ಹಣಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿರುವ ಕಾಂಗ್ರೆಸ್ ಮುಖಂಡ ಡಿ.ಕೆ ಶಿವಕುಮಾರ್ ಅವರು ಜಾಮೀನು ಕೋರಿ ಸಲ್ಲಿಸಿರುವಅರ್ಜಿಯ ವಿಚಾರಣೆ ಈಗಾಗಲೇ ಪೂರ್ಣಗೊಂಡಿದೆ. ಅದರ ಅಂತಿಮ ತೀರ್ಪನ್ನು ದೆಹಲಿಯ ರೋಸ್ ಅವೆನ್ಯೂ ರಸ್ತೆಯಲ್ಲಿರುವ ವಿಶೇಷ ನ್ಯಾಯಾಲಯ ಬುಧವಾರ ಪ್ರಕಟಿಸಲಿದೆ.ಈ ಮಹತ್ವದ ಬೆಳವಣಿಗೆಯ ಕ್ಷಣ ಕ್ಷಣದ ಮಾಹಿತಿ ಇಲ್ಲಿ ಸಿಗಲಿದೆ.
***
05.36– ಪ್ರಕರಣಗಳು ಬಾಕಿ ಇರುವುದರಿಂದ ಜಾಮೀನು ಸಿಕ್ಕಿಲ್ಲ: ಡಿಕೆ ಸುರೇಶ್ ಹೇಳಿಕೆ
ಡಿ.ಕೆ.ಶಿವಕುಮಾರ್ ಅವರಿಗೆ ಸಂಬಂಧಿಸಿದ ಪ್ರಕರಣ ಬಾಕಿ ಇರುವುದರಿಂದ ಜಾಮೀನು ನೀಡಲಾಗದು ಎಂದು ಇ.ಡಿ.ವಿಶೇಷ ನ್ಯಾಯಾಲಯದ ಆದೇಶದಲ್ಲಿ ತಿಳಿಸಲಾಗಿದೆ. ಆದರೆ, ಶಿವಕುಮಾರ್ ಅವರ ಆರೋಗ್ಯ ಕುರಿತು ಕಾರಾಗೃಹ ಅಧಿಕಾರಿಗಳು ನಿಗಾ ವಹಿಸುವ ಭರವಸೆಯನ್ನು ನ್ಯಾಯಾಲಯ ನೀಡಿದೆ ಎಂದು ಸಂಸದ ಡಿ.ಕೆ. ಸುರೇಶ ತಿಳಿಸಿದರು.
ಡಿಕೆಶಿ ಜಾಮೀನು ಅರ್ಜಿ ವಜಾಗೊಳಿಸಿವಲ ನ್ಯಾಯಾಲಯ ಆದೇಶ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ನ್ಯಾಯ ಸಿಗುವ ಭರವಸೆ ಇದೆ ಎಂದರು
ಪ್ರಭಾವಿಯಾದ ಆರೋಪಿಯು ೩೧೭ ಖಾತೆ ಹೊಂದಿದ್ದು ತನಿಖೆ ಮುಂದುವರಿಯಬೇಕಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಶಿವಕುಮಾರ್ ಅವರು ಆರೋಗ್ಯವಾಗಿದ್ದಾರೆ. ನ್ಯಾಯಾಲಯದ ಮೇಲೆ ನಮಗೆ ಭರವಸೆ ಇದೆ. ಅಭಿಮಾನಿಗಳು ಯಾವುದೇ ಕಾರಣಕ್ಕೂ ಪ್ರತಿಭಟನೆ ಮಾಡಬಾರದು ಎಂದು ಅವರು ಮನವಿ ಮಾಡಿದರು.
05.15–ಡಿ.ಕೆ ಶಿವಕುಮಾರ್ ಅವರ ಜಾಮೀನು ಅರ್ಜಿಯನ್ನು ದೆಹಲಿಯ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ. ಹೀಗಾಗಿ ಡಿಕೆಶಿ ತಿಹಾರ್ ಜೈಲು ವಾಸಮುಂದುವರಿದಿದೆ.
Delhi's Rouse Avenue Court rejects regular bail plea of Karnataka Congress leader DK Shivakumar, in connection with a money laundering case. He is currently lodged in Tihar Jail under judicial custody of the Enforcement Directorate. (file pic) pic.twitter.com/sgURLYFKMA
— ANI (@ANI) September 25, 2019
04.10–ದೆಹಲಿಯ ರೋಸ್ ಅವೆನ್ಯೂ ರಸ್ತೆಯಲ್ಲಿರುವ ನ್ಯಾಯಾಲಯದ ಅವರಣದಲ್ಲಿ ಡಿಕೆ ಶಿವಕುಮಾರ್ ಅವರ ಪರ ಬೆಂಬಲಿಗರು ಭಾರಿ ಪ್ರಮಾಣದಲ್ಲಿ ಜಮಾಯಿಸಿದ್ದಾರೆ. ಹೀಗಾಗಿ ಕೋರ್ಟ್ ಸುತ್ತಲೂ ಬಿಗಿ ಭದ್ರತೆ ಒದಗಿಸಲಾಗಿದೆ.
ಇದನ್ನೂ ಓದಿ:ಅನರ್ಹರ ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ
03.42–ಕೋರ್ಟ್ ಹಾಲ್ಗೆ ಡಿಕೆಶಿ ಪರ, ಇಡಿ ಪರ ವಕೀಲರ ಆಗಮನ
.@narendramodi unleashes JungleRaj
— Karnataka Congress (@INCKarnataka) September 25, 2019
🔹ByElections in Karnataka @DKShivakumar arrested
🔹Elections in Maharashtra
FIR against S.Pawar by ED
🔹Girl accuses @BJP4India's ex-minister of Rape; Girl gets arrested
Every institution is remote controlled by govt making mockery of system.
03.40– ಕೋರ್ಟ್ ಹಾಲ್ಗೆ ಡಿಕೆಶಿ ಸೋದರ ಡಿ.ಕೆ ಸುರೇಶ್ ಆಗಮನ
03.27– ಕೋರ್ಟ್ ಹಾಲ್ಗೆ ಆಗಮಿಸಿದ ಡಿ.ಕೆ ಶಿವಕುಮಾರ್ ಪರ ವಕೀಲರು
ಇದನ್ನೂ ಓದಿ:ಡಿಕೆಶಿ ಬಂಧನ: ಪತನದಂಚಿಗೆ ಮತ್ತೊಂದು ‘ಸಾಮ್ರಾಜ್ಯ’?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.