ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ 8 ರಾಜ್ಯಗಳಿಗೆ 14,108.58 ಕೋಟಿ ನೀಡಲಾಗಿದೆ. ಇದರಲ್ಲಿ ಮಹಾರಾಷ್ಟ್ರಕ್ಕೆ 3,431.22 ಕೋಟಿ , ಕರ್ನಾಟಕಕ್ಕೆ ₹3,196.80 ಕೋಟಿ, ಒಡಿಶಾ ರಾಜ್ಯಕ್ಕೆ ₹3114.46 ಕೋಟಿ ನೀಡಲಾಗಿದೆ. ಕೇಂದ್ರ ಸರ್ಕಾರವು ಎಲ್ಲ ರಾಜ್ಯಗಳ ವಿಪತ್ತು ಪರಿಹಾರ ನಿಧಿಗೆ ₹10,429.32 ಕೋಟಿ ಬಿಡುಗಡೆ ಮಾಡಿದೆ. ಇದರಲ್ಲಿ ಕರ್ನಾಟಕಕ್ಕೆ 304 ಕೋಟಿ ಲಭಿಸಿದೆ.