ನವದೆಹಲಿ:ಪ್ರವಾಸಿ ವೀಸಾದಡಿ ದೇಶಕ್ಕೆ ಬಂದು ಧರ್ಮ ಪ್ರಚಾರ ಮಾಡಿ ನಿಯಮ ಉಲ್ಲಂಘಿಸಿದ್ದ ಆರೋಪದಡಿ ದೋಷಾರೋಪಪಟ್ಟಿ ದಾಖಲಾಗಿದ್ದ 8 ದೇಶಗಳ 76 ತಬ್ಲೀಗ್ ಜಮಾತ್ ಸದಸ್ಯರಿಗೆ ದೆಹಲಿ ನ್ಯಾಯಾಲಯ ಗುರುವಾರ ಜಾಮೀನು ನೀಡಿದೆ.
ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಗುರ್ಮೋಹಿನಾ ಕೌರ್, ಪ್ರತಿಯೊಬ್ಬರು ₹10 ಸಾವಿರ ವೈಯಕ್ತಿಕ ಬಾಂಡ್ ನೀಡುವಂತೆ ಆದೇಶಿಸಿದ್ದಾರೆ.
ಈ ಪ್ರಕರಣದಲ್ಲಿ, ಈವರೆಗೆಮೂವತ್ತು ದೇಶಗಳ 289 ಪ್ರಜೆಗಳಿಗೆ ಜಾಮೀನು ದೊರಕಿದೆ.ಈ ಪ್ರಕರಣ ಸಂಬಂಧ,ಕಳೆದ ಜೂನ್ನಲ್ಲಿ 36 ದೇಶಗಳ 956 ವಿದೇಶಿ ಪ್ರಜೆಗಳ ವಿರುದ್ಧ 59 ದೋಷಾರೋಪ ಪಟ್ಟಿಯನ್ನು ಪೊಲೀಸರು ದಾಖಲಿಸಿದ್ದರು.