ಕರಾಚಿ: ಇಲ್ಲಿರುವ 200 ವರ್ಷ ಹಳೆಯ ಹಿಂದೂ ದೇವಾಲಯವು, ಈ ಪ್ರದೇಶದ ಮುಸ್ಲಿಂ ಯುವಕರಿಗೆ ಜೀವನೋಪಾಯಕ್ಕೆ ದಾರಿಯಾಗಿದೆ.
ದೇವಸ್ಥಾನಕ್ಕೆ ಬರುವ ಹಿಂದೂಗಳು ಸಮುದ್ರಕ್ಕೆ ಚಿನ್ನ–ಬೆಳ್ಳಿಯಂತಹ ವಸ್ತುಗಳನ್ನು ಎಸೆಯುವುದು ಪದ್ಧತಿ. ಇವನ್ನು ಮುಸ್ಲಿಂ ಯುವಕರು ಹೆಕ್ಕಿ ತೆಗೆಯುತ್ತಾರೆ’ ಎನ್ನುತ್ತಾರೆ ಶಫೀಕ್.
ಕರಾಚಿ ಬಂದರಿಗೆ ಸಮೀಪವಿರುವ ಲಕ್ಷ್ಮಿ ನಾರಾಯಣ ಮಂದಿರಕ್ಕೆ ಹಬ್ಬದ ಸಂದರ್ಭದಲ್ಲಿ ಸಾವಿರಾರು ಹಿಂದೂಗಳು ಭೇಟಿ ನೀಡುತ್ತಾರೆ. ಸಮುದ್ರಕ್ಕೆ ಸಮೀಪವಿರುವ ಏಕೈಕ ದೇವಸ್ಥಾನ ಇದಾಗಿದೆ. ಹೀಗಾಗಿ ಇಲ್ಲಿ ಹಲವು ಪೂಜೆಗಳು, ಅಂತ್ಯಸಂಸ್ಕಾರದ ಪ್ರಕ್ರಿಯೆ ನಡೆಯುತ್ತವೆ.