ಘಟನೆ ಕುರಿತುಮಾತನಾಡಿರುವ ಬುಡಕಟ್ಟು ಸಮುದಾಯದ ನಾಯಕ ಮಂಗಲ್ ರಾಮ್, ‘ಬಾಲಕಿಯು ಹಸುಗಳನ್ನು ಮೇಯಿಸಲು ಸ್ನೇಹಿತೆ ಜೊತೆ ಸೋಮವಾರ ಕಾಡಿಗೆ ಹೋಗಿದ್ದಳು. ಈ ವೇಳೆ ಶಿಬಿರದಿಂದ ಹೊರಬಂದ ಸಿಆರ್ಪಿಎಫ್ ಯೋಧ, ಕಿರುಕುಳ ನೀಡಲು ಆರಂಭಿಸಿದ. ಈ ವೇಳೆ ಆಕೆಯ ಜೊತೆಗಿದ್ದವರು ತಪ್ಪಿಸಿಕೊಂಡು ಓಡಿಹೋಗಿದ್ದು, ಬಾಲಕಿಯ ಮೇಲೆ ಅತ್ಯಾಚಾರವೆಸಗಲಾಗಿದೆ’ ಎಂದು ವಿವರಿಸಿದ್ದಾರೆ.