ಕೊರೊನಾ ವೈರಸ್ ನಮ್ಮ ಆರೋಗ್ಯದ ಜೊತೆಗೆ ಮನಸ್ಸಿನ ಮೇಲೂ ಪರಿಣಾಮ ಉಂಟು ಮಾಡಿದ್ದು, ಅದನ್ನು ಹೇಗೆ ನಿಭಾಯಿಸಬೇಕು ಎಂದು ಮನೋವೈದ್ಯ/ನಿದ್ರಾರೋಗ ತಜ್ಞ ಡಾ. ಸತೀಶ್ ರಾಮಯ್ಯ ತಿಳಿಸಿದ್ದಾರೆ.
ಕೊರೊನಾ ಸೋಂಕು ಹರಡುತ್ತಿರುವ ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರದ ನಿರ್ದೇಶನಗಳನ್ನು ಪಾಲಿಸುವುದರೊಟ್ಟಿಗೆಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದುಮುಖ್ಯ ಎಂದಿರುವ ಅವರು, ನಕಾರಾತ್ಮಕ ಯೋಚನೆಗಳನ್ನು ಪರಿಹರಿಸುವುದು ಹೇಗೆ ಎಂಬ ಸಲಹೆಗಳನ್ನು ನೀಡಿದ್ದಾರೆ.