‘ಈ ಚುನಾವಣೆಯಲ್ಲಿ ಬಿಜೆಪಿಯೂ ಮುಖ್ಯವಲ್ಲ, ನರೇಂದ್ರ ಮೋದಿಯೂ ಮುಖ್ಯವಲ್ಲ. ಮಧ್ಯಪ್ರದೇಶದ ಜನರ ಬವಣೆಯೇ ಈ ಚುನಾವಣೆಯ ವಿಷಯ. ಬಿಜೆಪಿಯ 14 ವರ್ಷಗಳ ದುರಾಡಳಿತದ ಫಲವಾದ ವ್ಯಾಪಂ ಹಗರಣ, ಭ್ರಷ್ಟಾಚಾರ, ಮರಳು ದಂಧೆ, ನಿರುದ್ಯೋಗದ ಸಮಸ್ಯೆ ಮತ್ತು ಮಹಿಳೆಯರ ವಿರುದ್ಧದ ಅಪರಾಧಗಳ ಹೆಚ್ಚಳದಿಂದ ಜನ ರೋಸಿ ಹೋಗಿದ್ದಾರೆ. ಇವೆಲ್ಲವನ್ನು ಬದಲಿಸುವ ಸಮಯ ಈಗ ಬಂದಿದೆ ಎಂದ ಧ್ಯೇಯದೊಂದಿಗೆ ಚುನಾವಣೆ ಎದುರಿಸುತ್ತೇವೆ’ ಎಂದು ಸಿಂಧಿಯಾ ಹೇಳಿದ್ದಾರೆ.