‘ಪಾಕಿಸ್ತಾನಕ್ಕಾಗಿ ಕನೇರಿಯಾ ಅನೇಕ ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಆದರೂ ಅವರ ಮೇಲೆ ದೌರ್ಜನ್ಯ ನಡೆಯುತ್ತಿತ್ತು ಎಂಬುದು ನಾಚಿಕೆಗೇಡಿನ ವಿಷಯ. ಭಾರತದಲ್ಲಿ ಮೊಹಮ್ಮದ್ ಕೈಫ್, ಇರ್ಫಾನ್ ಪಠಾಣ್, ಮುನಾಫ್ ಪಟೇಲ್ ಮುಂತಾದವರು ಗೌರವದಿಂದ ಆಡಿದ್ದಾರೆ. ಪಟೇಲ್ ಮತ್ತು ನಾನು ಗೆಳೆಯರಾಗಿದ್ದೆವು. ದೇಶಕ್ಕಾಗಿ ಇಬ್ಬರೂ ಅತ್ಯುತ್ಸಾಹದಿಂದ ಆಡಿದ್ದೇವೆ’ ಎಂದು ಭಾರತ ತಂಡದ ಆರಂಭಿಕ ಬ್ಯಾಟ್ಸ್ಮನ್ ಆಗಿದ್ದ ಗಂಭೀರ್ ಹೇಳಿದ್ದಾರೆ.