೀಸ್ಠಾಣೆ ಸಮೀಪವೇ ಇರುವ ಅಂಗಡಿಯಲ್ಲಿ ವಾಸಿಂ ಬಾರಿ, ಅವರ ತಂದೆ ಬಹಿರ್ ಅಹ್ಮದ್ ಬಾರಿ ಮತ್ತು ಸೋದರ ಉಮರ್ ಬಾರಿ ಅವರು ಇದ್ದಾಗ ಬುಧವಾರ ರಾತ್ರಿ 8.45ರ ವೇಳೆಗೆ ಕೊಲೆಯಾಗಿದ್ದಾರೆ.</p>.<p>ಬಾರಿ ಅವರ ಕುಟುಂಬದವರ ಮೇಲೆ ಎಲ್ಎಟಿಯ ಇಬ್ಬರು ಉಗ್ರರು ದಾಳಿ ಮಾಡಿದ್ದಾರೆ. ಇದು ಪೂರ್ವಯೋಜಿತ. ವಾಸಿಂ ಅವರು ಭದ್ರತಾ ಅಧಿಕಾರಿಗಳ ಜತೆ ತಮ್ಮ ವಾರ್ಡ್ಗೆ ಭೇಟಿ ನೀಡಿ ಮನೆಗೆ ಹಿಂತಿರುಗಿದ್ದರು. ಆ ಬಳಿಕ ಈ ಅಧಿಕಾರಿಗಳು ತಮ್ಮ ಕೊಠಡಿಗಳಿಗೆ ತೆರಳಿದ್ದು ವಾಸಿ ಅವರು ತಂದೆ ಮತ್ತು ಸೋದರ ಇದ್ದ ಅಂಗಡಿ ಬಳಿ ಹೋಗಿದ್ದರು. ಆಗ ದಾಳಿ ನಡೆದಿದೆ ಎಂದು ಐಜಿಪಿ ವಿಜಯ್ಕುಮಾರ್, ವರದಿಗಾರರಿಗೆ ವಿವರಣೆ ನೀಡಿದ್ದಾರೆ.</p>.<p>ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪ್ರಕಾರ ಎಲ್ಇಟಿಯ ಇಬ್ಬರು ಉಗ್ರರು ದಾಳಿ ನಡೆಸಿದ್ದಾರೆ. ಒಬ್ಬನನ್ನು ಸ್ಥಳೀಯ ನಿವಾಸಿ ಅಬಿದ್ ಎಂದು ಮತ್ತೊಬ್ಬ ಹೊರಗಿನಿಂದ ಬಂದಿರುವಾತ ಎಂದು ಗುರುತಿಸಲಾಗಿದೆ. ಅಬಿದ್ ಪಿಸ್ತೂಲಿನಿಂದ ಗುಂಡು ಹಾರಿಸಿದ್ದರೆ, ಇನ್ನೊಬ್ಬಾತ ಆತನಿಗೆ ಸೂಚನೆ ನೀಡುತ್ತಿದ್ದ. ಈ ಇಬ್ಬರನ್ನೂ ಶೀಘ್ರ ಪತ್ತೆಹಚ್ಚಲಾಗುವುದು ಎಂದು ಅವರು ಹೇಳಿದ್ದಾರೆ.</p>.<p>ವಾಸಿಂ ಬಾರಿ ಅವರು 2014ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋತಿದ್ದರು. ಬಳಿಜ ಬಿಜೆಪಿ ಸೇರಿದ್ದು ಜಿಲ್ಲೆಯಲ್ಲಿ ಪಕ್ಷದ ಪ್ರಮುಖ ನಾಯಕನಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>