ಮೊದಲಿಗೆ ಅಗ್ನಿಶಾಮಕ ದಳದ ಎರಡು ವಾಹನಗಳು ಘಟನಾಸ್ಥಳಕ್ಕೆ ಬಂದಿದ್ದು, ಬೆಂಕಿ ಹಬ್ಬುತ್ತಿದ್ದಂತೆ 11 ವಾಹನಗಳನ್ನು ಕಳುಹಿಸಲಾಗಿತ್ತು. ಘಟನಾ ಸ್ಥಳದ ಬಳಿ ನೀರಿಗೆ ಪರದಾಡಬೇಕಾದ ಪರಿಸ್ಥಿತಿ ಬಂದೊಗಿದ ಕಾರಣ ಬೆಂಕಿ ನಂದಿಸುವ ಕಾರ್ಯದಲ್ಲಿ ಅಡಚಣೆ ಆಯಿತು. ಆಮೇಲೆ 15 ಕಿಮೀ ದೂರದಿಂದ ನೀರಿನ ಟ್ಯಾಂಕರ್ ಬಳಸಿ ನೀರು ತಂದಿದ್ದೇವೆ.ಬೆಳಗ್ಗೆ 7 ಗಂಟೆ ಹೊತ್ತಿಗೆ ಬೆಂಕಿ ನಿಯಂತ್ರಣಕ್ಕೆ ಬಂದಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಹೇಳಿದ್ದಾರೆ.