ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೊಭಾಲ್–ಸಾದ್ ಸಭೆಯ ಔಚಿತ್ಯವೇನು?

ತಬ್ಲೀಗ್‌ ಸಮಾವೇಶಕ್ಕೆ ಅನುಮತಿ ನೀಡಿದ್ದೇಕೆ– ಮಹಾರಾಷ್ಟ್ರ ಸಚಿವ ದೇಶ್‌ಮುಖ್ ಪ್ರಶ್ನೆ
Last Updated 8 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ಮುಂಬೈ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಹಾಗೂ ತಬ್ಲೀಗ್‌ ಜಮಾತ್ ಮುಖ್ಯಸ್ಥ ಮೌಲಾನಾ ಸಾದ್ ಮಧ್ಯೆ ನಡೆದ ಮಧ್ಯರಾತ್ರಿ ಸಭೆಯ ಔಚಿತ್ಯವೇನು ಎಂದು ಮಹಾರಾಷ್ಟ್ರ ಸರ್ಕಾರ ಪ್ರಶ್ನಿಸಿದೆ.

‘ನಿಜಾಮುದ್ದೀನ್ ಪೊಲೀಸ್ ಠಾಣೆಗೆ ಕಣ್ಣಳತೆ ದೂರದಲ್ಲಿರುವ ಮರ್ಕಜ್‌ನಲ್ಲಿ ಸಮಾವೇಶ ನಡೆಸಲು ಅನುಮತಿ ನೀಡಿದ್ದಾದರೂ ಹೇಗೆ’ ಎಂದು ಮಹಾರಾಷ್ಟ್ರದ ಗೃಹಸಚಿವ, ಎನ್‌ಸಿಪಿಯ ಅನಿಲ್ ದೇಶ್‌ಮುಖ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಡೊಭಾಲ್ ಹಾಗೂ ಸಾದ್ ನಡುವಿನ ಮಾತುಕತೆಯ ವಿಷಯ ಏನು ಎಂದು ದೇಶ್‌ಮುಖ್ ತಿಳಿಯ ಬಯಸಿದ್ದಾರೆ.

ಸಾದ್‌ ಪತ್ತೆ: ಈ ಮಧ್ಯೆ ದೆಹಲಿ ಪೊಲೀಸರು ಮೌಲಾನಾ ಸಾದ್ ಇರುವ ಸ್ಥಳವನ್ನು ಪತ್ತೆ ಹಚ್ಚಿದ್ದಾರೆ. ಅವರು ದೆಹಲಿಯ ಆಗ್ನೇಯ ಭಾಗದ ಜಾಕೀರ್‌ನಗರದಲ್ಲಿದ್ದಾರೆ. ಪ್ರತ್ಯೇಕ ವಾಸದ ಅವಧಿ ಮುಗಿದ ಬಳಿಕ ತನಿಖೆಗೆ ಸಹಕರಿಸಲಿದ್ದಾರೆ ಎಂದು ಸಾದ್‌ ಅವರ ಪರ ವಕೀಲರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT