ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌, ಬಿಜೆಪಿ ಭರ್ಜರಿ ಪ್ರಚಾರ

Last Updated 5 ಮೇ 2018, 11:36 IST
ಅಕ್ಷರ ಗಾತ್ರ

ಗದಗ: ಸ್ಥಳೀಯ ಎಪಿಎಂಸಿ ಮಾರು ಕಟ್ಟೆ ವರ್ತಕರಿಂದ ಗದಗ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಕೆ.ಪಾಟೀಲರ ಪರವಾಗಿ ಪ್ರಚಾರ ಸಭೆ ನಡೆಯಿತು.ಕೃಷಿ ಹಾಗೂ ಮಾರುಕಟ್ಟೆಯಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾರ್ಯಗಳನ್ನು ಪ್ರಮುಖವಾಗಿ ಇಟ್ಟುಕೊಂಡು ಎಚ್.ಕೆ.ಪಾಟೀಲ ಅವರು ವರ್ತಕರಲ್ಲಿ ಮತ ಯಾಚನೆ ಮಾಡಿದರು.

ಮಾಜಿ ಶಾಸಕ ಡಿ.ಆರ್.ಪಾಟೀಲ, ಪರಪ್ಪ ಉಮಚಗಿ, ಶೇಖಣ್ಣ ಗದ್ದಿಕೇರಿ, ತಾತನಗೌಡ ಪಾಟೀಲ, ಚಂದ್ರು ಬಾಳಿಹಳ್ಳಿಮಠ, ಬಸಣ್ಣ ಮಲ್ಲಾಡದ, ವಿ.ಸಿ.ರಾಮನಕೊಪ್ಪ, ಅಜ್ಜಣ್ಣ ಹಿರೇಮನಿಪಾಟೀಲ, ಗುರಣ್ಣ ಬಳಗಾನೂರ, ಬಿ.ಬಿ.ಅಸೂಟಿ, ಸಿದ್ರಾಮಪ್ಪ ಉಮಚಗಿ ಇದ್ದರು.

ಸ್ಥಳೀಯ ಹುಡ್ಕೊ ಕಾಲೊನಿಯ ಉದ್ಯಾನದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಕೆ.ಪಾಟೀಲ ಮಾತನಾಡಿ, ‘ಕಾಂಗ್ರೆಸ್ ಸರ್ಕಾರದಿಂದ ಗದಗ–ಬೆಟಗೇರಿ ಅವಳಿ ನಗರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳನ್ನು ಗಮನದಲ್ಲಿರಿಸಿಕೊಂಡು ಜನರು ಪಕ್ಷಕ್ಕೆ ಬೆಂಬಲ ನೀಡಬೇಕು’ ಎಂದು ಮನವಿ ಮಾಡಿದರು.
ರಘುನಾಥಸಾ ಹಬೀಬ, ಪ್ರಭು ಬುರಬುರೆ, ಬಿ.ಬಿ.ಅಸೂಟಿ, ಪ್ರಕಾಶ ಬಾಕಳೆ, ಡಾ.ಆರ್.ಎಚ್.ಕಬಾಡಿ, ಬಲರಾಮ ಬಸವಾ, ಬುಡ್ಡಣ್ಣ ಹಬೀಬ ಇದ್ದರು. ಸ್ಥಳೀಯ 12ನೇ ವಾರ್ಡ್‌ನಲ್ಲಿ ಎಚ್.ಕೆ.ಪಾಟೀಲರ ಪರವಾಗಿ ಕಾರ್ಯಕರ್ತರು ಮತಯಾಚನೆ ಮಾಡಿದರು.

ಎ.ಕೆ. ನಾಶಿ, ಡಾ.ಅನಂತ ಶಿವಪೂರ, ಸಿದ್ದರಾಮಪ್ಪ ಉಮಚಗಿ, ಪರಶುರಾಮ ಗುಂತಕಲ್ಲ, ಪರುಶರಾಮ ಜಾಧವ, ಅಶೋಕ ಅಂಗಡಿ, ಶ್ರೀಶೈಲಪ್ಪ ಬಿಳೆಯಲಿ, ಸುರೇಶ ಗರಗ, ಸುಮಾ ಗರಗ, ಕಲೀಗಾರ, ಅಲ್ತಾಫ್ ಕರಡಿ, ಪರಶುರಾಮ ದೊಡ್ಡಮನಿ ಇದ್ದರು.

21ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಕೆ.ಪಾಟೀಲರ ಪರವಾಗಿ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ, ಮತಯಾಚನೆ ಮಾಡಿದರು. ಕಮಲಾ ಹಾದಿಮನಿ, ರಾಮಣ್ಣ ಫಲದೊಡ್ಡಿ, ಚಿಮ್ಮು ನದಾಫ್, ಸಿದ್ದಣ್ಣ ತುರಕಾಣಿ, ಜಾಕೀರ ಕಣವಿ, ಎಚ್.ಎ.ಅಣ್ಣಿಗೇರಿ, ಮಹ್ಮದಹನಿಫ್ ಕಟ್ಟಿಮನಿ, ಮುಕ್ತಮಸಾಬ್ ಅಮೀನಬಾವಿ, ಶ್ರೀಕಾಂತ ನಾಗವಿ, ದ್ಯಾಮಪ್ಪ ರಾಂಪೂರ, ಶಿರಾಜ ಹುಬ್ಬಳ್ಳಿ ಇದ್ದರು.

ವಿವಿಧೆಡೆ ಬಿಜೆಪಿ ಪ್ರಚಾರ: ಗದುಗಿನ ಗಂಗಾಪೂರ ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ಅನಿಲ ಮೆಣಸಿನಕಾಯಿ ಪರವಾಗಿ ಅವರ ಪತ್ನಿ ವಾಣಿ ಮೆಣಸಿನಕಾಯಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. ಪಾರ್ವತಿ ಪಟ್ಟಣಶೆಟ್ಟಿ, ಸರೋಜ ಸಿಕಾನದಾರ, ಕೌಶಲ್ಯ ಬದಿ, ಶೋಭಾ ನಾಕೋಡ, ಸುನೀತಾ ಬದಿ, ಅನಸೂಯಾ ಕಬಾಡಿ, ಅನೀತಾ ಬದಿ, ರೇಣುಕಾ ಬಸವಾ, ಇಂದುಮತಿ ಬದಿ ಇದ್ದರು.

ನಗರದ 28ನೇ ವಾರ್ಡ್‌ನ ಬಿಜೆಪಿ ಅಭ್ಯರ್ಥಿ ಅನಿಲ ಮೆಣಸಿನಕಾಯಿ ಅವರ ಪರವಾಗಿ ಕಾರ್ಯಕರ್ತರು ಪ್ರಚಾರ ನಡೆಸಿದರು. ಚನ್ನವೀರಪ್ಪ ಹುಣಸಿಕಟ್ಟಿ, ಚನ್ನವೀರಪ್ಪ ಸೊನ್ನದ, ರಾಜು ಪಾಟೀಲ, ಮೌಲಾಲಿ ಮುಲ್ಲಾನವರ, ಅಶೋಕ ಪಾಟೀಲ, ಈರಣ್ಣ ಹುಲಬನ್ನಿ, ಅಶೋಕ ದೊಡ್ಡಮನಿ, ರಮೇಶ ಇಟಗಿ, ರಾಜು ಗಡಾದ, ಉಮಾಕಾಂತ ಹುಣಶಿಕಟ್ಟಿ, ಪ್ರದೀಪ ಅಡಗತ್ತಿ, ಸೋಮಶೇಖರ ಜಾಲಿ, ಮಹಾಂತೆಂಶಗೌಡ ಪಾಟೀಲ, ಬಸವರಾಜ ತಂಗೊಡ, ಶರಣಗೌಡ ಪವಾಡಿಗೌಡ್ರ, ಅಂಬರೀಶ ಹಿರೇಮಠ, ಮಲ್ಲು ಹಂಚಿನಾಳ, ಪ್ರಕಾಶ ಉಗಲಾಟದ ಇದ್ದರು.

10ನೇ ವಾರ್ಡ್‌ನ ಕುರಹಟ್ಟಿಪೇಟೆ, ಚಿಕ್ಕಣ್ಣವರ ಓಣಿಯಲ್ಲಿ ಅನಿಲ್ ಮೆಣಸಿನಕಾಯಿ ಅವರ ಪರವಾಗಿ ಕಾರ್ಯಕರ್ತರು ಮತಯಾಚನೆ ಮಾಡಿದರು. ನಗರಸಭೆ ಸದಸ್ಯ ಮಾಧವ ಗಣಾಚಾರಿ, ಈಶಪ್ಪ ಚಿಕ್ಕಣ್ಣವರ, ಬಸವರಾಜ ಚವಡಕಿ, ಮಲ್ಲಿಕಾರ್ಜುನ ಚಿಕ್ಕಣ್ಣವರ, ಚನ್ನಪ್ಪ ಚಿಕ್ಕಣ್ಣವರ, ಬಸಪ್ಪ ಗೊಲಣ್ಣವರ, ಮಂಜುನಾಥ ವಸ್ತ್ರದ, ಬಸವರಾಜ ಚವಡಿ, ಧರ್ಮಣ್ಣ ಕುವಾರಕರ, ಕುಮಾರ ಚಂದ್ರಗಿರಿ, ಸಂತೋಷ ಕರಮುಡಿ, ಸಿದ್ದು ಹೊನಗುಡಿ, ಜಗದೀಶ ನಿಲಕಂಠಮಠ, ಆನಂದ ಹೊಸಮನಿ, ಶಿವಾಜಿ ಸಿಂಗದ, ಚಂದ್ರು ಕಂಬಾರ, ಸುಮಂತ ಕುಮಚಗಿ ಇದ್ದರು.

7ನೇ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಪರವಾಗಿ ಕಾರ್ಯಕರ್ತರು ಮತ ಯಾಚನೆ ಮಾಡಿದರು.

ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ, ನಾಗಲಿಂಗ ಐಲಿ, ಅನಿಲ ಅಬ್ಬಿಗೇರಿ, ಮೊಹನ ಮಾಳಶೆಟ್ಟಿ, ಮೋಹನ ಹೊನ್ನಳ್ಳಿ, ಯಲ್ಲಪ್ಪ ಕಾಂಬಳೆಕರ, ಚಿನ್ನಪ್ಪ ನೆಗಳೂರ, ಶಾರದಾ ಹಿರೇಮಠ, ರತ್ನಾ ದಾಸರ, ಗೀತಾ ಬಸವಾ, ಪ್ರೇಮನಾಥ ಬಣ್ಣದ, ದಶರಥ ಕೊಳ್ಳಿ, ದೇವಪ್ಪ ಗೋಟುರ, ಬಸವರಾಜ ಯಳವತ್ತಿ, ಟೋಪಣ್ಣ ಪಿಂಡಕೂರ, ಶ್ರೀನಿವಾಸ ಹುಬ್ಬಳ್ಳಿ, ನಾರಾಯಣಪ್ಪ ಸೊರಟೂರ, ಬಸವರಾಜ ಗುಂಡಗಿ, ತುಕಾರಮ ಪತಂಗಿ, ಶಿವನಗೌಡ ಹುಚ್ಚನಗೌಡ್ರ, ಮೋಹನ ಶ್ಯಾಗಾವಿ ಇದ್ದರು.

ಬಿಜೆಪಿ ಕಾರ್ಯಕರ್ತರಿಂದ ಕೊಟುಮುಚಗಿ ಗ್ರಾಮದಲ್ಲಿ ಪ್ರಚಾರ ಸಭೆ ನಡೆಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಣ್ಣ ಶಿಂಗಟಾಲಕೇರಿ, ಬಸವಂತಪ್ಪ ಇಟಗಿ, ಅಶೋಕ ಬ್ಯಾಹಟ್ಟಿ, ದೇವಪ್ಪ ಬಡಿಗೇರ, ಶ್ರೀಧರ ಕುಲಕರ್ಣಿ, ಪಾಲಕ್ಷಯ್ಯ ಬಡಿಗೇರಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT