ನವದೆಹಲಿ: ‘ಲಡಾಖ್ನ ಪೂರ್ವಗಡಿಯಲ್ಲಿನ ಗಾಲ್ವನ್ ಕಣಿವೆ ತಮಗೆ ಸೇರಿದ್ದು ಎಂಬ ಚೀನಾದ ಹೇಳಿಕೆ ಉತ್ಪ್ರೇಕ್ಷಿತ ಹಾಗೂ ಸಮರ್ಥನೀಯವೂ ಅಲ್ಲ’ ಎಂದು ಭಾರತದ ವಿದೇಶಾಂಗ ಸಚಿವಾಲಯ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.
‘ಗಾಲ್ವನ್ ಕಣಿಗೆ ಎಂದಿಗೂ ಚೀನಾಕ್ಕೆ ಸೇರಿದ್ದು’ ಎಂಬುದಾಗಿ ಚೀನಾ ಸೇನೆ ಗುರುವಾರ ಹೇಳಿಕೆ ನೀಡಿದ ಬೆನ್ನಲ್ಲೇ ಭಾರತ ತಿರುಗೇಟು ನೀಡಿದೆ.
‘ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಜೂನ್ 6ರಂದು ನಡೆದ ಉಭಯ ದೇಶಗಳ ಸೇನೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಕೈಗೊಂಡ ನಿರ್ಣಯಕ್ಕೆ ಈ ಹೇಳಿಕೆ ವಿರುದ್ಧವಾಗಿದೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದರು.
ಗಾಲ್ವನ್ ಕಣಿವೆಯಲ್ಲಿ ಸೋಮವಾರ ನಡೆದ ಘರ್ಷಣೆಯಲ್ಲಿ ಕರ್ನಲ್ ಹಾಗೂ 19 ಜನ ಯೋಧರು ಹುತಾತ್ಮರಾಗಿದ್ದರು.