ನವದೆಹಲಿ: ದೇಶದಲ್ಲಿ ವರದಿಯಾಗಿರುವ 4,067 ಸೋಂಕಿನ ಪ್ರಕರಣಗಳ ಪೈಕಿ ತಬ್ಲೀಗ್ ಜಮಾತ್ ಆಯೋಜಿಸಿದ್ದ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡವರಿಗೆ ಸಂಬಂಧಿಸಿದ ಪ್ರಕರಣಗಳ ಸಂಖ್ಯೆ 1,445 ಎಂದು ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.
‘ಭಾನುವಾರ 693 ಪ್ರಕರಣ ವರದಿಯಾಗಿವೆ. 30 ಜನರು ಮೃತಪಟ್ಟಿದ್ದು, ಸಾವನ್ನಪ್ಪಿದವರ ಸಂಖ್ಯೆ 109ಕ್ಕೇರಿದಂತಾಗಿದೆ’ ಎಂದು ಸಚಿವಾಲಯದಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪರಿಣಾಮಕಾರಿ ಅಲ್ಲ: ಚಿಕಿತ್ಸೆಯಲ್ಲಿ ಹೈಡ್ರಾಕ್ಸಿಕ್ಲೊರೋಕ್ವಿನ್ ಪರಿಣಾಮಕಾರಿ ಎಂಬುದನ್ನು ದೃಢಪಡಿಸುವ ಪುರಾವೆಗಳು ಕಡಿಮೆ. ಹೀಗಾಗಿ ಈ ರೋಗದಿಂದ ಬಳಲುತ್ತಿರುವವರಿಗೆ ಈ ಮಾತ್ರೆ ನೀಡುವುದು ಸರಿಯಲ್ಲ’ ಎಂದು ಐಸಿಎಂಆರ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.