<p><strong>ನವದೆಹಲಿ:</strong> ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕಳೆದ ವಾರ ವಲಸೆ ಕಾರ್ಮಿಕರೊಂದಿಗೆ ನಡೆಸಿದ್ದ ಸಂವಾದ ಕುರಿತ ಸಾಕ್ಷ್ಯಚಿತ್ರವನ್ನು ಶನಿವಾರ ಕಾಂಗ್ರೆಸ್ ಬಿಡುಗಡೆ ಮಾಡಿದೆ.</p>.<p>ಕಳೆದ ಶನಿವಾರ ನವದೆಹಲಿಯ ಸುಖ್ದೇವ್ ವಿಹಾರ್ ಮೇಲ್ಸೆತುವೆ ಬಳಿ ಕಾಲ್ನಡಿಗೆಯಲ್ಲಿ ಹೊರಟಿದ್ದ ವಲಸೆ ಕಾರ್ಮಿಕರ ಗುಂಪಿನೊಂದಿಗೆ ಸಂವಾದ ನಡೆಸಿದ್ದ ರಾಹುಲ್, ಅವರ ಸಂಕಷ್ಟವನ್ನು ಆಲಿಸಿದ್ದರು.</p>.<p>ಒಟ್ಟು 16 ನಿಮಿಷಗಳ ಈ ಸಾಕ್ಷ್ಯಚಿತ್ರವು, ಜೀವನೋಪಾಯಕ್ಕಾಗಿ ನಗರಕ್ಕೆ ವಲಸೆ ಬಂದಿದ್ದ ಕಾರ್ಮಿಕರ ಕುಟುಂಬಗಳು ಲಾಕ್ಡೌನ್ ಸಮಯದಲ್ಲಿ ಎದುರಿಸಿದ ಸಂಕಷ್ಟಗಳನ್ನು ಹಿಡಿದಿಟ್ಟಿದೆ.</p>.<p>ಲಾಕ್ಡೌನ್ನಿಂದ ನಿರ್ಗತಿಕರಾದ 13 ಕೋಟಿ ಕುಟುಂಬಗಳಿಗೆ ನೇರ ನಗದು ವರ್ಗಾವಣೆ ಮೂಲಕಸರ್ಕಾರ ಕೂಡಲೇ ₹7,500 ನೀಡಬೇಕು ಎಂದು ಸಾಕ್ಷ್ಯಚಿತ್ರದ ಅಂತಿಮ ಭಾಗದಲ್ಲಿ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.</p>.<p>ಕಪ್ಪುಪ್ಯಾಂಟ್ ಮತ್ತು ಬಿಳಿ ಕುರ್ತಾ ಧರಿಸಿರುವರಾಹುಲ್, ವಲಸೆ ಕಾರ್ಮಿಕರಿರುವ ಪಾದಚಾರಿ ಮಾರ್ಗದಲ್ಲೇ ಕುಳಿತು ಅವರ ಕಷ್ಟಗಳನ್ನು ಆಲಿಸಿ, ಅವರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವ ಕುರಿತು ಭರವಸೆ ನೀಡಿದ್ದಾರೆ.</p>.<p>ಅಂಬಾಲದಿಂದ ಝಾನ್ಸಿ ಜಿಲ್ಲೆಯ ತಮ್ಮ ಊರಿಗೆ ಹಿಂತಿರುಗುತ್ತಿರುವ ಮಹಿಳೆ, ಮಕ್ಕಳು ಸೇರಿದಂತೆ ಸುಮಾರು 20 ವಲಸೆ ಕಾರ್ಮಿಕರ ಗುಂಪನ್ನು ಮಾತನಾಡಿಸುವ ರಾಹುಲ್, ದಿಢೀರ್ ಲಾಕ್ಡೌನ್ ಮತ್ತು ಅದರಿಂದ ಅವರ ಜೀವನದ ಮೇಲಾದ ಪರಿಣಾಮ, ಸಮಸ್ಯೆಗಳನ್ನು ಆಲಿಸಿದ್ದಾರೆ. ಈ ಕಾರ್ಮಿಕರಿಗೆ ಸಹಾಯ ಮಾಡುವ ಭರವಸೆ ನೀಡುವ ಅವರು, ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲು ವ್ಯಾನ್ ಮತ್ತು ಕಾರುಗಳನ್ನು ವ್ಯವಸ್ಥೆ ಮಾಡುವ ದೃಶ್ಯಗಳೂ ಈ ಸಾಕ್ಷ್ಯಚಿತ್ರದಲ್ಲಿದೆ.</p>.<p>ಸಾಕ್ಷ್ಯಚಿತ್ರದ ಅಂತಿಮ ಭಾಗದಲ್ಲಿ ‘ನನ್ನ ವಲಸೆ ಕಾರ್ಮಿಕ ಸಹೋದರ, ಸಹೋದರಿಯರೇ.. ನೀವೇ ಈ ದೇಶದ ಶಕ್ತಿ’ ಎನ್ನುವ ರಾಹುಲ್ ಅವರ ಧ್ವನಿಮುದ್ರಿತ ಸಂದೇಶವಿದೆ. ‘ಇಡೀ ದೇಶದ ಸಂಪೂರ್ಣ ಹೊಣೆಯನ್ನು ನಿಮ್ಮ ಹೆಗಲ ಮೇಲೆ ಹೊತ್ತುಕೊಂಡಿದ್ದೀರಿ. ನಿಮಗೆ ನ್ಯಾಯ ದೊರೆಕಬೇಕೆಂದುಇಡೀ ದೇಶ ಬಯಸುತ್ತದೆ. ದೇಶದ ಈ ಶಕ್ತಿಯನ್ನು ಬಲಪಡಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ’ ಎಂದೂ ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕಳೆದ ವಾರ ವಲಸೆ ಕಾರ್ಮಿಕರೊಂದಿಗೆ ನಡೆಸಿದ್ದ ಸಂವಾದ ಕುರಿತ ಸಾಕ್ಷ್ಯಚಿತ್ರವನ್ನು ಶನಿವಾರ ಕಾಂಗ್ರೆಸ್ ಬಿಡುಗಡೆ ಮಾಡಿದೆ.</p>.<p>ಕಳೆದ ಶನಿವಾರ ನವದೆಹಲಿಯ ಸುಖ್ದೇವ್ ವಿಹಾರ್ ಮೇಲ್ಸೆತುವೆ ಬಳಿ ಕಾಲ್ನಡಿಗೆಯಲ್ಲಿ ಹೊರಟಿದ್ದ ವಲಸೆ ಕಾರ್ಮಿಕರ ಗುಂಪಿನೊಂದಿಗೆ ಸಂವಾದ ನಡೆಸಿದ್ದ ರಾಹುಲ್, ಅವರ ಸಂಕಷ್ಟವನ್ನು ಆಲಿಸಿದ್ದರು.</p>.<p>ಒಟ್ಟು 16 ನಿಮಿಷಗಳ ಈ ಸಾಕ್ಷ್ಯಚಿತ್ರವು, ಜೀವನೋಪಾಯಕ್ಕಾಗಿ ನಗರಕ್ಕೆ ವಲಸೆ ಬಂದಿದ್ದ ಕಾರ್ಮಿಕರ ಕುಟುಂಬಗಳು ಲಾಕ್ಡೌನ್ ಸಮಯದಲ್ಲಿ ಎದುರಿಸಿದ ಸಂಕಷ್ಟಗಳನ್ನು ಹಿಡಿದಿಟ್ಟಿದೆ.</p>.<p>ಲಾಕ್ಡೌನ್ನಿಂದ ನಿರ್ಗತಿಕರಾದ 13 ಕೋಟಿ ಕುಟುಂಬಗಳಿಗೆ ನೇರ ನಗದು ವರ್ಗಾವಣೆ ಮೂಲಕಸರ್ಕಾರ ಕೂಡಲೇ ₹7,500 ನೀಡಬೇಕು ಎಂದು ಸಾಕ್ಷ್ಯಚಿತ್ರದ ಅಂತಿಮ ಭಾಗದಲ್ಲಿ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.</p>.<p>ಕಪ್ಪುಪ್ಯಾಂಟ್ ಮತ್ತು ಬಿಳಿ ಕುರ್ತಾ ಧರಿಸಿರುವರಾಹುಲ್, ವಲಸೆ ಕಾರ್ಮಿಕರಿರುವ ಪಾದಚಾರಿ ಮಾರ್ಗದಲ್ಲೇ ಕುಳಿತು ಅವರ ಕಷ್ಟಗಳನ್ನು ಆಲಿಸಿ, ಅವರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವ ಕುರಿತು ಭರವಸೆ ನೀಡಿದ್ದಾರೆ.</p>.<p>ಅಂಬಾಲದಿಂದ ಝಾನ್ಸಿ ಜಿಲ್ಲೆಯ ತಮ್ಮ ಊರಿಗೆ ಹಿಂತಿರುಗುತ್ತಿರುವ ಮಹಿಳೆ, ಮಕ್ಕಳು ಸೇರಿದಂತೆ ಸುಮಾರು 20 ವಲಸೆ ಕಾರ್ಮಿಕರ ಗುಂಪನ್ನು ಮಾತನಾಡಿಸುವ ರಾಹುಲ್, ದಿಢೀರ್ ಲಾಕ್ಡೌನ್ ಮತ್ತು ಅದರಿಂದ ಅವರ ಜೀವನದ ಮೇಲಾದ ಪರಿಣಾಮ, ಸಮಸ್ಯೆಗಳನ್ನು ಆಲಿಸಿದ್ದಾರೆ. ಈ ಕಾರ್ಮಿಕರಿಗೆ ಸಹಾಯ ಮಾಡುವ ಭರವಸೆ ನೀಡುವ ಅವರು, ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲು ವ್ಯಾನ್ ಮತ್ತು ಕಾರುಗಳನ್ನು ವ್ಯವಸ್ಥೆ ಮಾಡುವ ದೃಶ್ಯಗಳೂ ಈ ಸಾಕ್ಷ್ಯಚಿತ್ರದಲ್ಲಿದೆ.</p>.<p>ಸಾಕ್ಷ್ಯಚಿತ್ರದ ಅಂತಿಮ ಭಾಗದಲ್ಲಿ ‘ನನ್ನ ವಲಸೆ ಕಾರ್ಮಿಕ ಸಹೋದರ, ಸಹೋದರಿಯರೇ.. ನೀವೇ ಈ ದೇಶದ ಶಕ್ತಿ’ ಎನ್ನುವ ರಾಹುಲ್ ಅವರ ಧ್ವನಿಮುದ್ರಿತ ಸಂದೇಶವಿದೆ. ‘ಇಡೀ ದೇಶದ ಸಂಪೂರ್ಣ ಹೊಣೆಯನ್ನು ನಿಮ್ಮ ಹೆಗಲ ಮೇಲೆ ಹೊತ್ತುಕೊಂಡಿದ್ದೀರಿ. ನಿಮಗೆ ನ್ಯಾಯ ದೊರೆಕಬೇಕೆಂದುಇಡೀ ದೇಶ ಬಯಸುತ್ತದೆ. ದೇಶದ ಈ ಶಕ್ತಿಯನ್ನು ಬಲಪಡಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ’ ಎಂದೂ ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>