ನವದೆಹಲಿ:ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್,ಪ್ರಧಾನಿ ನರೇಂದ್ರ ಮೋದಿ ಅವರನ್ನು ಜರ್ಮನಿ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ಗೆ ಹೋಲಿಸಿ ವಾಗ್ದಾಳಿ ನಡೆಸಿದ್ದಾರೆ.
‘ಮುಗ್ಧರನ್ನು ಬಡಿಯಲು ಹಾಗೂ ಕೊಲ್ಲಲು ಹಿಟ್ಲರ್ ಗೂಂಡಾಗಳನ್ನು ಬಳಸುತ್ತಿದ್ದ. ನಂತರ ಪೊಲೀಸರನ್ನು ಉಪಯೋಗಿಸಿಕೊಂಡು ಅಮಾಯಕರ ಮೇಲೆ ಪ್ರಕರಣಗಳನ್ನು ದಾಖಲಿಸಲಾಗುತ್ತಿತ್ತು. ಮೋದಿ ಜೀ ಅವರು ಅದೇ ಕೆಲಸವನ್ನು ಮಾಡುತ್ತಿದ್ದಾರೆ. ಅಧಿಕಾರಕ್ಕಾಗಿ ಹಿಟ್ಲರ್ ತಂತ್ರವನ್ನು ಅನುಸರಿಸುತ್ತಿದ್ದಾರೆ’ ಎಂದು ಕಿಡಿ ಕಾರಿದ್ದಾರೆ.
ಗುರುಗ್ರಾಮದ ಧಾಮಸ್ಪುರ್ ಎಂಬ ಹಳ್ಳಿಯಲ್ಲಿ ಮುಸ್ಲಿಂ ಕುಟುಂಬವೊಂದರ ಮೇಲೆ ಗುಂಪು ದಾಳಿ ನಡೆಸುತ್ತಿರವ ವಿಡಿಯೊ ವೈರಲ್ ಆದ ಬಳಿಕಕೇಜ್ರಿವಾಲ್ ಈ ರೀತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮನೆಯ ಹೊರಾಂಗಣದಲ್ಲಿ ಕ್ರಿಕೆಟ್ ಆಡುತ್ತಿದ್ದ ಕುಟುಂಬದವರನ್ನು ಕೆಣಗಿದಆರೋಪಿ ಯುವಕರು, ‘ಪಾಕಿಸ್ತಾನಕ್ಕೆ ಹೋಗಿ ಆಟವಾಡಿ’ ಎಂದು ಹೇಳಿದ್ದಾರೆ. ಬಳಿಕ ಗಲಾಟೆ ಆರಂಭವಾಗಿ, ಕಟುಂಬದವರ ಮೇಲೆ ಹಲ್ಲೆ ನಡೆಸಲಾಗಿತ್ತು. ಅದರ ವಿಡಿಯೊ ವೈರಲ್ ಆಗಿತ್ತು.