<p><strong>ಕೋಲ್ಕತ್ತ</strong>: ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಸಂಸದರು, ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬಿಜೆಪಿ ಮುಖಂಡರ ಕಾರ್ಯತಂತ್ರಕ್ಕೆ ಪಕ್ಷದೊಳಗೆ ಅಪಸ್ವರ ವ್ಯಕ್ತವಾಗಿದೆ.</p>.<p>ಟಿಎಂಸಿ ನಾಯಕರ ಸೇರ್ಪಡೆ ಬಗ್ಗೆ ಬಿಜೆಪಿಯ ಕೆಲ ಮುಖಂಡರಿಗೆ ಮೊದಲೇ ಅಸಮಾಧಾನವಿತ್ತು. ಲಾಭ್ಪುರ್ ಕ್ಷೇತ್ರದ ಶಾಸಕ ಮನಿರುಲ್ ಇಸ್ಲಾಂ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿದ ನಂತರ ಅಸಮಾಧಾನ ಬಹಿರಂಗವಾಗಿದೆ.</p>.<p>ಮನಿರುಲ್ ಸೇರ್ಪಡೆಗೆ ಕೆಲ ಮುಖಂಡರು ಪಕ್ಷದ ವೇದಿಕೆಯಲ್ಲಿಯೇ ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಇವರ ಸೇರ್ಪಡೆಯನ್ನು ವಿರೋಧಿಸಿ ಪಕ್ಷದಲ್ಲಿನ ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದಾರೆ. ಆರ್ಎಸ್ಎಸ್ನ ಕೆಲವು ನಾಯಕರೂ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.</p>.<p>‘ಮನಿರುಲ್ ಇಸ್ಲಾಂ ಅವರ ದೌರ್ಜನ್ಯವನ್ನು ಖಂಡಿಸಿಯೇಬಿರ್ಭುಮ್ ಜಿಲ್ಲೆಯ ಜನರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಹೀಗಿರುವಾಗ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಜನರಿಗೆ ಏನು ಸಂದೇಶ ನೀಡುತ್ತಿದ್ದೀರಿ’ ಎಂದು ಹೌರಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಂತಿದೇವ್ ಸೇನ್ಗುಪ್ತ ಪಕ್ಷದ ನಾಯಕರನ್ನು ಪ್ರಶ್ನಿಸಿದ್ದಾರೆ.</p>.<p>‘ಬಿಜೆಪಿಯ ಜಿಲ್ಲಾ ಘಟಕವು ಮನಿರುಲ್ ಅವರನ್ನು ನಾಯಕ ಎಂದು ಒಪ್ಪುವುದಿಲ್ಲ. ನಾವು ಅವರನ್ನು ಕಡೆಗಣಿಸುತ್ತೇವೆ. ಆ ಕಾರಣಕ್ಕೆ ನಮ್ಮನ್ನು ಪಕ್ಷದಿಂದ ಕೈಬಿಟ್ಟರೂ ಬೇಸರವಿಲ್ಲ’ ಎಂದು ಬಿಜೆಪಿಯ ಬಿರ್ಭುಮ್ ಜಿಲ್ಲೆಯ ಮುಖಂಡ ಕಲೊಸೊನಾ ಮಂಡಲ್ ಹೇಳಿದ್ದಾರೆ.</p>.<p>ಮನಿರುಲ್ ಇಸ್ಲಾಂ ಅವರನ್ನು ಪಕ್ಷಕ್ಕೆ ಸೇರಿಸುವ ಮೂಲಕ ‘ಅಲ್ಪಸಂಖ್ಯಾತ ಸಮುದಾಯದವರನ್ನೂ ಬಿಜೆಪಿ ಸ್ವಾಗತಿಸುತ್ತದೆ’ ಎಂಬ ಸಂದೇಶವನ್ನು ನೀಡಲು ಪಕ್ಷ ಬಯಸಿದೆ. ಜೊತೆಗೆ ಟಿಎಂಸಿಯಿಂದ ಇನ್ನಷ್ಟು ನಾಯಕರನ್ನು ಸೆಳೆಯುವ ಉದ್ದೇಶವೂ ಇದೆ ಎಂದೂ ವಿಶ್ಲೇಷಿಸಲಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ</strong>: ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಸಂಸದರು, ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬಿಜೆಪಿ ಮುಖಂಡರ ಕಾರ್ಯತಂತ್ರಕ್ಕೆ ಪಕ್ಷದೊಳಗೆ ಅಪಸ್ವರ ವ್ಯಕ್ತವಾಗಿದೆ.</p>.<p>ಟಿಎಂಸಿ ನಾಯಕರ ಸೇರ್ಪಡೆ ಬಗ್ಗೆ ಬಿಜೆಪಿಯ ಕೆಲ ಮುಖಂಡರಿಗೆ ಮೊದಲೇ ಅಸಮಾಧಾನವಿತ್ತು. ಲಾಭ್ಪುರ್ ಕ್ಷೇತ್ರದ ಶಾಸಕ ಮನಿರುಲ್ ಇಸ್ಲಾಂ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿದ ನಂತರ ಅಸಮಾಧಾನ ಬಹಿರಂಗವಾಗಿದೆ.</p>.<p>ಮನಿರುಲ್ ಸೇರ್ಪಡೆಗೆ ಕೆಲ ಮುಖಂಡರು ಪಕ್ಷದ ವೇದಿಕೆಯಲ್ಲಿಯೇ ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಇವರ ಸೇರ್ಪಡೆಯನ್ನು ವಿರೋಧಿಸಿ ಪಕ್ಷದಲ್ಲಿನ ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದಾರೆ. ಆರ್ಎಸ್ಎಸ್ನ ಕೆಲವು ನಾಯಕರೂ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.</p>.<p>‘ಮನಿರುಲ್ ಇಸ್ಲಾಂ ಅವರ ದೌರ್ಜನ್ಯವನ್ನು ಖಂಡಿಸಿಯೇಬಿರ್ಭುಮ್ ಜಿಲ್ಲೆಯ ಜನರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಹೀಗಿರುವಾಗ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಜನರಿಗೆ ಏನು ಸಂದೇಶ ನೀಡುತ್ತಿದ್ದೀರಿ’ ಎಂದು ಹೌರಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಂತಿದೇವ್ ಸೇನ್ಗುಪ್ತ ಪಕ್ಷದ ನಾಯಕರನ್ನು ಪ್ರಶ್ನಿಸಿದ್ದಾರೆ.</p>.<p>‘ಬಿಜೆಪಿಯ ಜಿಲ್ಲಾ ಘಟಕವು ಮನಿರುಲ್ ಅವರನ್ನು ನಾಯಕ ಎಂದು ಒಪ್ಪುವುದಿಲ್ಲ. ನಾವು ಅವರನ್ನು ಕಡೆಗಣಿಸುತ್ತೇವೆ. ಆ ಕಾರಣಕ್ಕೆ ನಮ್ಮನ್ನು ಪಕ್ಷದಿಂದ ಕೈಬಿಟ್ಟರೂ ಬೇಸರವಿಲ್ಲ’ ಎಂದು ಬಿಜೆಪಿಯ ಬಿರ್ಭುಮ್ ಜಿಲ್ಲೆಯ ಮುಖಂಡ ಕಲೊಸೊನಾ ಮಂಡಲ್ ಹೇಳಿದ್ದಾರೆ.</p>.<p>ಮನಿರುಲ್ ಇಸ್ಲಾಂ ಅವರನ್ನು ಪಕ್ಷಕ್ಕೆ ಸೇರಿಸುವ ಮೂಲಕ ‘ಅಲ್ಪಸಂಖ್ಯಾತ ಸಮುದಾಯದವರನ್ನೂ ಬಿಜೆಪಿ ಸ್ವಾಗತಿಸುತ್ತದೆ’ ಎಂಬ ಸಂದೇಶವನ್ನು ನೀಡಲು ಪಕ್ಷ ಬಯಸಿದೆ. ಜೊತೆಗೆ ಟಿಎಂಸಿಯಿಂದ ಇನ್ನಷ್ಟು ನಾಯಕರನ್ನು ಸೆಳೆಯುವ ಉದ್ದೇಶವೂ ಇದೆ ಎಂದೂ ವಿಶ್ಲೇಷಿಸಲಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>