ಯಲ್ಲಾಪುರ: ವನವಾಸಿ ಜನಾಂಗಗಳ ಉನ್ನತಿಗೆ ಶ್ರಮಿಸಿದ ಶಾಂತಾರಾಮ ಸಿದ್ದಿ ಅವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ಲಭಿಸಿರುವುದು ವನವಾಸಿ ಜನಾಂಗದ ಅಭಿವೃದ್ಧಿಗೆ ಕಾರಣವಾಗಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ತಾಲ್ಲೂಕಿನ ಹಿತ್ಲಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪುರ್ಲೇಮನೆಯಲ್ಲಿರುವ ಶಾಂತಾರಾಮ ಸಿದ್ದಿ ಅವರ ಮನೆಗೆ ಭೇಟಿ ನೀಡಿ, ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಬುಡಕಟ್ಟು ಜನಾಂಗದಲ್ಲಿ ಜನಿಸಿದರೂ ಸ್ವತಃ ಅಕ್ಷರ ಕಲಿತು, ಅಕ್ಷರ ಹಂಚುವ ಕಾರ್ಯ ಮಾಡುತ್ತಿರುವ ಇವರನ್ನು ಮೇಲ್ಮನೆಗೆ ಆಯ್ಕೆ ಮಾಡಿದ್ದು ಸಮಂಜಸವಾಗಿದೆ. ವಿಧಾನ ಪರಿಷತ್ತಿನಲ್ಲಿ ವನವಾಸಿ ಜನಾಂಗದ ಅಭಿವೃದ್ಧಿ ಪರವಾದ ಧ್ವನಿ ಕೇಳಲಿ ಎಂದರು.
ಶಾಂತಾರಾಮ ಸಿದ್ದಿ ಅವರು ನಳಿನ್ ಕುಮಾರ್ ಅವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಪ್ರಮುಖರಾದ ಅರುಣ ಕುಮಾರ, ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯ್ಕ, ತಾಲ್ಲೂಕು ಘಟಕದ ಅಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ್, ರಾಜ್ಯ ಘಟಕದ ವಕ್ತಾರ ಪ್ರಮೋದ ಹೆಗಡೆ, ಪ್ರಮುಖರಾದ ಎಂ.ಜಿ.ಭಟ್ಟ ಸಂಕದಗುಂಡಿ, ಗಣಪತಿ ಮಾನಿಗದ್ದೆ, ಪ್ರಸಾದ ಹೆಗಡೆ, ಗಣೇಶ ಹೆಗಡೆ, ರೇಖಾ ಭಟ್ಟ, ರಾಧಾ ಹೆಗಡೆ, ವನವಾಸಿ ಪ್ರಮುಖರಾದ ದೋಂಡು ಪಾಟೀಲ್, ವಿಠ್ಠು ಪಾಂಡ್ರಮೀಸೆ, ಇದ್ದರು.