ಅಂಬಾಲದಿಂದ ಝಾನ್ಸಿ ಜಿಲ್ಲೆಯ ತಮ್ಮ ಊರಿಗೆ ಹಿಂತಿರುಗುತ್ತಿರುವ ಮಹಿಳೆ, ಮಕ್ಕಳು ಸೇರಿದಂತೆ ಸುಮಾರು 20 ವಲಸೆ ಕಾರ್ಮಿಕರ ಗುಂಪನ್ನು ಮಾತನಾಡಿಸುವ ರಾಹುಲ್, ದಿಢೀರ್ ಲಾಕ್ಡೌನ್ ಮತ್ತು ಅದರಿಂದ ಅವರ ಜೀವನದ ಮೇಲಾದ ಪರಿಣಾಮ, ಸಮಸ್ಯೆಗಳನ್ನು ಆಲಿಸಿದ್ದಾರೆ. ಈ ಕಾರ್ಮಿಕರಿಗೆ ಸಹಾಯ ಮಾಡುವ ಭರವಸೆ ನೀಡುವ ಅವರು, ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲು ವ್ಯಾನ್ ಮತ್ತು ಕಾರುಗಳನ್ನು ವ್ಯವಸ್ಥೆ ಮಾಡುವ ದೃಶ್ಯಗಳೂ ಈ ಸಾಕ್ಷ್ಯಚಿತ್ರದಲ್ಲಿದೆ.