ರಾಮಮಂದಿರ ನಿರ್ಮಾಣ ವಿಷಯವೇ ಉಭಯ ಪಕ್ಷಗಳ ಮೈತ್ರಿಯ ಸಮಾನ ಅಂಶ ಎಂದಿರುವ ಉದ್ಧವ್ ಠಾಕ್ರೆ, ಸದ್ಯದಲ್ಲೇ ಅದು ನೆರವೇರಲಿದೆ ಎಂದು ಹೇಳಿದ್ದಾರೆ. ಒಂದೇ ಸಿದ್ಧಾಂತ ಹೊಂದಿರುವ ಎರಡೂ ಪಕ್ಷಗಳು ರಾಷ್ಟ್ರದ ಹಿತದೃಷ್ಟಿಯಿಂದ ಒಟ್ಟಿಗೆ ಇರಬೇಕು ಎಂಬುದು ಜನರ ಆಶಯವಾಗಿತ್ತು ಎಂದು ಮಹಾರಾಷ್ಟ್ರ ಮುಖ್ಯ ಮಂತ್ರಿ ದೇವೇಂದ್ರ ಫಡಣವೀಸ್ ಹೇಳಿದ್ದಾರೆ.