<p><strong>ಚಂಡೀಗಢ: </strong>ಕೊರೊನಾ ರೋಗಿಗಳ ಚಿಕಿತ್ಸೆಯಲ್ಲಿ ವ್ಯಸ್ತರಾಗಿರುವ ಅವರಿಗೀಗ ಆಸ್ಪತ್ರೆಯೇ ಮನೆ. ಸ್ವಂತ ನಿವಾಸಕ್ಕೆ ತೆರಳುವುದೇ ಅಪರೂಪ. ಹೇಗೋ ಪುರುಸೊತ್ತು ಮಾಡಿಕೊಂಡು ಕೆಲ ನಿಮಿಷದ ಮಟ್ಟಿಗೆ ಮನೆಗೆ ತೆರಳಿದ ಅವರು ಒಂದು ಕಪ್ ಚಹಾ ಸೇವಿಸಿದರು. ಎಲ್ಲಿ ಗೊತ್ತೇ? ಮುಂಬಾಗಿಲ ಹೊಸಿಲಿನ ಹೊರಗೆ!</p>.<p>ಇದು ಪಂಜಾಬ್ನ ನವಾನ್ಶಹರ್ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯ ಡಾ. ಗುರುಪಾಲ್ ಕಟಾರಿಯಾ ಅವರ ಸ್ಥಿತಿ. ಈ ಆಸ್ಪತ್ರೆಯೀಗ ಕೊರೊನಾ ವೈರಸ್ ಹಾಟ್ಸ್ಪಾಟ್. ಕಟಾರಿಯಾ ನೇತೃತ್ವದ ವೈದ್ಯರ ತಂಡ ಕೊರೊನಾ ಸೋಂಕಿತ 18 ರೋಗಿಗಳಿಗೆ ಚಿಕಿತ್ಸೆ, ಆರೈಕೆ ಮಾಡುತ್ತಿದೆ.</p>.<p>ಈ ವೈದ್ಯರಿಗೆ ಆಸ್ಪತ್ರೆಯಿಂದ 60 ಕಿ.ಮೀ ದೂರದಲ್ಲಿರುವ ಮನೆಗೆ ತೆರಳಲು ಇತ್ತೀಚೆಗೆ ಅವಕಾಶ ಸಿಕ್ಕಿತ್ತು. ಅದೂ ಕೇವಲ ಕೆಲವೇ ಕ್ಷಣಗಳ ಮಟ್ಟಿಗೆ. ಹೀಗೆ ತೆರಳಿದ ಅವರು ಮನೆಯೊಳಕ್ಕೆ ಪ್ರವೇಶಿಸಲಿಲ್ಲ. ಹೊರಗೆಯೇ ಚಹಾ ಸೇವಿಸಿ ಕರ್ತವ್ಯಕ್ಕೆ ವಾಪಸಾದರು.</p>.<p>ಮನೆಗೆ ಭೇಟಿ ನೀಡಿದ ಬಗ್ಗೆ ಅವರು ಹೇಳಿದ್ದು ಹೀಗೆ, ‘ಮುಂಜಾಗರೂಕತಾ ಕ್ರಮವಾಗಿ ನಾನು ಮನೆಯೊಳಕ್ಕೆ ಹೋಗಲಿಲ್ಲ. ಅವರನ್ನು ದೂರದಿಂದಲೇ ನೋಡಿ ಮಾತನಾಡಿಸಿ ಕರ್ತವ್ಯಕ್ಕೆ ಮರಳಿದೆ’.</p>.<p><strong>ಇದನ್ನೂ ಓದಿ:</strong><a href="https://www.prajavani.net/technology/science/bione-launches-indias-first-rapid-covid19-at-home-screening-test-kit-717491.html" itemprop="url" target="_blank">ದೇಶದ ಮೊದಲ ಕೋವಿಡ್-19 ಹೋಮ್ ಟೆಸ್ಟ್ ಕಿಟ್: 10 ನಿಮಿಷದಲ್ಲೇ ಫಲಿತಾಂಶ!</a></p>.<p>ಕಟಾರಿಯಾ ಅವರ ಪತ್ನಿ ಹೋಶಿಯಾರ್ಪುರ ಆಸ್ಪತ್ರೆಯಲ್ಲಿ ದಂತವೈದ್ಯೆ.</p>.<p>‘ಮಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದಾಳೆ. ಜಾಗರೂಕತೆ ವಹಿಸುವಂತೆ ಸದಾ ಹೇಳುತ್ತಿರುತ್ತಾಳೆ. ತಂದೆ–ತಾಯಿ ಜನರ ಸೇವೆ ಮಾಡುವ ಬಗ್ಗೆ ಆಕೆಗೂ ಹೆಮ್ಮೆಯಿದೆ’ ಎನ್ನುತ್ತಾರೆ ಕಟಾರಿಯಾ.</p>.<p>ನವಾನ್ಶಹರ್ನಲ್ಲಿ ಈವರೆಗೆ 19 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ ಒಬ್ಬರು 70 ವರ್ಷ ವಯಸ್ಸಿನ ರೋಗಿ ಮೃತಪಟ್ಟಿದ್ದಾರೆ. ಪಂಜಾಬ್ನಲ್ಲಿ ಒಟ್ಟು 53 ಮಂದಿಗೆ ಸೋಂಕು ತಗುಲಿದ್ದು, ಈ ಪೈಕಿ ನವಾನ್ಶಹರ್ನಲ್ಲೇ ಅತಿ ಹೆಚ್ಚು ಪ್ರಕರಣ ದಾಖಲಾಗಿವೆ.</p>.<p>ಸೋಂಕಿತರ ಮನೋಸ್ಥೈರ್ಯ ಹೆಚ್ಚಿಸುವುದೇ ನಮ್ಮ ಮುಖ್ಯ ಕಳಕಳಿಯಾಗಿದೆ. ಕೊರೊನಾ ಕುರಿತ ಅಂಕಿಸಂಖ್ಯೆಗಳನ್ನು ಅವರು ನಮ್ಮ ಬಳಿ ವಿಚಾರಿಸುತ್ತಾರೆ. ಪ್ರತಿದಿನ ಸತ್ತವರ ಸುದ್ದಿ ಕೇಳಿ ಬೇಸರಪಟ್ಟುಕೊಳ್ಳುತ್ತಾರೆ ಎಂದು ಕಟಾರಿಯಾ ಹೇಳಿದ್ದಾರೆ.</p>.<p>‘ನಮಗೆ ಇದು ಆರಾಧನಾ ಸ್ಥಳ. ರೋಗಿಗಳ ಮುಖದಲ್ಲಿ ಸಂತಸ ಕಂಡಾಗ ನಮಗೆ ತೃಪ್ತಿಯಾಗುತ್ತದೆ’ ಎನ್ನುತ್ತಾರೆ ಕಟಾರಿಯಾ. ಅಂದಹಾಗೆ, ಇವರಿಗೆ ಈಗ 54 ವರ್ಷ ವಯಸ್ಸು.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/stateregional/central-government-released-an-additional-assistance-ndrf-funds-to-states-karnataka-to-combat-717490.html" itemprop="url" target="_blank">ಕೊರೊನಾ ತಡೆಗೆ ಕ್ರಮ: ಎಸ್ಡಿಆರ್ಎಫ್ ಅಡಿ ರಾಜ್ಯಕ್ಕೆ ₹395 ಕೋಟಿ ಮಂಜೂರು</a></p>.<p>‘ನಾವು ಸೋಂಕಿತರನ್ನು ಆಗಾಗ್ಗೆ ಮಾತನಾಡಿಸುತ್ತಿರುತ್ತೇವೆ. ಭಯಪಡುವ ಅಗತ್ಯವಿಲ್ಲ ಎಂದು ಧೈರ್ಯದ ಮಾತುಗಳನ್ನಾಡುತ್ತೇವೆ. ಆದಷ್ಟು ಅವರು ಸಕಾರಾತ್ಮಕವಾಗಿ ಯೋಚಿಸುವಂತೆ ಮಾಡಿ ಅವರ ಮನೋಸ್ಥೈರ್ಯ ವೃದ್ಧಿಸಲು ಪ್ರಯತ್ನಿಸುತ್ತೇವೆ. ಆಸ್ಪತ್ರೆಯಲ್ಲಿ ಸಿಲುಕಿಕೊಂಡಿದ್ದೇವೆ ಎಂಬ ಭಾವನೆ ಅವರಲ್ಲಿ ಬಾರದಂತೆ ನೋಡಿಕೊಳ್ಳುತ್ತೇವೆ’ ಎಂದಿದ್ದಾರೆ ಕಟಾರಿಯಾ.</p>.<p>‘ಅವರಿಲ್ಲಿಂದ (ಸೋಂಕಿತರು) ಗುಣಮುಖರಾಗಿ ಹೋದ ಬಳಿಕ ಖಂಡಿತವಾಗಿಯೂ ನಮ್ಮನ್ನು ನೆನಪಿಸಿಕೊಳ್ಳುತ್ತಾರೆ’ ಎಂಬುದು ಅವರ ದೃಢ ನಂಬಿಕೆ</p>.<p>ಕೊರೊನಾ ವೈರಸ್ ಸೋಂಕು ಎದುರಿಸಲು ಬೇಕಾದ ಎಲ್ಲ ವ್ಯವಸ್ಥೆ ಸರ್ಕಾರಿ ಆಸ್ಪತ್ರೆಯಲ್ಲಿ ಇದೆ. ಒಂದು ವೇಳೆ ಸೋಂಕಿತರ ಸಂಖ್ಯೆ ಹೆಚ್ಚಾದರೆ ಅದಕ್ಕೆ ಬೇಕಾಗಿರುವಷ್ಟು ವೈದ್ಯಕೀಯ ಸಲಕರಣೆಗಳು ಸನ್ನದ್ಧ ಸ್ಥಿತಿಯಲ್ಲಿವೆ ಎಂದು ಅವರು ಹೇಳಿದ್ದಾರೆ.</p>.<p>ಮೈಕ್ರೊಬಯಾಲಜಿಸ್ಟ್, ಗ್ರಾಮೀಣ ವೈದ್ಯಾಧಿಕಾರಿ, ಫಾರ್ಮಸಿಸ್ಟ್ ಮತ್ತು ಲ್ಯಾಬ್ ಟೆಕ್ನಿಷಿಯನ್ ಒಳಗೊಂಡ ಕಟಾರಿಯಾ ಅವರ ತಂಡ ಸದ್ಯ ಆಸ್ಪತ್ರೆ ಆವರಣದಲ್ಲಿರುವ ಮನೆಯಲ್ಲೇ ವಾಸಿಸುತ್ತಿದೆ.</p>.<p>‘ದಿನದ 24 ಗಂಟೆಯೂ ನಾನು ಮತ್ತು ತಂಡ ಸೇವೆಗೆ ಸಿದ್ಧ’ ಎಂದು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ ಕಟಾರಿಯಾ.</p>.<p>ಕಟಾರಿಯಾ ಅವರು ಅಮೃತಸರ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಡಿ ಪೂರೈಸಿದವರು. 2009ರಲ್ಲಿ ಹಂದಿ ಜ್ವರ ತಾರಕಕ್ಕೇರಿದ್ದ ವೇಳೆ ಸೋಂಕಿತರಿಗೆ ಚಿಕಿತ್ಸೆ ನೀಡಿದ ಅನುಭವ ಕಟಾರಿಯಾ ಅವರಿಗಿದೆ. ಆ ಅನುಭವವೇ ಈಗ ನೆರವಿಗೆ ಬರುತ್ತಿದೆ ಎನ್ನುತಾರವರು.</p>.<p><strong>ಇದನ್ನೂ ಓದಿ:</strong><a href="https://www.prajavani.net/technology/science/coronavirus-may-spread-through-normal-breathing-us-scientists-717489.html" itemprop="url">ಮಾತನಾಡುವಾಗ, ಉಸಿರಾಡುವಾಗಲೂ ಕೊರೊನಾ ಸೋಂಕು ಹರಡಬಹುದು: ವಿಜ್ಞಾನಿಗಳ ಮಾಹಿತಿ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಂಡೀಗಢ: </strong>ಕೊರೊನಾ ರೋಗಿಗಳ ಚಿಕಿತ್ಸೆಯಲ್ಲಿ ವ್ಯಸ್ತರಾಗಿರುವ ಅವರಿಗೀಗ ಆಸ್ಪತ್ರೆಯೇ ಮನೆ. ಸ್ವಂತ ನಿವಾಸಕ್ಕೆ ತೆರಳುವುದೇ ಅಪರೂಪ. ಹೇಗೋ ಪುರುಸೊತ್ತು ಮಾಡಿಕೊಂಡು ಕೆಲ ನಿಮಿಷದ ಮಟ್ಟಿಗೆ ಮನೆಗೆ ತೆರಳಿದ ಅವರು ಒಂದು ಕಪ್ ಚಹಾ ಸೇವಿಸಿದರು. ಎಲ್ಲಿ ಗೊತ್ತೇ? ಮುಂಬಾಗಿಲ ಹೊಸಿಲಿನ ಹೊರಗೆ!</p>.<p>ಇದು ಪಂಜಾಬ್ನ ನವಾನ್ಶಹರ್ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯ ಡಾ. ಗುರುಪಾಲ್ ಕಟಾರಿಯಾ ಅವರ ಸ್ಥಿತಿ. ಈ ಆಸ್ಪತ್ರೆಯೀಗ ಕೊರೊನಾ ವೈರಸ್ ಹಾಟ್ಸ್ಪಾಟ್. ಕಟಾರಿಯಾ ನೇತೃತ್ವದ ವೈದ್ಯರ ತಂಡ ಕೊರೊನಾ ಸೋಂಕಿತ 18 ರೋಗಿಗಳಿಗೆ ಚಿಕಿತ್ಸೆ, ಆರೈಕೆ ಮಾಡುತ್ತಿದೆ.</p>.<p>ಈ ವೈದ್ಯರಿಗೆ ಆಸ್ಪತ್ರೆಯಿಂದ 60 ಕಿ.ಮೀ ದೂರದಲ್ಲಿರುವ ಮನೆಗೆ ತೆರಳಲು ಇತ್ತೀಚೆಗೆ ಅವಕಾಶ ಸಿಕ್ಕಿತ್ತು. ಅದೂ ಕೇವಲ ಕೆಲವೇ ಕ್ಷಣಗಳ ಮಟ್ಟಿಗೆ. ಹೀಗೆ ತೆರಳಿದ ಅವರು ಮನೆಯೊಳಕ್ಕೆ ಪ್ರವೇಶಿಸಲಿಲ್ಲ. ಹೊರಗೆಯೇ ಚಹಾ ಸೇವಿಸಿ ಕರ್ತವ್ಯಕ್ಕೆ ವಾಪಸಾದರು.</p>.<p>ಮನೆಗೆ ಭೇಟಿ ನೀಡಿದ ಬಗ್ಗೆ ಅವರು ಹೇಳಿದ್ದು ಹೀಗೆ, ‘ಮುಂಜಾಗರೂಕತಾ ಕ್ರಮವಾಗಿ ನಾನು ಮನೆಯೊಳಕ್ಕೆ ಹೋಗಲಿಲ್ಲ. ಅವರನ್ನು ದೂರದಿಂದಲೇ ನೋಡಿ ಮಾತನಾಡಿಸಿ ಕರ್ತವ್ಯಕ್ಕೆ ಮರಳಿದೆ’.</p>.<p><strong>ಇದನ್ನೂ ಓದಿ:</strong><a href="https://www.prajavani.net/technology/science/bione-launches-indias-first-rapid-covid19-at-home-screening-test-kit-717491.html" itemprop="url" target="_blank">ದೇಶದ ಮೊದಲ ಕೋವಿಡ್-19 ಹೋಮ್ ಟೆಸ್ಟ್ ಕಿಟ್: 10 ನಿಮಿಷದಲ್ಲೇ ಫಲಿತಾಂಶ!</a></p>.<p>ಕಟಾರಿಯಾ ಅವರ ಪತ್ನಿ ಹೋಶಿಯಾರ್ಪುರ ಆಸ್ಪತ್ರೆಯಲ್ಲಿ ದಂತವೈದ್ಯೆ.</p>.<p>‘ಮಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದಾಳೆ. ಜಾಗರೂಕತೆ ವಹಿಸುವಂತೆ ಸದಾ ಹೇಳುತ್ತಿರುತ್ತಾಳೆ. ತಂದೆ–ತಾಯಿ ಜನರ ಸೇವೆ ಮಾಡುವ ಬಗ್ಗೆ ಆಕೆಗೂ ಹೆಮ್ಮೆಯಿದೆ’ ಎನ್ನುತ್ತಾರೆ ಕಟಾರಿಯಾ.</p>.<p>ನವಾನ್ಶಹರ್ನಲ್ಲಿ ಈವರೆಗೆ 19 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ ಒಬ್ಬರು 70 ವರ್ಷ ವಯಸ್ಸಿನ ರೋಗಿ ಮೃತಪಟ್ಟಿದ್ದಾರೆ. ಪಂಜಾಬ್ನಲ್ಲಿ ಒಟ್ಟು 53 ಮಂದಿಗೆ ಸೋಂಕು ತಗುಲಿದ್ದು, ಈ ಪೈಕಿ ನವಾನ್ಶಹರ್ನಲ್ಲೇ ಅತಿ ಹೆಚ್ಚು ಪ್ರಕರಣ ದಾಖಲಾಗಿವೆ.</p>.<p>ಸೋಂಕಿತರ ಮನೋಸ್ಥೈರ್ಯ ಹೆಚ್ಚಿಸುವುದೇ ನಮ್ಮ ಮುಖ್ಯ ಕಳಕಳಿಯಾಗಿದೆ. ಕೊರೊನಾ ಕುರಿತ ಅಂಕಿಸಂಖ್ಯೆಗಳನ್ನು ಅವರು ನಮ್ಮ ಬಳಿ ವಿಚಾರಿಸುತ್ತಾರೆ. ಪ್ರತಿದಿನ ಸತ್ತವರ ಸುದ್ದಿ ಕೇಳಿ ಬೇಸರಪಟ್ಟುಕೊಳ್ಳುತ್ತಾರೆ ಎಂದು ಕಟಾರಿಯಾ ಹೇಳಿದ್ದಾರೆ.</p>.<p>‘ನಮಗೆ ಇದು ಆರಾಧನಾ ಸ್ಥಳ. ರೋಗಿಗಳ ಮುಖದಲ್ಲಿ ಸಂತಸ ಕಂಡಾಗ ನಮಗೆ ತೃಪ್ತಿಯಾಗುತ್ತದೆ’ ಎನ್ನುತ್ತಾರೆ ಕಟಾರಿಯಾ. ಅಂದಹಾಗೆ, ಇವರಿಗೆ ಈಗ 54 ವರ್ಷ ವಯಸ್ಸು.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/stateregional/central-government-released-an-additional-assistance-ndrf-funds-to-states-karnataka-to-combat-717490.html" itemprop="url" target="_blank">ಕೊರೊನಾ ತಡೆಗೆ ಕ್ರಮ: ಎಸ್ಡಿಆರ್ಎಫ್ ಅಡಿ ರಾಜ್ಯಕ್ಕೆ ₹395 ಕೋಟಿ ಮಂಜೂರು</a></p>.<p>‘ನಾವು ಸೋಂಕಿತರನ್ನು ಆಗಾಗ್ಗೆ ಮಾತನಾಡಿಸುತ್ತಿರುತ್ತೇವೆ. ಭಯಪಡುವ ಅಗತ್ಯವಿಲ್ಲ ಎಂದು ಧೈರ್ಯದ ಮಾತುಗಳನ್ನಾಡುತ್ತೇವೆ. ಆದಷ್ಟು ಅವರು ಸಕಾರಾತ್ಮಕವಾಗಿ ಯೋಚಿಸುವಂತೆ ಮಾಡಿ ಅವರ ಮನೋಸ್ಥೈರ್ಯ ವೃದ್ಧಿಸಲು ಪ್ರಯತ್ನಿಸುತ್ತೇವೆ. ಆಸ್ಪತ್ರೆಯಲ್ಲಿ ಸಿಲುಕಿಕೊಂಡಿದ್ದೇವೆ ಎಂಬ ಭಾವನೆ ಅವರಲ್ಲಿ ಬಾರದಂತೆ ನೋಡಿಕೊಳ್ಳುತ್ತೇವೆ’ ಎಂದಿದ್ದಾರೆ ಕಟಾರಿಯಾ.</p>.<p>‘ಅವರಿಲ್ಲಿಂದ (ಸೋಂಕಿತರು) ಗುಣಮುಖರಾಗಿ ಹೋದ ಬಳಿಕ ಖಂಡಿತವಾಗಿಯೂ ನಮ್ಮನ್ನು ನೆನಪಿಸಿಕೊಳ್ಳುತ್ತಾರೆ’ ಎಂಬುದು ಅವರ ದೃಢ ನಂಬಿಕೆ</p>.<p>ಕೊರೊನಾ ವೈರಸ್ ಸೋಂಕು ಎದುರಿಸಲು ಬೇಕಾದ ಎಲ್ಲ ವ್ಯವಸ್ಥೆ ಸರ್ಕಾರಿ ಆಸ್ಪತ್ರೆಯಲ್ಲಿ ಇದೆ. ಒಂದು ವೇಳೆ ಸೋಂಕಿತರ ಸಂಖ್ಯೆ ಹೆಚ್ಚಾದರೆ ಅದಕ್ಕೆ ಬೇಕಾಗಿರುವಷ್ಟು ವೈದ್ಯಕೀಯ ಸಲಕರಣೆಗಳು ಸನ್ನದ್ಧ ಸ್ಥಿತಿಯಲ್ಲಿವೆ ಎಂದು ಅವರು ಹೇಳಿದ್ದಾರೆ.</p>.<p>ಮೈಕ್ರೊಬಯಾಲಜಿಸ್ಟ್, ಗ್ರಾಮೀಣ ವೈದ್ಯಾಧಿಕಾರಿ, ಫಾರ್ಮಸಿಸ್ಟ್ ಮತ್ತು ಲ್ಯಾಬ್ ಟೆಕ್ನಿಷಿಯನ್ ಒಳಗೊಂಡ ಕಟಾರಿಯಾ ಅವರ ತಂಡ ಸದ್ಯ ಆಸ್ಪತ್ರೆ ಆವರಣದಲ್ಲಿರುವ ಮನೆಯಲ್ಲೇ ವಾಸಿಸುತ್ತಿದೆ.</p>.<p>‘ದಿನದ 24 ಗಂಟೆಯೂ ನಾನು ಮತ್ತು ತಂಡ ಸೇವೆಗೆ ಸಿದ್ಧ’ ಎಂದು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ ಕಟಾರಿಯಾ.</p>.<p>ಕಟಾರಿಯಾ ಅವರು ಅಮೃತಸರ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಡಿ ಪೂರೈಸಿದವರು. 2009ರಲ್ಲಿ ಹಂದಿ ಜ್ವರ ತಾರಕಕ್ಕೇರಿದ್ದ ವೇಳೆ ಸೋಂಕಿತರಿಗೆ ಚಿಕಿತ್ಸೆ ನೀಡಿದ ಅನುಭವ ಕಟಾರಿಯಾ ಅವರಿಗಿದೆ. ಆ ಅನುಭವವೇ ಈಗ ನೆರವಿಗೆ ಬರುತ್ತಿದೆ ಎನ್ನುತಾರವರು.</p>.<p><strong>ಇದನ್ನೂ ಓದಿ:</strong><a href="https://www.prajavani.net/technology/science/coronavirus-may-spread-through-normal-breathing-us-scientists-717489.html" itemprop="url">ಮಾತನಾಡುವಾಗ, ಉಸಿರಾಡುವಾಗಲೂ ಕೊರೊನಾ ಸೋಂಕು ಹರಡಬಹುದು: ವಿಜ್ಞಾನಿಗಳ ಮಾಹಿತಿ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>