ಫ್ರಾನ್ಸ್ನ ದೈನಿಕ ‘ಲು ಮೊಂಡ್’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಜೈಶಂಕರ್, ‘ಉಗ್ರರನ್ನು ಪೋಷಿಸುತ್ತಿರುವಪಾಕಿಸ್ತಾನದ ಜತೆಗೆ ಸಂಬಂಧ ‘ಕಷ್ಟಸಾಧ್ಯ’. ಭಾರತಕ್ಕೆ ಉಗ್ರರನ್ನು ಕಳುಹಿಸುತ್ತಿರುವುದರ ಬಗ್ಗೆ ಪಾಕಿಸ್ತಾನ ನಿರಾಕರಿಸುವುದಿಲ್ಲ. ತನ್ನ ನೆಲದಲ್ಲಿ ಭಯೋತ್ಪಾದನೆ ಎಂಬ ಕೈಗಾರಿಕೆ ಅಭಿವೃದ್ಧಿಪಡಿಸಿರುವ ಪಾಕಿಸ್ತಾನ, ಭಯೋತ್ಪಾದಕರನ್ನು ಭಾರತಕ್ಕೆ ಕಳುಹಿಸುತ್ತಿದೆ’ ಎಂದಿದ್ದಾರೆ.