ಆರೋಪಿಗಳಿಬ್ಬರೂ 10 ದಿನಗಳ ಹಿಂದೆ ಮುಂಬೈನಿಂದ ವಾಪಸಾಗಿದ್ದರು. ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಬೇರೆ ಊರಿನಿಂದ ಬಂದ ಇವರ ಬಗ್ಗೆ ಬಬ್ಲು ಕುಮಾರ್ ಎಂಬ 20 ವರ್ಷದ ಯುವಕ ಜಿಲ್ಲಾ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಇದನ್ನು ಆಧಿರಿಸಿ ಊರಿಗೆ ಬಂದ ವೈದ್ಯರ ತಂಡ ಸುಧೀರ್ ಮಹತೊ ಮತ್ತು ಮುನ್ನಾ ಮಹತೊ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದರು. ಮೂರು ದಿನಗಳ ಬಳಿಕ ಇಬ್ಬರಿಗೂ ಕೊರೊನಾ ತಗುಲಿಲ್ಲ ಎಂದು ವರದಿ ಬಂದಿತ್ತು.