ಕಳೆದ ವಾರ ಕೊಚ್ಚಿಯಲ್ಲಿ ನಡೆದ ತಮಿಳು ಬ್ರಾಹ್ಮಣರ ಜಾಗತಿಕ ಸಭೆಯಲ್ಲಿ ಚಿತಾಂಬರೇಶ್ ಅವರು, ‘ಕೇವಲ ಜಾತಿ ಆಧಾರಿತ ಮೀಸಲಾತಿ ಅಗತ್ಯವೇ ಎನ್ನುವುದು ಚರ್ಚೆಯಾಗಬೇಕು. ನಾನು ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸುತ್ತಿಲ್ಲ. ಬ್ರಾಹ್ಮಣರಲ್ಲಿ ಎಲ್ಲ ರೀತಿಯ ಉತ್ತಮ ಗುಣಗಳಿವೆ. ಹೀಗಾಗಿ, ಎಂದಿಗೂ ಉನ್ನತ ಸ್ಥಾನದಲ್ಲಿದ್ದು ಎಲ್ಲವನ್ನೂ ನಿಯಂತ್ರಿಸುವ ಅಧಿಕಾರ ಹೊಂದಿರಬೇಕು’ ಎಂದು ಅವರು ಹೇಳಿದ್ದರು.