<p class="title"><strong>ತಿರುವನಂತಪುರ:</strong> ಮಾಟಮಂತ್ರಕ್ಕೆ ಸಂಬಂಧಿಸಿದ ಪ್ರಕರಣಗಳಿಂದ ಎಚ್ಚೆತ್ತಿರುವ ಕೇರಳ ಸರ್ಕಾರ, ಮೂಢನಂಬಿಕೆ ತಡೆ ಕಾಯ್ದೆ ಜಾರಿಗೆ ಮುಂದಾಗಿದೆ. ಮೂಢನಂಬಿಕೆ ಹೆಸರಿನಲ್ಲಿ ನಡೆಯುತ್ತಿರುವ ಅಮಾನವೀಯ ಘಟನೆಗಳನ್ನು ನಿಗ್ರಹಿಸುವುದು ಕಾಯ್ದೆಯ ಉದ್ದೇಶ.</p>.<p class="title">ವಾಮಾಚಾರ, ಮೂಢನಂಬಿಕೆ, ಅಮಾನವೀಯ ದುಷ್ಟ ಆಚರಣೆಗಳ ತಡೆ ಹಾಗೂ ನಿರ್ಮೂಲನೆ 2019 ಮಸೂದೆಯ ಕರಡು ಸಿದ್ಧವಾಗಿದ್ದು, ಸರ್ಕಾರದ ಪರಿಶೀಲನೆಯಲ್ಲಿದೆ. 2017ರಲ್ಲಿ ಕರ್ನಾಟಕ ಹಾಗೂ 2013ರಲ್ಲಿ ಮಹಾರಾಷ್ಟ್ರ ಸರ್ಕಾರಗಳು ಜಾರಿಗೊಳಿಸಿದ್ದ ಮೂಢನಂಬಿಕೆ ತಡೆ ಕಾಯ್ದೆಯ ಅಂಶಗಳನ್ನು ಆಧರಿಸಿ ಕೇರಳ ಕಾನೂನು ಪರಿಷತ್ ಕರಡು ಸಿದ್ಧಪಡಿಸಿದೆ.</p>.<p class="Subhead">ಮಸೂದೆಯಲ್ಲಿ ಏನಿದೆ:</p>.<p class="title">ಮೂಢನಂಬಿಕೆ ಹೆಸರಿನಲ್ಲಿ ವಂಚನೆ ಎಸಗುವುದು ಸೇರಿದಂತೆ ಅಮಾನವೀಯ ಆಚರಣೆಗಳಿಗೆ ಕಠಿಣ ಶಿಕ್ಷೆ ವಿಧಿಸುವ ಪ್ರಸ್ತಾವ ಮಸೂದೆಯಲ್ಲಿದೆ. ಮೋಸದ ಆಚರಣೆಗಳಿಗೆ ಜನರು ಬಲಿಯಾಗದಂತೆ ರಕ್ಷಿಸಲು ಸಾಮಾಜಿಕ ಜಾಗೃತಿ ಮೂಡಿಸುವ ಉದ್ದೇಶವನ್ನು ಮಸೂದೆ ಒತ್ತಿ ಹೇಳುತ್ತದೆ. ಹೊಂದಿದೆ.</p>.<p class="title">ಕೇರಳ ಜನರ ಮನಸಿನಲ್ಲಿ ಮೂಢನಂಬಿಕೆ ಆಳವಾಗಿ ಬೇರೂರಿದೆ. ಜಾಗೃತಿ ಕಾರ್ಯಕ್ರಮ ಜಾರಿಗೆ ಮಸೂದೆಯಲ್ಲಿ ಹೆಚ್ಚು ಒತ್ತು ನೀಡಲಾಗಿದೆ ಎಂದುಕೇರಳ ಕಾನೂನು ಸುಧಾರಣಾ ಪರಿಷತ್ ಉಪಾಧ್ಯಕ್ಷ ಕೆ.ಶಶಿಧರನ್ ಹೇಳಿದರು.</p>.<p class="title">ಮೂಢನಂಬಿಕೆಯ ಹಲವು ಪ್ರಕರಣಗಳು ಜರುಗುತ್ತಿದ್ದರೂ ನಮ್ಮದು ನಾಗರಿಕ ಸಮಾಜ ಎಂದು ಕರೆಯಲು ಹೇಗೆ ಸಾಧ್ಯ? ಮಾಧ್ಯಮಗಳಲ್ಲಿ ಕೆಲವು ಪ್ರಕರಣಗಳು ಮಾತ್ರ ವರದಿಯಾಗುತ್ತಿವೆ’ ಎಂದು ಮಾಜಿ ಕಾನೂನು ಕಾರ್ಯದರ್ಶಿ ನಾಯರ್ ಹೇಳಿದರು.</p>.<p><strong>ಅಪರಾಧ, ಶಿಕ್ಷೆ ಮತ್ತು ವಿನಾಯಿತಿ</strong></p>.<p>*ಬಹಿಷ್ಕಾರ ಹೇರಿಕೆ, ಬೆತ್ತಲೆ ಮೆರವಣಿಗೆಗೆ ಒತ್ತಾಯಿಸಿದರೆ ಶಿಕ್ಷೆ</p>.<p>* ಭೂತ ಬಿಡಿಸುವ ಹೆಸರಿನಲ್ಲಿ ದೌರ್ಜನ್ಯ ಎಸಗುವುದು ಶಿಕ್ಷಾರ್ಹ ಅಪರಾಧ</p>.<p>* ಮುಟ್ಟಿನ ಅವಧಿ ಹಾಗೂ ಪ್ರಸವದ ನಂತರ ಮಹಿಳೆಯನ್ನು ಒಂಟಿಯಾಗಿಸಿದರೆ ಸಜೆ</p>.<p>* ಒಂದು ವರ್ಷದಿಂದ 7 ವರ್ಷದವರೆಗೆ ಸೆರೆವಾಸಕ್ಕೆ ಅವಕಾಶ</p>.<p>* ₹5 ಸಾವಿರದಿಂದ ₹50 ಸಾವಿರದವರೆಗೆ ದಂಡ</p>.<p>* ಧಾರ್ಮಿಕ ಸ್ಥಳ, ಮನೆಗಳಲ್ಲಿ ನಡೆಯುವ ಪೂಜೆ, ಹಬ್ಬ, ಆಚರಣೆಗಳಿಗೆ ವಿನಾಯಿತಿ</p>.<p>* ಯಾರಿಗೂ ತೊಂದರೆಯಾಗದಂತೆ ದೇಗುಲ, ಚರ್ಚ್, ಮಸೀದಿ, ಇತರೆ ಧಾರ್ಮಿಕ ಸ್ಥಳಗಳಲ್ಲಿ ನಡೆಯುವ ಆಚರಣೆಗಳಿಗೆ ಅಡ್ಡಿಯಿಲ್ಲ</p>.<p>* ಧಾರ್ಮಿಕ ಮೆರವಣಿಗೆ, ಪ್ರಾರ್ಥನೆಗೆ ನಿರ್ಬಂಧ ಇಲ್ಲ</p>.<p>* ವಂಚನೆ ಉದ್ದೇಶವಿಲ್ಲದ ಜ್ಯೋತಿಷಕ್ಕೆ ವಿನಾಯಿತಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ತಿರುವನಂತಪುರ:</strong> ಮಾಟಮಂತ್ರಕ್ಕೆ ಸಂಬಂಧಿಸಿದ ಪ್ರಕರಣಗಳಿಂದ ಎಚ್ಚೆತ್ತಿರುವ ಕೇರಳ ಸರ್ಕಾರ, ಮೂಢನಂಬಿಕೆ ತಡೆ ಕಾಯ್ದೆ ಜಾರಿಗೆ ಮುಂದಾಗಿದೆ. ಮೂಢನಂಬಿಕೆ ಹೆಸರಿನಲ್ಲಿ ನಡೆಯುತ್ತಿರುವ ಅಮಾನವೀಯ ಘಟನೆಗಳನ್ನು ನಿಗ್ರಹಿಸುವುದು ಕಾಯ್ದೆಯ ಉದ್ದೇಶ.</p>.<p class="title">ವಾಮಾಚಾರ, ಮೂಢನಂಬಿಕೆ, ಅಮಾನವೀಯ ದುಷ್ಟ ಆಚರಣೆಗಳ ತಡೆ ಹಾಗೂ ನಿರ್ಮೂಲನೆ 2019 ಮಸೂದೆಯ ಕರಡು ಸಿದ್ಧವಾಗಿದ್ದು, ಸರ್ಕಾರದ ಪರಿಶೀಲನೆಯಲ್ಲಿದೆ. 2017ರಲ್ಲಿ ಕರ್ನಾಟಕ ಹಾಗೂ 2013ರಲ್ಲಿ ಮಹಾರಾಷ್ಟ್ರ ಸರ್ಕಾರಗಳು ಜಾರಿಗೊಳಿಸಿದ್ದ ಮೂಢನಂಬಿಕೆ ತಡೆ ಕಾಯ್ದೆಯ ಅಂಶಗಳನ್ನು ಆಧರಿಸಿ ಕೇರಳ ಕಾನೂನು ಪರಿಷತ್ ಕರಡು ಸಿದ್ಧಪಡಿಸಿದೆ.</p>.<p class="Subhead">ಮಸೂದೆಯಲ್ಲಿ ಏನಿದೆ:</p>.<p class="title">ಮೂಢನಂಬಿಕೆ ಹೆಸರಿನಲ್ಲಿ ವಂಚನೆ ಎಸಗುವುದು ಸೇರಿದಂತೆ ಅಮಾನವೀಯ ಆಚರಣೆಗಳಿಗೆ ಕಠಿಣ ಶಿಕ್ಷೆ ವಿಧಿಸುವ ಪ್ರಸ್ತಾವ ಮಸೂದೆಯಲ್ಲಿದೆ. ಮೋಸದ ಆಚರಣೆಗಳಿಗೆ ಜನರು ಬಲಿಯಾಗದಂತೆ ರಕ್ಷಿಸಲು ಸಾಮಾಜಿಕ ಜಾಗೃತಿ ಮೂಡಿಸುವ ಉದ್ದೇಶವನ್ನು ಮಸೂದೆ ಒತ್ತಿ ಹೇಳುತ್ತದೆ. ಹೊಂದಿದೆ.</p>.<p class="title">ಕೇರಳ ಜನರ ಮನಸಿನಲ್ಲಿ ಮೂಢನಂಬಿಕೆ ಆಳವಾಗಿ ಬೇರೂರಿದೆ. ಜಾಗೃತಿ ಕಾರ್ಯಕ್ರಮ ಜಾರಿಗೆ ಮಸೂದೆಯಲ್ಲಿ ಹೆಚ್ಚು ಒತ್ತು ನೀಡಲಾಗಿದೆ ಎಂದುಕೇರಳ ಕಾನೂನು ಸುಧಾರಣಾ ಪರಿಷತ್ ಉಪಾಧ್ಯಕ್ಷ ಕೆ.ಶಶಿಧರನ್ ಹೇಳಿದರು.</p>.<p class="title">ಮೂಢನಂಬಿಕೆಯ ಹಲವು ಪ್ರಕರಣಗಳು ಜರುಗುತ್ತಿದ್ದರೂ ನಮ್ಮದು ನಾಗರಿಕ ಸಮಾಜ ಎಂದು ಕರೆಯಲು ಹೇಗೆ ಸಾಧ್ಯ? ಮಾಧ್ಯಮಗಳಲ್ಲಿ ಕೆಲವು ಪ್ರಕರಣಗಳು ಮಾತ್ರ ವರದಿಯಾಗುತ್ತಿವೆ’ ಎಂದು ಮಾಜಿ ಕಾನೂನು ಕಾರ್ಯದರ್ಶಿ ನಾಯರ್ ಹೇಳಿದರು.</p>.<p><strong>ಅಪರಾಧ, ಶಿಕ್ಷೆ ಮತ್ತು ವಿನಾಯಿತಿ</strong></p>.<p>*ಬಹಿಷ್ಕಾರ ಹೇರಿಕೆ, ಬೆತ್ತಲೆ ಮೆರವಣಿಗೆಗೆ ಒತ್ತಾಯಿಸಿದರೆ ಶಿಕ್ಷೆ</p>.<p>* ಭೂತ ಬಿಡಿಸುವ ಹೆಸರಿನಲ್ಲಿ ದೌರ್ಜನ್ಯ ಎಸಗುವುದು ಶಿಕ್ಷಾರ್ಹ ಅಪರಾಧ</p>.<p>* ಮುಟ್ಟಿನ ಅವಧಿ ಹಾಗೂ ಪ್ರಸವದ ನಂತರ ಮಹಿಳೆಯನ್ನು ಒಂಟಿಯಾಗಿಸಿದರೆ ಸಜೆ</p>.<p>* ಒಂದು ವರ್ಷದಿಂದ 7 ವರ್ಷದವರೆಗೆ ಸೆರೆವಾಸಕ್ಕೆ ಅವಕಾಶ</p>.<p>* ₹5 ಸಾವಿರದಿಂದ ₹50 ಸಾವಿರದವರೆಗೆ ದಂಡ</p>.<p>* ಧಾರ್ಮಿಕ ಸ್ಥಳ, ಮನೆಗಳಲ್ಲಿ ನಡೆಯುವ ಪೂಜೆ, ಹಬ್ಬ, ಆಚರಣೆಗಳಿಗೆ ವಿನಾಯಿತಿ</p>.<p>* ಯಾರಿಗೂ ತೊಂದರೆಯಾಗದಂತೆ ದೇಗುಲ, ಚರ್ಚ್, ಮಸೀದಿ, ಇತರೆ ಧಾರ್ಮಿಕ ಸ್ಥಳಗಳಲ್ಲಿ ನಡೆಯುವ ಆಚರಣೆಗಳಿಗೆ ಅಡ್ಡಿಯಿಲ್ಲ</p>.<p>* ಧಾರ್ಮಿಕ ಮೆರವಣಿಗೆ, ಪ್ರಾರ್ಥನೆಗೆ ನಿರ್ಬಂಧ ಇಲ್ಲ</p>.<p>* ವಂಚನೆ ಉದ್ದೇಶವಿಲ್ಲದ ಜ್ಯೋತಿಷಕ್ಕೆ ವಿನಾಯಿತಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>