<p><strong>ಚಿಕ್ಕಮಗಳೂರು:</strong> ‘ಹೋರಾಟ ಮಾಡಿ ಸಾಕಾಗಿದೆ. ಜೆಡಿಎಸ್ ಗೆಲುವಿಗೆ ಕಾರ್ಯ ಕರ್ತರು ಟೊಂಕಕಟ್ಟಿ ನಿಲ್ಲಬೇಕು’ ಎಂದು ಜೆಡಿಎಸ್ ಮುಖಂಡ ಎಸ್.ಎಲ್.ಧರ್ಮೇಗೌಡ ಹೇಳಿದರು.</p>.<p>ಜೆಡಿಎಸ್ ಅಭ್ಯರ್ಥಿ ಬಿ.ಎಚ್.ಹರೀಶ್ ಅವರು ನಾಮಪತ್ರ ಸಲ್ಲಿಸಿದ ಬಳಿಕ ಧರ್ಮೇಗೌಡ ಅವರು ಹನುಮಂತಪ್ಪ ವೃತ್ತದಲ್ಲಿ ಕಾರ್ಯ ಕರ್ತರನ್ನು ಉದ್ದೇಶಿಸಿ ಮಾತನಾಡಿದರು. ‘ಈ ಕ್ಷೇತ್ರದಲ್ಲಿ ಬಿಜೆಪಿಯವರ ಅಹಂ ಕಾರಕ್ಕೆ ಕೊನೆ ಹಾಡಬೇಕು. ಈ ಕ್ಷೇತ್ರದಲ್ಲಿ ಬದಲಾವಣೆ ಶತ ಸಿದ್ಧ’ ಎಂದು ಹೇಳಿದರು.</p>.<p>‘ಕಣಿವೆಯ ಕೆಳಭಾಗದಲ್ಲಿ ಕುಡಿ ಯುವ ನೀರಿಗೆ ತೊಂದರೆಯಾಗಿದೆ. ಯಾವುದೇ ನೀರಾವರಿ ಸೌಲಭ್ಯ ಗಳು ಇಲ್ಲ. ಕುಮಾರಸ್ವಾಮಿ ಮುಖ್ಯ ಮಂತ್ರಿಯಾದರೆ ನೀರಿನ ಸೌಲಭ್ಯಕ್ಕೆ ಪ್ರಯತ್ನ ಮಾಡುತ್ತಾರೆ. ಜನರು ಜೆಡಿಎಸ್ ಬೆಂಬಲಸಬೇಕು’ ಎಂದು ಅವರು ಕೋರಿದರು.</p>.<p>ಪಕ್ಷದ ಅಭ್ಯರ್ಥಿ ಹರೀಶ್ ಮಾತ ನಾಡಿ, ‘ಈ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲುವು ಖಚಿತ ಹಾಗೂ ಕುಮಾರ<br /> ಸ್ವಾಮಿ ಅವರು ಮುಖ್ಯಮಂತ್ರಿ ಯಾಗುವುದು ನಿಜ. ಕ್ಷೇತ್ರದಲ್ಲಿ ಈವರೆಗೂ 3 ಬಾರಿ ಶಾಸಕರಾದವರು ಸಖರಾಯಪಟ್ಟಣ ಮತ್ತು ಲಕ್ಯಾ ಹೋಬಳಿಯ ನೀರಿನ ತೊಂದರೆ ನಿವಾರಿಸುವಲ್ಲಿ ಸೋತಿ ದ್ದಾರೆ. ಕರಗಡ ಕಾಮಗಾರಿ ಅವೈಜ್ಞಾನಿ ಕವಾಗಿದೆ. ಈ ಕ್ಷೇತ್ರದ ಜನ ಅವರನ್ನು ಸೋಲಿಸುವ ಮೂಲಕ ಬುದ್ಧಿ ಕಲಿಸ ಬೇಕು. ಅವರುಗಳ ಬಳಿ ಹಣವಿದೆ, ಆದರೆ ಜೆಡಿಎಸ್ ಜೊತೆ ಜನರ ಬಲವಿದೆ’ ಎಂದು ಹೇಳಿದರು.</p>.<p>ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಎಸ್.ಎಲ್.ಭೋಜೇಗೌಡ ಮಾತನಾಡಿ, ‘ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವ ಕನಸನ್ನು ಸಾರ್ವಜನಿಕರು ಕಾಣುತ್ತಿದ್ದಾರೆ. ಆ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ’ ಎಂದು ಅವರು ಹೇಳಿದರು.</p>.<p>‘ಕೇಂದ್ರದ ಬಿಜೆಪಿ ಸರ್ಕಾರ ಜನರಿಗೆ ಪೊಳ್ಳು ಭರವಸೆ ನೀಡುತ್ತಿದೆ. ಪೊಳ್ಳು ಭರವಸೆ ನೀಡುವವರನ್ನು ಮನೆಗೆ ಕಳುಹಿಸಬೇಕು. ರಾಜ್ಯದ ಕಾಂಗ್ರೆಸ್ ಸರ್ಕಾರದ ದುರಾಡಳಿತವನ್ನು ಕೊನೆ ಗಾಣಿಸಬೇಕು’ ಎಂದು ಹೇಳಿದರು.</p>.<p>ಪಕ್ಷದ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಮಾತನಾಡಿ, ‘ಜೆಡಿಎಸ್ ಅಭ್ಯರ್ಥಿಯನ್ನು ತಟಸ್ಥಗೊ ಳಿಸಲಾಗಿದೆ ಎಂದು ಕೆಲವು ಪಕ್ಷದ ಮುಖಂಡರು ಹೇಳಿಕೊಂಡು ತಿರುಗಾ ಡುತ್ತಿದ್ದಾರೆ. ಧೈರ್ಯವಿದ್ದರೆ ಆ ವಿಷಯ ವನ್ನು ತಮ್ಮ ಮುಂದೆ ಹೇಳಲಿ’ ಎಂದು ಸವಾಲು ಹಾಕಿದರು.</p>.<p>‘ನಗರದ ಎಂ.ಜಿ.ರಸ್ತೆ, ಐ.ಜಿ. ಮತ್ತು ಮಾರುಕಟ್ಟೆ ರಸ್ತೆ ದುರಸ್ತಿಯಲ್ಲಿ ಹಣ ಅಪವ್ಯಯವಾಗಿದೆ. ಕೆರೆಕಟ್ಟೆ ಸರಿಮಾಡುತ್ತೇವೆಂದು ಹಣವನ್ನು ಹಾಳು ಮಾಡಲಾಗಿದೆ’ ಎಂದು ಆರೋಪಿಸಿದರು.</p>.<p>‘ಪ್ರತಿಯೊಬ್ಬ ಕಾರ್ಯಕರ್ತ ಈ ಕ್ಷೇತ್ರದ ಪ್ರತಿ ಮನೆಗೆ ತೆರಳಿ ಜೆಡಿಎಸ್ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಬೇಕು ಎಂದು ತಿಳಿಸಿದರು.</p>.<p>ಅಲ್ಪಸಂಖ್ಯಾತ ವಿಭಾಗದ ನಿಸಾರ್ಅ ಹಮದ್ ಮಾತನಾಡಿ, ಈ ಬಾರಿ ಅಲ್ಪಸಂಖ್ಯಾತ ಮತಗಳು ಜಾತ್ಯತೀತ ಜನತಾದಳಕ್ಕೆ ಹರಿದು ಬರಲಿದೆ ಎಂದರು.ಮುಖಂಡರಾದ ಎಂ.ಡಿ.ರಮೇಶ್, ಹೊಲದಗದ್ದೆ ಗಿರೀಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು:</strong> ‘ಹೋರಾಟ ಮಾಡಿ ಸಾಕಾಗಿದೆ. ಜೆಡಿಎಸ್ ಗೆಲುವಿಗೆ ಕಾರ್ಯ ಕರ್ತರು ಟೊಂಕಕಟ್ಟಿ ನಿಲ್ಲಬೇಕು’ ಎಂದು ಜೆಡಿಎಸ್ ಮುಖಂಡ ಎಸ್.ಎಲ್.ಧರ್ಮೇಗೌಡ ಹೇಳಿದರು.</p>.<p>ಜೆಡಿಎಸ್ ಅಭ್ಯರ್ಥಿ ಬಿ.ಎಚ್.ಹರೀಶ್ ಅವರು ನಾಮಪತ್ರ ಸಲ್ಲಿಸಿದ ಬಳಿಕ ಧರ್ಮೇಗೌಡ ಅವರು ಹನುಮಂತಪ್ಪ ವೃತ್ತದಲ್ಲಿ ಕಾರ್ಯ ಕರ್ತರನ್ನು ಉದ್ದೇಶಿಸಿ ಮಾತನಾಡಿದರು. ‘ಈ ಕ್ಷೇತ್ರದಲ್ಲಿ ಬಿಜೆಪಿಯವರ ಅಹಂ ಕಾರಕ್ಕೆ ಕೊನೆ ಹಾಡಬೇಕು. ಈ ಕ್ಷೇತ್ರದಲ್ಲಿ ಬದಲಾವಣೆ ಶತ ಸಿದ್ಧ’ ಎಂದು ಹೇಳಿದರು.</p>.<p>‘ಕಣಿವೆಯ ಕೆಳಭಾಗದಲ್ಲಿ ಕುಡಿ ಯುವ ನೀರಿಗೆ ತೊಂದರೆಯಾಗಿದೆ. ಯಾವುದೇ ನೀರಾವರಿ ಸೌಲಭ್ಯ ಗಳು ಇಲ್ಲ. ಕುಮಾರಸ್ವಾಮಿ ಮುಖ್ಯ ಮಂತ್ರಿಯಾದರೆ ನೀರಿನ ಸೌಲಭ್ಯಕ್ಕೆ ಪ್ರಯತ್ನ ಮಾಡುತ್ತಾರೆ. ಜನರು ಜೆಡಿಎಸ್ ಬೆಂಬಲಸಬೇಕು’ ಎಂದು ಅವರು ಕೋರಿದರು.</p>.<p>ಪಕ್ಷದ ಅಭ್ಯರ್ಥಿ ಹರೀಶ್ ಮಾತ ನಾಡಿ, ‘ಈ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲುವು ಖಚಿತ ಹಾಗೂ ಕುಮಾರ<br /> ಸ್ವಾಮಿ ಅವರು ಮುಖ್ಯಮಂತ್ರಿ ಯಾಗುವುದು ನಿಜ. ಕ್ಷೇತ್ರದಲ್ಲಿ ಈವರೆಗೂ 3 ಬಾರಿ ಶಾಸಕರಾದವರು ಸಖರಾಯಪಟ್ಟಣ ಮತ್ತು ಲಕ್ಯಾ ಹೋಬಳಿಯ ನೀರಿನ ತೊಂದರೆ ನಿವಾರಿಸುವಲ್ಲಿ ಸೋತಿ ದ್ದಾರೆ. ಕರಗಡ ಕಾಮಗಾರಿ ಅವೈಜ್ಞಾನಿ ಕವಾಗಿದೆ. ಈ ಕ್ಷೇತ್ರದ ಜನ ಅವರನ್ನು ಸೋಲಿಸುವ ಮೂಲಕ ಬುದ್ಧಿ ಕಲಿಸ ಬೇಕು. ಅವರುಗಳ ಬಳಿ ಹಣವಿದೆ, ಆದರೆ ಜೆಡಿಎಸ್ ಜೊತೆ ಜನರ ಬಲವಿದೆ’ ಎಂದು ಹೇಳಿದರು.</p>.<p>ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಎಸ್.ಎಲ್.ಭೋಜೇಗೌಡ ಮಾತನಾಡಿ, ‘ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವ ಕನಸನ್ನು ಸಾರ್ವಜನಿಕರು ಕಾಣುತ್ತಿದ್ದಾರೆ. ಆ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ’ ಎಂದು ಅವರು ಹೇಳಿದರು.</p>.<p>‘ಕೇಂದ್ರದ ಬಿಜೆಪಿ ಸರ್ಕಾರ ಜನರಿಗೆ ಪೊಳ್ಳು ಭರವಸೆ ನೀಡುತ್ತಿದೆ. ಪೊಳ್ಳು ಭರವಸೆ ನೀಡುವವರನ್ನು ಮನೆಗೆ ಕಳುಹಿಸಬೇಕು. ರಾಜ್ಯದ ಕಾಂಗ್ರೆಸ್ ಸರ್ಕಾರದ ದುರಾಡಳಿತವನ್ನು ಕೊನೆ ಗಾಣಿಸಬೇಕು’ ಎಂದು ಹೇಳಿದರು.</p>.<p>ಪಕ್ಷದ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಮಾತನಾಡಿ, ‘ಜೆಡಿಎಸ್ ಅಭ್ಯರ್ಥಿಯನ್ನು ತಟಸ್ಥಗೊ ಳಿಸಲಾಗಿದೆ ಎಂದು ಕೆಲವು ಪಕ್ಷದ ಮುಖಂಡರು ಹೇಳಿಕೊಂಡು ತಿರುಗಾ ಡುತ್ತಿದ್ದಾರೆ. ಧೈರ್ಯವಿದ್ದರೆ ಆ ವಿಷಯ ವನ್ನು ತಮ್ಮ ಮುಂದೆ ಹೇಳಲಿ’ ಎಂದು ಸವಾಲು ಹಾಕಿದರು.</p>.<p>‘ನಗರದ ಎಂ.ಜಿ.ರಸ್ತೆ, ಐ.ಜಿ. ಮತ್ತು ಮಾರುಕಟ್ಟೆ ರಸ್ತೆ ದುರಸ್ತಿಯಲ್ಲಿ ಹಣ ಅಪವ್ಯಯವಾಗಿದೆ. ಕೆರೆಕಟ್ಟೆ ಸರಿಮಾಡುತ್ತೇವೆಂದು ಹಣವನ್ನು ಹಾಳು ಮಾಡಲಾಗಿದೆ’ ಎಂದು ಆರೋಪಿಸಿದರು.</p>.<p>‘ಪ್ರತಿಯೊಬ್ಬ ಕಾರ್ಯಕರ್ತ ಈ ಕ್ಷೇತ್ರದ ಪ್ರತಿ ಮನೆಗೆ ತೆರಳಿ ಜೆಡಿಎಸ್ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಬೇಕು ಎಂದು ತಿಳಿಸಿದರು.</p>.<p>ಅಲ್ಪಸಂಖ್ಯಾತ ವಿಭಾಗದ ನಿಸಾರ್ಅ ಹಮದ್ ಮಾತನಾಡಿ, ಈ ಬಾರಿ ಅಲ್ಪಸಂಖ್ಯಾತ ಮತಗಳು ಜಾತ್ಯತೀತ ಜನತಾದಳಕ್ಕೆ ಹರಿದು ಬರಲಿದೆ ಎಂದರು.ಮುಖಂಡರಾದ ಎಂ.ಡಿ.ರಮೇಶ್, ಹೊಲದಗದ್ದೆ ಗಿರೀಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>