<p class="title"><strong>ನವದೆಹಲಿ:</strong> ಸಕಾಲದಲ್ಲಿ ತಪಾಸಣೆ ಹಾಗೂ ಪರಿಣಾಮಕಾರಿ ನಿರ್ವಹಣೆಯಿಂದಾಗಿ ದೇಶದಲ್ಲಿ ಕೋವಿಡ್ನಿಂದ ಗುಣಮುಖರಾದವರ ಪ್ರಮಾಣ ಶೇ 62.93ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ.</p>.<p class="title">ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಸಹಯೋಗದಲ್ಲಿ ಕೇಂದ್ರ ಸರ್ಕಾರ ಕೈಗೊಂಡ ನಿರ್ದಿಷ್ಟ ಮತ್ತು ಹೊಂದಾಣಿಕೆ ಆಧಾರಿತ ಕಾರ್ಯಕ್ರಮ ಇದಕ್ಕೆ ಕಾರಣವಾಗಿದೆ. ಭಾರತದಲ್ಲಿ ಸದ್ಯ ಸಕ್ರಿಯ ಪ್ರಕರಣಗಳಿಗಿಂತ ಗುಣಮುಖರಾಗಿರುವವರ ಸಂಖ್ಯೆ 2,42,362ರಿಂದ ಹೆಚ್ಚಾಗಿದೆ ಎಂದು ಇಲಾಖೆಯು ಹೇಳಿದೆ.</p>.<p class="title">ಸಮಗ್ರ ಕಾರ್ಯಯೋಜನೆಯಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಗುಣಮುಖರಾಗುತ್ತಿದ್ದಾರೆ. ಪ್ರಸ್ತುತ ದೇಶದಲ್ಲಿ ಸಕ್ರಿಯ ಪ್ರಕರಣಗಳು 2,42,258 ಇದ್ದರೆ, ಗುಣಮುಖರಾದವರ ಸಂಖ್ಯೆ 5,34,620 ಆಗಿದೆ.ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 19,235 ಮಂದಿ ಗುಣಮುಖರಾಗಿದ್ದಾರೆ ಎಂದೂ ವಿವರಿಸಿದೆ.</p>.<p>ಈ ಮಧ್ಯೆ, ದೇಶದಲ್ಲಿ ಹೊಸದಾಗಿ ಮತ್ತೆ 28,637 ಜನರಿಗೆ ಸೋಂಕು ತಗುಲಿರುವುದು ಭಾನುವಾರ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 8,49,553 ಆಗಿದೆ. ಅಲ್ಲದೆ, ಮತ್ತೆ 551 ಜನರು ಸತ್ತಿದ್ದು, ಮೃತರ ಒಟ್ಟು ಸಂಖ್ಯೆ 22,674ಕ್ಕೆ ಏರಿದೆ ಎಂದು ಮಾಹಿತಿ ನೀಡಿದೆ.</p>.<p>ದೇಶದಲ್ಲಿ ಪ್ರಸ್ತುತ 1,370 ನಿಯೋಜಿತ ಕೋವಿಡ್ ಆಸ್ಪತ್ರೆಗಳು, 3,062 ಆರೋಗ್ಯ ಕೇಂದ್ರಗಳು, 10,334 ಆರೈಕೆ ಕೇಂದ್ರಗಳು ಇವೆ ಎಂದು ವಿವರಿಸಿದೆ.</p>.<p>ಐಸಿಎಂಆರ್ ಮೂಲಗಳ ಪ್ರಕಾರ, ಜುಲೈ 11ರವರೆಗೂ ಒಟ್ಟು 1,15,87,153 ಮಾದರಿಗಳ ಪರೀಕ್ಷೆ ನಡೆದಿವೆ. ಶನಿವಾರ ಒಂದೇ ದಿನ 2,80,151 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ:</strong> ಸಕಾಲದಲ್ಲಿ ತಪಾಸಣೆ ಹಾಗೂ ಪರಿಣಾಮಕಾರಿ ನಿರ್ವಹಣೆಯಿಂದಾಗಿ ದೇಶದಲ್ಲಿ ಕೋವಿಡ್ನಿಂದ ಗುಣಮುಖರಾದವರ ಪ್ರಮಾಣ ಶೇ 62.93ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ.</p>.<p class="title">ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಸಹಯೋಗದಲ್ಲಿ ಕೇಂದ್ರ ಸರ್ಕಾರ ಕೈಗೊಂಡ ನಿರ್ದಿಷ್ಟ ಮತ್ತು ಹೊಂದಾಣಿಕೆ ಆಧಾರಿತ ಕಾರ್ಯಕ್ರಮ ಇದಕ್ಕೆ ಕಾರಣವಾಗಿದೆ. ಭಾರತದಲ್ಲಿ ಸದ್ಯ ಸಕ್ರಿಯ ಪ್ರಕರಣಗಳಿಗಿಂತ ಗುಣಮುಖರಾಗಿರುವವರ ಸಂಖ್ಯೆ 2,42,362ರಿಂದ ಹೆಚ್ಚಾಗಿದೆ ಎಂದು ಇಲಾಖೆಯು ಹೇಳಿದೆ.</p>.<p class="title">ಸಮಗ್ರ ಕಾರ್ಯಯೋಜನೆಯಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಗುಣಮುಖರಾಗುತ್ತಿದ್ದಾರೆ. ಪ್ರಸ್ತುತ ದೇಶದಲ್ಲಿ ಸಕ್ರಿಯ ಪ್ರಕರಣಗಳು 2,42,258 ಇದ್ದರೆ, ಗುಣಮುಖರಾದವರ ಸಂಖ್ಯೆ 5,34,620 ಆಗಿದೆ.ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 19,235 ಮಂದಿ ಗುಣಮುಖರಾಗಿದ್ದಾರೆ ಎಂದೂ ವಿವರಿಸಿದೆ.</p>.<p>ಈ ಮಧ್ಯೆ, ದೇಶದಲ್ಲಿ ಹೊಸದಾಗಿ ಮತ್ತೆ 28,637 ಜನರಿಗೆ ಸೋಂಕು ತಗುಲಿರುವುದು ಭಾನುವಾರ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 8,49,553 ಆಗಿದೆ. ಅಲ್ಲದೆ, ಮತ್ತೆ 551 ಜನರು ಸತ್ತಿದ್ದು, ಮೃತರ ಒಟ್ಟು ಸಂಖ್ಯೆ 22,674ಕ್ಕೆ ಏರಿದೆ ಎಂದು ಮಾಹಿತಿ ನೀಡಿದೆ.</p>.<p>ದೇಶದಲ್ಲಿ ಪ್ರಸ್ತುತ 1,370 ನಿಯೋಜಿತ ಕೋವಿಡ್ ಆಸ್ಪತ್ರೆಗಳು, 3,062 ಆರೋಗ್ಯ ಕೇಂದ್ರಗಳು, 10,334 ಆರೈಕೆ ಕೇಂದ್ರಗಳು ಇವೆ ಎಂದು ವಿವರಿಸಿದೆ.</p>.<p>ಐಸಿಎಂಆರ್ ಮೂಲಗಳ ಪ್ರಕಾರ, ಜುಲೈ 11ರವರೆಗೂ ಒಟ್ಟು 1,15,87,153 ಮಾದರಿಗಳ ಪರೀಕ್ಷೆ ನಡೆದಿವೆ. ಶನಿವಾರ ಒಂದೇ ದಿನ 2,80,151 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>