<p><strong>ಮುಂಬೈ: </strong>ದೇಶದಲ್ಲಿರುವ ಕೋವಿಡ್-19 ಸಂಕಷ್ಟ ಶ್ರೀರಾಮನ ಆಶೀರ್ವಾದದಿಂದ ಮಾಯವಾಗಬಹುದು ಎಂದು ಶಿವಸೇನಾ ಹೇಳಿದೆ.<br /><br />ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿದ ಭೂಮಿಪೂಜೆ ಬಗ್ಗೆ ಉಲ್ಲೇಖಿಸಿದ್ದು ನರೇಂದ್ರ ಮೋದಿಯವರು ಭೂಮಿ ಪೂಜೆ ಮಾಡುವುದು ಎಂಬುದು ಸುವರ್ಣ ಗಳಿಗೆ. ಇಲ್ಲಿ ಕೊರೊನಾ ವೈರಸ್ ಇದೆ. ಆದರೆ ಅದು ಶ್ರೀರಾಮನ ಆಶೀರ್ವಾದದಿಂದ ಮಾಯವಾಗಲಿದೆ ಎಂದಿದೆ.</p>.<p>ರಾಮಮಂದಿರ ನಿರ್ಮಾಣಕ್ಕಾಗಿ ಅಭಿಯಾನ ಕೈಗೊಂಡ ನಾಯಕರಾಗಿದ್ದ ಅಡ್ವಾಣಿ ಮತ್ತು ಜೋಷಿ ವಿಡಿಯೊ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮ ವೀಕ್ಷಿಸಲಿದ್ದಾರೆ.</p>.<p>ಕೋವಿಡ್ ಹರಡುತ್ತಿರುವ ಈ ಹೊತ್ತಿನಲ್ಲಿ ಈ ನಾಯಕರಿಬ್ಬರ ವಯಸ್ಸು ಪರಿಗಣಿಸಿ ಕಾರ್ಯಕ್ರಮದಲ್ಲಿ ಭಾಗವಹಿಸದಿರುವುದು ಒಳ್ಳೆಯದು ಎಂದು ಸಲಹೆ ನೀಡಲಾಗಿತ್ತು ಎಂದು ಸಾಮ್ನಾದಲ್ಲಿ ಬರೆಯಲಾಗಿದೆ.</p>.<p>ಬಿಜೆಪಿ ನಾಯಕಿ ಉಮಾ ಭಾರತಿ ಅವರು ಸರಯೂ ನದೀತಟದಲ್ಲಿ ಅವರ ಮನಸ್ಸಿನಿಂದಲೇ ಕಾರ್ಯಕ್ರಮವನ್ನು ವೀಕ್ಷಿಸಲಿದ್ದಾರೆ<br />ಭೂಮಿಪೂಜೆ ಕಾರ್ಯಕ್ರಮದ ಬಗ್ಗೆ ದೇಶ ಉತ್ಸುಕಗೊಂಡಿದೆ. ಕೊರೊನಾವೈರಸ್ ಅಯೋಧ್ಯೆ, ಉತ್ತರ ಪ್ರದೇಶ ಮತ್ತು ಇಡೀ ದೇಶದಲ್ಲಿ ವ್ಯಾಪಿಸಿಕೊಂಡಿದೆ. ಈ ಸಂಕಷ್ಟವು ರಾಮನ ಆಶೀರ್ವಾದದಿಂದ ಮಾಯವಾಗಿ ಹೋಗಲಿದೆ ಎಂದು ಶಿವಸೇನಾ ಹೇಳಿದೆ.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ: </strong>ದೇಶದಲ್ಲಿರುವ ಕೋವಿಡ್-19 ಸಂಕಷ್ಟ ಶ್ರೀರಾಮನ ಆಶೀರ್ವಾದದಿಂದ ಮಾಯವಾಗಬಹುದು ಎಂದು ಶಿವಸೇನಾ ಹೇಳಿದೆ.<br /><br />ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿದ ಭೂಮಿಪೂಜೆ ಬಗ್ಗೆ ಉಲ್ಲೇಖಿಸಿದ್ದು ನರೇಂದ್ರ ಮೋದಿಯವರು ಭೂಮಿ ಪೂಜೆ ಮಾಡುವುದು ಎಂಬುದು ಸುವರ್ಣ ಗಳಿಗೆ. ಇಲ್ಲಿ ಕೊರೊನಾ ವೈರಸ್ ಇದೆ. ಆದರೆ ಅದು ಶ್ರೀರಾಮನ ಆಶೀರ್ವಾದದಿಂದ ಮಾಯವಾಗಲಿದೆ ಎಂದಿದೆ.</p>.<p>ರಾಮಮಂದಿರ ನಿರ್ಮಾಣಕ್ಕಾಗಿ ಅಭಿಯಾನ ಕೈಗೊಂಡ ನಾಯಕರಾಗಿದ್ದ ಅಡ್ವಾಣಿ ಮತ್ತು ಜೋಷಿ ವಿಡಿಯೊ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮ ವೀಕ್ಷಿಸಲಿದ್ದಾರೆ.</p>.<p>ಕೋವಿಡ್ ಹರಡುತ್ತಿರುವ ಈ ಹೊತ್ತಿನಲ್ಲಿ ಈ ನಾಯಕರಿಬ್ಬರ ವಯಸ್ಸು ಪರಿಗಣಿಸಿ ಕಾರ್ಯಕ್ರಮದಲ್ಲಿ ಭಾಗವಹಿಸದಿರುವುದು ಒಳ್ಳೆಯದು ಎಂದು ಸಲಹೆ ನೀಡಲಾಗಿತ್ತು ಎಂದು ಸಾಮ್ನಾದಲ್ಲಿ ಬರೆಯಲಾಗಿದೆ.</p>.<p>ಬಿಜೆಪಿ ನಾಯಕಿ ಉಮಾ ಭಾರತಿ ಅವರು ಸರಯೂ ನದೀತಟದಲ್ಲಿ ಅವರ ಮನಸ್ಸಿನಿಂದಲೇ ಕಾರ್ಯಕ್ರಮವನ್ನು ವೀಕ್ಷಿಸಲಿದ್ದಾರೆ<br />ಭೂಮಿಪೂಜೆ ಕಾರ್ಯಕ್ರಮದ ಬಗ್ಗೆ ದೇಶ ಉತ್ಸುಕಗೊಂಡಿದೆ. ಕೊರೊನಾವೈರಸ್ ಅಯೋಧ್ಯೆ, ಉತ್ತರ ಪ್ರದೇಶ ಮತ್ತು ಇಡೀ ದೇಶದಲ್ಲಿ ವ್ಯಾಪಿಸಿಕೊಂಡಿದೆ. ಈ ಸಂಕಷ್ಟವು ರಾಮನ ಆಶೀರ್ವಾದದಿಂದ ಮಾಯವಾಗಿ ಹೋಗಲಿದೆ ಎಂದು ಶಿವಸೇನಾ ಹೇಳಿದೆ.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>