ಸ್ವಾತಂತ್ರ್ಯ ಚಳವಳಿಯ ಕಾಲದಿಂದಲೇ ದೇಶದ ಇತಿಹಾಸದಲ್ಲಿ ಅಲಹಾಬಾದ್ ಪ್ರಮುಖ ಪಾತ್ರವಹಿಸಿದೆ. ಹೆಸರು ಬದಲಾವಣೆ ಇತಿಹಾಸದ ಮೇಲೆ ಪರಿಣಾಮ ಬೀರಲಿದೆ ಎಂದು ಕಾಂಗ್ರೆಸ್ ವಕ್ತಾರ ಓಂಕಾರ್ ಸಿಂಗ್ ಹೇಳಿದ್ದಾರೆ. ಜತೆಗೆ, ಕುಂಭಮೇಳ ನಡೆಯುವ ಪ್ರದೇಶವನ್ನು ಈಗಾಗಲೇ ಪ್ರಯಾಗ್ರಾಜ್ ಎಂದೇ ಕರೆಯಲಾಗುತ್ತಿದೆ. ಸರ್ಕಾರಕ್ಕೆ ಆ ಹೆಸರನ್ನೇ ಇಡಬೇಕೆಂದಿದ್ದರೆ ಪ್ರತ್ಯೇಕ ನಗರ ನಿರ್ಮಾಣ ಮಾಡಲಿ. ಅಲಹಾಬಾದ್ ಹೆಸರು ಬದಲಾಯಿಸಲೇಬಾರದು ಎಂದೂ ಅವರು ಹೇಳಿದ್ದಾರೆ.