ಇಲ್ಲಿನ ಹಿಂದವಾಡಿಯಲ್ಲಿ ಅವರು ವಾಸವಾಗಿದ್ದರು. ರಾಜೇಂದ್ರ ಹಂಜಿ ಅವರು ತಮ್ಮ ತಂದೆ ವಿ.ಸಿ.ಹಂಜಿ ಅವರ ನಿಧನದ ನಂತರ ಕೆಎಲ್ಇ ನಿರ್ದೇಶಕರಾಗಿದ್ದರು. ಉಪಾಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು.ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಅವರ ಅಂತ್ಯಕ್ರಿಯೆ ಭಾನುವಾರ ಬೆಳಿಗ್ಗೆ ಸ್ವಗ್ರಾಮ ಖಾನಾಪುರ ತಾಲ್ಲೂಕಿನ ಹಲಸಿ ಗ್ರಾಮದಲ್ಲಿ ನಡೆಯಲಿದೆ ಎಂದು ಸಮೀಪವರ್ತಿಗಳು ತಿಳಿಸಿದ್ದಾರೆ.