ನವದೆಹಲಿ: ಏರ್ಸೆಲ್– ಮ್ಯಾಕ್ಸಿಸ್ ಹಗರಣದ ಸಂಬಂಧ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅವರನ್ನು ವಿಚಾರಣೆಗೆ ಒಳಪಡಿಸಲು ಸಂಬಂಧಪಟ್ಟ ಅಧಿಕಾರಿಗಳಿಂದ ಅಗತ್ಯ ಅನುಮತಿ ಪಡೆಯಲಾಗಿದೆ ಎಂದು ದೆಹಲಿ ನ್ಯಾಯಾಲಯಕ್ಕೆ ಸಿಬಿಐ ಸೋಮವಾರ ತಿಳಿಸಿತು.
ಇದೇ ವೇಳೆ,ಪ್ರಕರಣದ ಇತರ ಕೆಲವು ಆರೋಪಿಗಳ ವಿಚಾರಣೆಗೆ ಅನುಮತಿ ಪಡೆಯಲು ಸಿಬಿಐಗೆ ನ್ಯಾಯಾಲಯ ಮೂರು ವಾರಗಳ ಅವಕಾಶ ನೀಡಿತು.
ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಅವರನ್ನು ಬಂಧಿಸದಂತೆ ಇರುವ ತಡೆಯಾಜ್ಞೆಯನ್ನು ಡಿಸೆಂಬರ್ 18ರವರೆಗೆ ವಿಸ್ತರಿಸಿದ ವಿಶೇಷ ನ್ಯಾಯಮೂರ್ತಿ ಒ.ಪಿ. ಸೈನಿ ಅವರು ಮುಂದಿನ ವಿಚಾರಣೆಯನ್ನು ಸಹ ಅದೇ ದಿನಾಂಕಕ್ಕೆ ನಿಗದಿಪಡಿಸಿದರು.