ಉಡುಪಿ: ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರು ಶನಿವಾರ ಉಡುಪಿಯ (ನಾರ್ತ್) ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿದರು.
‘ಚುನಾವಣಾ ಆಯೋಗದ ಆದೇಶದಂತೆ ಗೋಪ್ಯ ಮತದಾನಕ್ಕೆ ಬದ್ಧನಾಗಿ ಮತ ಚಲಾಯಿಸಿದ್ದೇನೆ. ದೇಶ ಹಾಗೂ ರಾಜ್ಯಕ್ಕೆ ಒಳಿತಾಗಲಿ ಎಂದು ಶ್ರೀಕೃಷ್ಣನನ್ನು ಪ್ರಾರ್ಥಿಸಿದ್ದೇನೆ. ಜನರ ಹಾಗೂ ದೇವರ ಇಚ್ಛೆಯಂತೆ ಫಲಿತಾಂಶ ಬರಲಿದೆ’ ಎಂದು ಹೇಳಿದರು.