<p><strong>ವಾಷಿಂಗ್ಟನ್</strong>: ಭಾರತ ಸಂಜಾತ ಟೆಕಿಯೊಬ್ಬರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಗುಂಡಿಕ್ಕಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಅಮೆರಿಕದ ಲೊವಾದಲ್ಲಿ ನಡೆದಿದೆ.</p>.<p>ಲೊವಾ ರಾಜ್ಯದ ವೆಸ್ಟ್ ಡೆಸ್ ಮೊಯಿನೆಸ್ ನಗರದ ತಮ್ಮ ಮನೆಯಲ್ಲಿಯೇ ಆಂಧ್ರ ಪ್ರದೇಶ ಮೂಲದ ಚಂದ್ರಶೇಖರ್ ಸುಂಕರಾ (44), ಲಾವಣ್ಯಾ ಸುಂಕರಾ (41) ಹಾಗೂ 15 ವರ್ಷ, 10 ವರ್ಷದ ಮಕ್ಕಳ ಮೃತದೇಹಗಳು ಪತ್ತೆಯಾಗಿವೆ ಎಂದು ನಗರದ ಪೊಲೀಸರು ತಿಳಿಸಿದ್ದಾರೆ.</p>.<p>ಶನಿವಾರ ಬೆಳಿಗ್ಗೆ ಈ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮರಣೋತ್ತರ ಪರೀಕ್ಷೆ ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯದ ಮಾಹಿತಿ ಆಧರಿಸಿ, ‘ಈ ಕೊಲೆಯನ್ನು ಚಂದ್ರಶೇಖರ್ ಅವರೇ ಮಾಡಿ, ಬಳಿಕ ತಾವು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂಬ ತೀರ್ಮಾನಕ್ಕೆ ಪೊಲೀಸರು ಭಾನುವಾರ ಬಂದಿದ್ದಾರೆ.</p>.<p>ನಾಲ್ವರ ಮೃತದೇಹಗಳಲ್ಲೂ ಗುಂಡೇಟಿನ ಗಾಯಗಳಿದ್ದು, ಅವರೆಲ್ಲರೂ ಅದರಿಂದಲೇ ಮೃತಪಟ್ಟಿದ್ದಾರೆ ಎಂದು ರಾಜ್ಯ ವೈದ್ಯಾಧಿಕಾರಿ ಕಚೇರಿ ತಿಳಿಸಿದೆ. ಈ ಕೃತ್ಯಕ್ಕೆ ಕಾರಣವೇನು? ಪ್ರಚೋದನಾಕಾರಿ ಅಂಶಗಳಾವವು ಎಂಬುದರ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ.</p>.<p>ಲೊವಾದ ಸಾರ್ವಜನಿಕ ಸುರಕ್ಷಾ ಇಲಾಖೆಯ ತಂತ್ರಜ್ಞಾನ ಸೇವಾ ಕೇಂದ್ರದಲ್ಲಿ ಐಟಿ ಉದ್ಯೋಗಿಯಾಗಿ ಚಂದ್ರಶೇಖರ್ ಕೆಲಸ ಮಾಡುತ್ತಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಾಷಿಂಗ್ಟನ್</strong>: ಭಾರತ ಸಂಜಾತ ಟೆಕಿಯೊಬ್ಬರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಗುಂಡಿಕ್ಕಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಅಮೆರಿಕದ ಲೊವಾದಲ್ಲಿ ನಡೆದಿದೆ.</p>.<p>ಲೊವಾ ರಾಜ್ಯದ ವೆಸ್ಟ್ ಡೆಸ್ ಮೊಯಿನೆಸ್ ನಗರದ ತಮ್ಮ ಮನೆಯಲ್ಲಿಯೇ ಆಂಧ್ರ ಪ್ರದೇಶ ಮೂಲದ ಚಂದ್ರಶೇಖರ್ ಸುಂಕರಾ (44), ಲಾವಣ್ಯಾ ಸುಂಕರಾ (41) ಹಾಗೂ 15 ವರ್ಷ, 10 ವರ್ಷದ ಮಕ್ಕಳ ಮೃತದೇಹಗಳು ಪತ್ತೆಯಾಗಿವೆ ಎಂದು ನಗರದ ಪೊಲೀಸರು ತಿಳಿಸಿದ್ದಾರೆ.</p>.<p>ಶನಿವಾರ ಬೆಳಿಗ್ಗೆ ಈ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮರಣೋತ್ತರ ಪರೀಕ್ಷೆ ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯದ ಮಾಹಿತಿ ಆಧರಿಸಿ, ‘ಈ ಕೊಲೆಯನ್ನು ಚಂದ್ರಶೇಖರ್ ಅವರೇ ಮಾಡಿ, ಬಳಿಕ ತಾವು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂಬ ತೀರ್ಮಾನಕ್ಕೆ ಪೊಲೀಸರು ಭಾನುವಾರ ಬಂದಿದ್ದಾರೆ.</p>.<p>ನಾಲ್ವರ ಮೃತದೇಹಗಳಲ್ಲೂ ಗುಂಡೇಟಿನ ಗಾಯಗಳಿದ್ದು, ಅವರೆಲ್ಲರೂ ಅದರಿಂದಲೇ ಮೃತಪಟ್ಟಿದ್ದಾರೆ ಎಂದು ರಾಜ್ಯ ವೈದ್ಯಾಧಿಕಾರಿ ಕಚೇರಿ ತಿಳಿಸಿದೆ. ಈ ಕೃತ್ಯಕ್ಕೆ ಕಾರಣವೇನು? ಪ್ರಚೋದನಾಕಾರಿ ಅಂಶಗಳಾವವು ಎಂಬುದರ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ.</p>.<p>ಲೊವಾದ ಸಾರ್ವಜನಿಕ ಸುರಕ್ಷಾ ಇಲಾಖೆಯ ತಂತ್ರಜ್ಞಾನ ಸೇವಾ ಕೇಂದ್ರದಲ್ಲಿ ಐಟಿ ಉದ್ಯೋಗಿಯಾಗಿ ಚಂದ್ರಶೇಖರ್ ಕೆಲಸ ಮಾಡುತ್ತಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>