<p><strong>ನವದೆಹಲಿ</strong>: ಜಿಎಸ್ಟಿಯಲ್ಲಿ ಲಾಭಕೋರತನ ನಿಯಮದಡಿ ಸಂಗ್ರಹಿಸುವ ದಂಡವು ಕೇಂದ್ರ ಮತ್ತು ಸಂಬಂಧಪಟ್ಟ ರಾಜ್ಯಗಳಿಗೆ ಸಮಾನ ಹಂಚಿಕೆಯಾಗಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.</p>.<p>ತೆರಿಗೆ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದೇ ಇರುವುದನ್ನು ಪತ್ತೆ ಮಾಡಲು ಲಾಭಕೋರತನ ತಡೆ ಪ್ರಾಧಿಕಾರ ಜಾರಿಗೆ ತರಲಾಗಿದೆ. ಇಂತಹವರಿಗೆ ದಂಡ ವಿಧಿಸುವ, ಪರವಾನಗಿ ರದ್ದು ಪಡಿಸುವ ಅಧಿಕಾರವನ್ನು ಪ್ರಾಧಿಕಾರ ಹೊಂದಿದೆ.</p>.<p>ಒಂದೊಮ್ಮೆ ತೆರಿಗೆ ಪ್ರಯೋಜನದ ಲಾಭದಿಂದ ಯಾರು ವಂಚಿತರಾಗಿದ್ದಾರೆ ಎನ್ನುವುದನ್ನು ಗುರುತಿಸಲು ಸಾಧ್ಯವಾಗದೇ ಇದ್ದರೆ ನಿರ್ದಿಷ್ಟ ಮೊತ್ತವನ್ನು ಗ್ರಾಹಕರ ಕಲ್ಯಾಣ ನಿಧಿಗೆ ವರ್ಗಾಯಿಸುವಂತೆ ಪ್ರಾಧಿಕಾರ ಸಲಹೆ ನೀಡಬಹುದು.</p>.<p>ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಜಿಎಸ್ಟಿ ನಿಯಮದಲ್ಲಿ ತಿದ್ದುಪಡಿ ತರಲಾಗಿದೆ. ಶೇ 50 ರಷ್ಟು ಮೊತ್ತವನ್ನು ಗ್ರಾಹಕರ ಕಲ್ಯಾಣ ನಿಧಿಗೆ ಹಾಗೂ ಇನ್ನುಳಿದ ಮೊತ್ತವನ್ನು ಸಂಬಂಧಪಟ್ಟ ರಾಜ್ಯವು ಸ್ಥಾಪಿಸಿರುವ ನಿಧಿಗೆ ವರ್ಗಾವಣೆ ಮಾಡಬೇಕು.</p>.<p><strong>ಲಾಭಕೋರತನ ತಡೆ ಪ್ರಾಧಿಕಾರ:</strong> ಗ್ರಾಹಕರಿಗೆ ವ್ಯವಸ್ಥೆಯ ಬಗ್ಗೆ ಭರವಸೆ ಮೂಡಿಸುವ ಉದ್ದೇಶದಿಂದ ಈ ಪ್ರಾಧಿಕಾರ ರಚನೆ ಮಾಡಲಾಗಿದೆ. ‘ಜಿಎಸ್ಟಿ’ಯಲ್ಲಿ ಕಡಿತ ಮಾಡಲಾದ ತೆರಿಗೆ ದರಗಳನ್ನು ಯಾವುದೇ ಸಂಸ್ಥೆಯು ಬಳಕೆದಾರರಿಗೆ ವರ್ಗಾಯಿಸದೇ ಇದ್ದರೆ ಆ ಬಗ್ಗೆ ಗ್ರಾಹಕರು ಪ್ರಾಧಿಕಾರಕ್ಕೆ ದೂರು ಸಲ್ಲಿಸಬಹುದು.</p>.<p>ಸ್ಥಳೀಯ ದೂರಗಳನ್ನು ಮೊದಲಿಗೆ ರಾಜ್ಯಮಟ್ಟದ ಪರಿಶೀಲನಾ ಸಮಿತಿಗೆ ಸಲ್ಲಿಸಬೇಕಾಗುತ್ತದೆ. ರಾಷ್ಟ್ರೀಯ ಮಟ್ಟದ ದೂರುಗಳನ್ನು ಪ್ರಾಧಿಕಾರದ ‘ಸ್ಥಾಯಿ ಸಮಿತಿ’ಯ ಗಮನಕ್ಕೆ ತರಲಾಗುತ್ತಿದೆ.</p>.<p>ದೂರಿನಲ್ಲಿ ಸತ್ಯಾಂಶ ಇರುವುದು ಕಂಡು ಬಂದರೆ ಈ ಸಮಿತಿಗಳು ಇನ್ನಷ್ಟು ಮಾಹಿತಿ ಸಂಗ್ರಹಿಸಲು ಸುರಕ್ಷತಾ ಮಹಾ ನಿರ್ದೆಶಕರಿಗೆ (ಡಿಜಿಎಸ್) ಶಿಫಾರಸು ಮಾಡಲಿವೆ. ಸುರಕ್ಷತಾ ಮಹಾ ನಿರ್ದೇಶಕರು ತನಿಖೆ ಪೂರ್ಣಗೊಳಿಸಿ ಮೂರು ತಿಂಗಳಲ್ಲಿ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಜಿಎಸ್ಟಿಯಲ್ಲಿ ಲಾಭಕೋರತನ ನಿಯಮದಡಿ ಸಂಗ್ರಹಿಸುವ ದಂಡವು ಕೇಂದ್ರ ಮತ್ತು ಸಂಬಂಧಪಟ್ಟ ರಾಜ್ಯಗಳಿಗೆ ಸಮಾನ ಹಂಚಿಕೆಯಾಗಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.</p>.<p>ತೆರಿಗೆ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದೇ ಇರುವುದನ್ನು ಪತ್ತೆ ಮಾಡಲು ಲಾಭಕೋರತನ ತಡೆ ಪ್ರಾಧಿಕಾರ ಜಾರಿಗೆ ತರಲಾಗಿದೆ. ಇಂತಹವರಿಗೆ ದಂಡ ವಿಧಿಸುವ, ಪರವಾನಗಿ ರದ್ದು ಪಡಿಸುವ ಅಧಿಕಾರವನ್ನು ಪ್ರಾಧಿಕಾರ ಹೊಂದಿದೆ.</p>.<p>ಒಂದೊಮ್ಮೆ ತೆರಿಗೆ ಪ್ರಯೋಜನದ ಲಾಭದಿಂದ ಯಾರು ವಂಚಿತರಾಗಿದ್ದಾರೆ ಎನ್ನುವುದನ್ನು ಗುರುತಿಸಲು ಸಾಧ್ಯವಾಗದೇ ಇದ್ದರೆ ನಿರ್ದಿಷ್ಟ ಮೊತ್ತವನ್ನು ಗ್ರಾಹಕರ ಕಲ್ಯಾಣ ನಿಧಿಗೆ ವರ್ಗಾಯಿಸುವಂತೆ ಪ್ರಾಧಿಕಾರ ಸಲಹೆ ನೀಡಬಹುದು.</p>.<p>ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಜಿಎಸ್ಟಿ ನಿಯಮದಲ್ಲಿ ತಿದ್ದುಪಡಿ ತರಲಾಗಿದೆ. ಶೇ 50 ರಷ್ಟು ಮೊತ್ತವನ್ನು ಗ್ರಾಹಕರ ಕಲ್ಯಾಣ ನಿಧಿಗೆ ಹಾಗೂ ಇನ್ನುಳಿದ ಮೊತ್ತವನ್ನು ಸಂಬಂಧಪಟ್ಟ ರಾಜ್ಯವು ಸ್ಥಾಪಿಸಿರುವ ನಿಧಿಗೆ ವರ್ಗಾವಣೆ ಮಾಡಬೇಕು.</p>.<p><strong>ಲಾಭಕೋರತನ ತಡೆ ಪ್ರಾಧಿಕಾರ:</strong> ಗ್ರಾಹಕರಿಗೆ ವ್ಯವಸ್ಥೆಯ ಬಗ್ಗೆ ಭರವಸೆ ಮೂಡಿಸುವ ಉದ್ದೇಶದಿಂದ ಈ ಪ್ರಾಧಿಕಾರ ರಚನೆ ಮಾಡಲಾಗಿದೆ. ‘ಜಿಎಸ್ಟಿ’ಯಲ್ಲಿ ಕಡಿತ ಮಾಡಲಾದ ತೆರಿಗೆ ದರಗಳನ್ನು ಯಾವುದೇ ಸಂಸ್ಥೆಯು ಬಳಕೆದಾರರಿಗೆ ವರ್ಗಾಯಿಸದೇ ಇದ್ದರೆ ಆ ಬಗ್ಗೆ ಗ್ರಾಹಕರು ಪ್ರಾಧಿಕಾರಕ್ಕೆ ದೂರು ಸಲ್ಲಿಸಬಹುದು.</p>.<p>ಸ್ಥಳೀಯ ದೂರಗಳನ್ನು ಮೊದಲಿಗೆ ರಾಜ್ಯಮಟ್ಟದ ಪರಿಶೀಲನಾ ಸಮಿತಿಗೆ ಸಲ್ಲಿಸಬೇಕಾಗುತ್ತದೆ. ರಾಷ್ಟ್ರೀಯ ಮಟ್ಟದ ದೂರುಗಳನ್ನು ಪ್ರಾಧಿಕಾರದ ‘ಸ್ಥಾಯಿ ಸಮಿತಿ’ಯ ಗಮನಕ್ಕೆ ತರಲಾಗುತ್ತಿದೆ.</p>.<p>ದೂರಿನಲ್ಲಿ ಸತ್ಯಾಂಶ ಇರುವುದು ಕಂಡು ಬಂದರೆ ಈ ಸಮಿತಿಗಳು ಇನ್ನಷ್ಟು ಮಾಹಿತಿ ಸಂಗ್ರಹಿಸಲು ಸುರಕ್ಷತಾ ಮಹಾ ನಿರ್ದೆಶಕರಿಗೆ (ಡಿಜಿಎಸ್) ಶಿಫಾರಸು ಮಾಡಲಿವೆ. ಸುರಕ್ಷತಾ ಮಹಾ ನಿರ್ದೇಶಕರು ತನಿಖೆ ಪೂರ್ಣಗೊಳಿಸಿ ಮೂರು ತಿಂಗಳಲ್ಲಿ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>