ನವದೆಹಲಿ: ಸುದ್ದಿವಾಹಿನಿಯೊಂದರಲ್ಲಿ ರಾಜಕೀಯ ವಿಷಯದಲ್ಲಿಚರ್ಚಾ ಕಾರ್ಯಕ್ರಮ ನಡೆಯುತ್ತಿದ್ದಾಗ ಸಿಟ್ಟುಗೊಂಡ ಕಾಂಗ್ರೆಸ್ ವಕ್ತಾರ ಅಲೋಕ್ ಶರ್ಮಾ ಅವರುಬಿಜೆಪಿ ವಕ್ತಾರ ಕೆ.ಕೆ. ಶರ್ಮಾ ಅವರ ಮೇಲೆ ನೀರು ಎರಚಿದ್ದಾರೆ.
Shocking to see how Congress Spokesperson Alok Sharma threw Glass of Water at BJP Spokesperson During LIVE TV DEBATE on News 24 Channel
Frustration is at peak - Personal attack, foul mouth and now this throwing glass of water God knows what next.. pic.twitter.com/8TFIUY4J05
ಶನಿವಾರ ನ್ಯೂಸ್ 24 ಸುದ್ದಿವಾಹಿನಿಯಲ್ಲಿ ರಾಜಕೀಯ ಚರ್ಚೆ ನೇರ ಪ್ರಸಾರ ವೇಳೆ ಈ ಘಟನೆ ನಡೆದಿದೆ.
ಬಿಜೆಪಿ ವಕ್ತಾರ ಪದೇ ಪದೇ ದೇಶದ್ರೋಹಿ ಎಂದು ಕರೆದದ್ದಕ್ಕೆ ಸಿಟ್ಟುಗೊಂಡು ಕಾಂಗ್ರೆಸ್ನ ಶರ್ಮಾ, ಅಲ್ಲಿ ಮೇಜಿನ ಮೇಲಿಟ್ಟಿದ್ದ ಒಂದು ಲೋಟ ನೀರನ್ನು ಕೆ.ಕೆ ಶರ್ಮಾ ಮೇಲೆ ಎರಚಿದ್ದಾರೆ.
ನೀರು ಎರಚಿದ್ದಕ್ಕಾಗಿ ಕ್ಷಮೆ ಕೇಳುವಂತೆ ಕೆ.ಕೆ. ಶರ್ಮಾಪಟ್ಟು ಹಿಡಿದರೆ, ತನ್ನನ್ನು ದೇಶದ್ರೋಹಿ ಎಂದಿದ್ದಕ್ಕೆ ಕ್ಷಮೆ ಕೇಳಿ ಎಂದು ಅಲೋಕ್ ಶರ್ಮಾ ಒತ್ತಾಯಿಸಿದ್ದಾರೆ. ವಾಹಿನಿಯಲ್ಲಿ ಇಬ್ಬರು ನಾಯಕರು ಈ ರೀತಿ ಜಗಳವಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.