<p>ಕಾಳಗಿ: ತಾಲ್ಲೂಕಿನ ಕೋಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಂಠಾಣ ದೊಡ್ಡ ತಾಂಡಾ ಸಮೀಪದ ಸರ್ವೆ ನಂಬರ್ 16/2ರಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ 2019-20ನೇ ಸಾಲಿನಲ್ಲಿ ಅಂದಾಜು ₹1ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಚೆಕ್ ಡ್ಯಾಂ ಅವೈಜ್ಞಾನಿಕವಾಗಿದೆ ಮತ್ತು ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂದು ರೈತರು ಆರೋಪಿಸಿದ್ದಾರೆ.</p>.<p>ಚೆಕ್ ಡ್ಯಾಂನಲ್ಲಿ ನಿಲ್ಲಬೇಕಾದ ನೀರು ಪಕ್ಕದ ಹೊಲಕ್ಕೆ ಹರಿಯುತ್ತಿದೆ. ಇದರಿಂದಾಗಿ ಎರಡು ಎಕರೆ ಬೆಳೆ ನಷ್ಟವಾಗುತ್ತಿದೆ. ಕಳೆದ ವರ್ಷ ಮುಂಗಾರು ಬೆಳೆ ಸಂಪೂರ್ಣ ಹಾಳಾಗಿ ಹೋಗಿದೆ. ಅದರಂತೆ ಈ ವರ್ಷ ಮೊದಲ ಮಳೆಗೆ ಚೆಕ್ ಡ್ಯಾಂನ ಗೇಟುಗಳು ಮುಚ್ಚಿಬಿಟ್ಟಿವೆ. ಈ ಪರಿಣಾಮ ನೀರು ಹೊಲಕ್ಕೆ ನುಗ್ಗಿ ಎರಡು ಎಕರೆಯಲ್ಲಿ ಮಾಡಿದ್ದ ಮುಂಗಾರು ಬಿತ್ತನೆ ನಷ್ಟವಾಗಿ ಪುನಃ ಬಿತ್ತನೆ ಮಾಡುವ ಪ್ರಸಂಗ ತಲೆದೋರಿದೆ ಎಂದು ಹೊಲದ ಮಾಲೀಕರು ತಿಳಿಸಿದ್ದಾರೆ.</p>.<p>ಡ್ಯಾಂನ ಬಲದಂಡೆಗೆ ಮಾಡಿದ ಪಿಚ್ಚಿಂಗ್ ಕೆಲಸ ಕಳಪೆಯಾಗಿರುವುದೇ ಈ ಅವಾಂತರಕ್ಕೆ ಮುಖ್ಯ ಕಾರಣ. ಈ ಕಾಮಗಾರಿಯನ್ನು 2019ನೇ ಸಾಲಿನ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಯಾವುದೇ ಮೇಲಧಿಕಾರಿಗಳ ನಿಯಮಿತ ಭೇಟಿ ಇಲ್ಲದೆ ಕೇವಲ ಒಬ್ಬ ವರ್ಕ್ ಇನ್ಸ್ಪೆಕ್ಟರ್ ನಿಗರಾಣಿಯಲ್ಲಿ ತರಾತುರಿಯಲ್ಲಿ ಮಾಡಿ ಮುಗಿಸಿದ್ದಾರೆ ಎಂದು ರೈತರು ದೂರಿದ್ದಾರೆ.</p>.<p>ಡ್ಯಾಂ ನಿರ್ಮಾಣ ಸಮಯದಲ್ಲಿ ಎರಡು ಎಕರೆಯಷ್ಟು ಸಾಗುವಳಿ ಜಮೀನನ್ನು ಪೂರ್ತಿ ಬಗೆದು ಕಳೆದ ವರ್ಷ ಬಿತ್ತನೆಗೆ ಅಡಚಣೆ ಮಾಡಿರುತ್ತಾರೆ. ಒಟ್ಟಿನಲ್ಲಿ ಹೇಳುವುದಾದರೆ ಈ ಚೆಕ್ ಡ್ಯಾಂ ಅವೈಜ್ಞಾನಿಕವಾಗಿ ನಿರ್ಮಿಸಿದ್ದರಿಂದ ಇತ್ತ ಹೊಲದವರಿಗೂ ನಷ್ಟವಾಗುತ್ತಿದ್ದು, ಅತ್ತ ಬೇರೆಯವರಿಗೂ ಉಪಯೋಗವಾಗದೆ ಕೇವಲ ಬಿಲ್ ಮಂಜೂರು ಮಾಡಿಸಿಕೊಳ್ಳಲು ನಿರ್ಮಿಸಿದಂತಾಗಿದೆ ಎಂದು ರೈತರು ಗಂಭೀರ ಆರೋಪ ಮಾಡಿದ್ದಾರೆ.</p>.<p>ಈ ಕಾಮಗಾರಿ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಇಡೀ ಕಾಮಗಾರಿಯ ಪ್ರತ್ಯಕ್ಷದರ್ಶಿ ಹಾಗೂ ರೈತ ವಿಶ್ವನಾಥ ಪಾಟೀಲ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಾಳಗಿ: ತಾಲ್ಲೂಕಿನ ಕೋಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಂಠಾಣ ದೊಡ್ಡ ತಾಂಡಾ ಸಮೀಪದ ಸರ್ವೆ ನಂಬರ್ 16/2ರಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ 2019-20ನೇ ಸಾಲಿನಲ್ಲಿ ಅಂದಾಜು ₹1ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಚೆಕ್ ಡ್ಯಾಂ ಅವೈಜ್ಞಾನಿಕವಾಗಿದೆ ಮತ್ತು ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂದು ರೈತರು ಆರೋಪಿಸಿದ್ದಾರೆ.</p>.<p>ಚೆಕ್ ಡ್ಯಾಂನಲ್ಲಿ ನಿಲ್ಲಬೇಕಾದ ನೀರು ಪಕ್ಕದ ಹೊಲಕ್ಕೆ ಹರಿಯುತ್ತಿದೆ. ಇದರಿಂದಾಗಿ ಎರಡು ಎಕರೆ ಬೆಳೆ ನಷ್ಟವಾಗುತ್ತಿದೆ. ಕಳೆದ ವರ್ಷ ಮುಂಗಾರು ಬೆಳೆ ಸಂಪೂರ್ಣ ಹಾಳಾಗಿ ಹೋಗಿದೆ. ಅದರಂತೆ ಈ ವರ್ಷ ಮೊದಲ ಮಳೆಗೆ ಚೆಕ್ ಡ್ಯಾಂನ ಗೇಟುಗಳು ಮುಚ್ಚಿಬಿಟ್ಟಿವೆ. ಈ ಪರಿಣಾಮ ನೀರು ಹೊಲಕ್ಕೆ ನುಗ್ಗಿ ಎರಡು ಎಕರೆಯಲ್ಲಿ ಮಾಡಿದ್ದ ಮುಂಗಾರು ಬಿತ್ತನೆ ನಷ್ಟವಾಗಿ ಪುನಃ ಬಿತ್ತನೆ ಮಾಡುವ ಪ್ರಸಂಗ ತಲೆದೋರಿದೆ ಎಂದು ಹೊಲದ ಮಾಲೀಕರು ತಿಳಿಸಿದ್ದಾರೆ.</p>.<p>ಡ್ಯಾಂನ ಬಲದಂಡೆಗೆ ಮಾಡಿದ ಪಿಚ್ಚಿಂಗ್ ಕೆಲಸ ಕಳಪೆಯಾಗಿರುವುದೇ ಈ ಅವಾಂತರಕ್ಕೆ ಮುಖ್ಯ ಕಾರಣ. ಈ ಕಾಮಗಾರಿಯನ್ನು 2019ನೇ ಸಾಲಿನ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಯಾವುದೇ ಮೇಲಧಿಕಾರಿಗಳ ನಿಯಮಿತ ಭೇಟಿ ಇಲ್ಲದೆ ಕೇವಲ ಒಬ್ಬ ವರ್ಕ್ ಇನ್ಸ್ಪೆಕ್ಟರ್ ನಿಗರಾಣಿಯಲ್ಲಿ ತರಾತುರಿಯಲ್ಲಿ ಮಾಡಿ ಮುಗಿಸಿದ್ದಾರೆ ಎಂದು ರೈತರು ದೂರಿದ್ದಾರೆ.</p>.<p>ಡ್ಯಾಂ ನಿರ್ಮಾಣ ಸಮಯದಲ್ಲಿ ಎರಡು ಎಕರೆಯಷ್ಟು ಸಾಗುವಳಿ ಜಮೀನನ್ನು ಪೂರ್ತಿ ಬಗೆದು ಕಳೆದ ವರ್ಷ ಬಿತ್ತನೆಗೆ ಅಡಚಣೆ ಮಾಡಿರುತ್ತಾರೆ. ಒಟ್ಟಿನಲ್ಲಿ ಹೇಳುವುದಾದರೆ ಈ ಚೆಕ್ ಡ್ಯಾಂ ಅವೈಜ್ಞಾನಿಕವಾಗಿ ನಿರ್ಮಿಸಿದ್ದರಿಂದ ಇತ್ತ ಹೊಲದವರಿಗೂ ನಷ್ಟವಾಗುತ್ತಿದ್ದು, ಅತ್ತ ಬೇರೆಯವರಿಗೂ ಉಪಯೋಗವಾಗದೆ ಕೇವಲ ಬಿಲ್ ಮಂಜೂರು ಮಾಡಿಸಿಕೊಳ್ಳಲು ನಿರ್ಮಿಸಿದಂತಾಗಿದೆ ಎಂದು ರೈತರು ಗಂಭೀರ ಆರೋಪ ಮಾಡಿದ್ದಾರೆ.</p>.<p>ಈ ಕಾಮಗಾರಿ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಇಡೀ ಕಾಮಗಾರಿಯ ಪ್ರತ್ಯಕ್ಷದರ್ಶಿ ಹಾಗೂ ರೈತ ವಿಶ್ವನಾಥ ಪಾಟೀಲ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>