<p><strong>ಅಯೋಧ್ಯಾ</strong>: ಧ್ವಂಸಗೊಂಡ ಬಾಬರಿ ಮಸೀದಿಯ ಬಳಿ ಇರುವ 4- 5 ಎಕರೆ ಜಮೀನಿನಲ್ಲಿ ಮುಸ್ಲಿಮರ ಗೋರಿ ಇದೆ. ಶ್ರೀರಾಮನ ಮೇಲಿನ ಗೌರವ ಮತ್ತು ಮಾನವೀಯತೆಯ ದೃಷ್ಟಿಯಿಂದ ಆ ಜಮೀನನ್ನು ದೇವಾಲಯ ನಿರ್ಮಾಣಕ್ಕೆ ಬಳಸಬೇಡಿ ಎಂದು ಸುಪ್ರೀಂಕೋರ್ಟ್ನಹಿರಿಯ ನ್ಯಾಯವಾದಿ ಎಂ.ಆರ್ ಶಮ್ಶಾದ್, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ಪತ್ರ ಬರೆದಿದ್ದಾರೆ.</p>.<p>ಅಯೋಧ್ಯೆಯಲ್ಲಿರುವ ಮುಸ್ಲಿಮರ ಪರವಾಗಿ ಶಮ್ಶಾದ್ ಅವರು ಪತ್ರ ಬರೆದಿದ್ದು, ಬಾಬರಿ ಮಸೀದಿಯ ಸುತ್ತಲಿರುವ ಸ್ಮಶಾನದ ಜಮೀನನ್ನು ಸನಾತನ ಧರ್ಮದ ಸಲುವಾಗಿ ಬಿಟ್ಟುಬಿಡಬೇಕು ಎಂದಿದ್ದಾರೆ.<br />ಮುಸ್ಲಿಮರ ಪ್ರಕಾರ ಅಲ್ಲಿರುವ ಸ್ಮಶಾನವು ಗಂಜ್ ಶಹಿದಾನ್ ಎಂದು ಕರೆಯಲ್ಪಡುತ್ತದೆ. 1885ರಲ್ಲಿ ಅಯೋಧ್ಯೆಯಲ್ಲಿ ನಡೆದ ಗಲಭೆಯಲ್ಲಿ ಪ್ರಾಣ ಕಳೆದುಕೊಂಡ 75 ಮುಸ್ಲಿಮರನ್ನು ಇಲ್ಲಿ ದಫನ ಮಾಡಲಾಗಿದೆ. ಫೈಜಾಬಾದ್ ಗಜೆಟಿಯರ್ನಲ್ಲಿಯೂ ಇದರ ಉಲ್ಲೇಖವಿದೆ.</p>.<p>ಕೇಂದ್ರ ಸರ್ಕಾರವು ಸ್ಮಶಾನದ ಜಮೀನನ್ನು ಪರಿಗಣಿಸದೆ ಶ್ರೀರಾಮನಿಗೆ ಬೃಹತ್ ದೇವಾಲಯ ನಿರ್ಮಿಸಲು ಆದೇಶಿಸಿದೆ. ಇದು ಧರ್ಮದ ಉಲ್ಲಂಘನೆ. ಸನಾತನ ಧರ್ಮದ ಪ್ರಕಾರ ಮುಸ್ಲಿಮರ ಗೋರಿ ಮೇಲೆ ಶ್ರೀರಾಮನ ದೇವಾಲಯದ ಅಡಿಪಾಯ ಇರಲು ಸಾಧ್ಯವೇ? ಈ ನಿರ್ಧಾರವನ್ನು ಟ್ರಸ್ಟ್ನ ವ್ಯವಸ್ಥಾಪಕರು ತೆಗೆದುಕೊಳ್ಳಬೇಕಿದೆ ಎಂದು ಪತ್ರದಲ್ಲಿ ಹೇಳಿದೆ.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಯೋಧ್ಯಾ</strong>: ಧ್ವಂಸಗೊಂಡ ಬಾಬರಿ ಮಸೀದಿಯ ಬಳಿ ಇರುವ 4- 5 ಎಕರೆ ಜಮೀನಿನಲ್ಲಿ ಮುಸ್ಲಿಮರ ಗೋರಿ ಇದೆ. ಶ್ರೀರಾಮನ ಮೇಲಿನ ಗೌರವ ಮತ್ತು ಮಾನವೀಯತೆಯ ದೃಷ್ಟಿಯಿಂದ ಆ ಜಮೀನನ್ನು ದೇವಾಲಯ ನಿರ್ಮಾಣಕ್ಕೆ ಬಳಸಬೇಡಿ ಎಂದು ಸುಪ್ರೀಂಕೋರ್ಟ್ನಹಿರಿಯ ನ್ಯಾಯವಾದಿ ಎಂ.ಆರ್ ಶಮ್ಶಾದ್, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ಪತ್ರ ಬರೆದಿದ್ದಾರೆ.</p>.<p>ಅಯೋಧ್ಯೆಯಲ್ಲಿರುವ ಮುಸ್ಲಿಮರ ಪರವಾಗಿ ಶಮ್ಶಾದ್ ಅವರು ಪತ್ರ ಬರೆದಿದ್ದು, ಬಾಬರಿ ಮಸೀದಿಯ ಸುತ್ತಲಿರುವ ಸ್ಮಶಾನದ ಜಮೀನನ್ನು ಸನಾತನ ಧರ್ಮದ ಸಲುವಾಗಿ ಬಿಟ್ಟುಬಿಡಬೇಕು ಎಂದಿದ್ದಾರೆ.<br />ಮುಸ್ಲಿಮರ ಪ್ರಕಾರ ಅಲ್ಲಿರುವ ಸ್ಮಶಾನವು ಗಂಜ್ ಶಹಿದಾನ್ ಎಂದು ಕರೆಯಲ್ಪಡುತ್ತದೆ. 1885ರಲ್ಲಿ ಅಯೋಧ್ಯೆಯಲ್ಲಿ ನಡೆದ ಗಲಭೆಯಲ್ಲಿ ಪ್ರಾಣ ಕಳೆದುಕೊಂಡ 75 ಮುಸ್ಲಿಮರನ್ನು ಇಲ್ಲಿ ದಫನ ಮಾಡಲಾಗಿದೆ. ಫೈಜಾಬಾದ್ ಗಜೆಟಿಯರ್ನಲ್ಲಿಯೂ ಇದರ ಉಲ್ಲೇಖವಿದೆ.</p>.<p>ಕೇಂದ್ರ ಸರ್ಕಾರವು ಸ್ಮಶಾನದ ಜಮೀನನ್ನು ಪರಿಗಣಿಸದೆ ಶ್ರೀರಾಮನಿಗೆ ಬೃಹತ್ ದೇವಾಲಯ ನಿರ್ಮಿಸಲು ಆದೇಶಿಸಿದೆ. ಇದು ಧರ್ಮದ ಉಲ್ಲಂಘನೆ. ಸನಾತನ ಧರ್ಮದ ಪ್ರಕಾರ ಮುಸ್ಲಿಮರ ಗೋರಿ ಮೇಲೆ ಶ್ರೀರಾಮನ ದೇವಾಲಯದ ಅಡಿಪಾಯ ಇರಲು ಸಾಧ್ಯವೇ? ಈ ನಿರ್ಧಾರವನ್ನು ಟ್ರಸ್ಟ್ನ ವ್ಯವಸ್ಥಾಪಕರು ತೆಗೆದುಕೊಳ್ಳಬೇಕಿದೆ ಎಂದು ಪತ್ರದಲ್ಲಿ ಹೇಳಿದೆ.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>