<p><strong>ಮುಂಬೈ :</strong> ಕೇವಲ ಐದು ರೂಪಾಯಿಗಾಗಿ 68 ವರ್ಷದ ವೃದ್ಧ ಆಟೋರಿಕ್ಷಾ ಚಾಲಕನನ್ನು ಹತ್ಯೆ ಮಾಡಿದ ಘಟನೆ ಮುಂಬೈನ ಪಶ್ಚಿಮ ಉಪನಗರ ಬೊರಿವಾಲಿಯಾದಲ್ಲಿ ನಡೆದಿದೆ.</p>.<p>ಆಟೋ ಚಾಲಕ ರಾಮ್ದುಲಾರ್ ಸರ್ಜೂ ಯಾದವ್ ಬೊರಿವಾಲಿಯಾದ ಸಿಎನ್ಜಿ ಗ್ಯಾಸ್ ಸ್ಟೇಷನ್ನಲ್ಲಿ ಮಂಗಳವಾರ ಸಂಜೆ , ತನ್ನ ರಿಕ್ಷಾಕ್ಕೆ ಗ್ಯಾಸ್ ತುಂಬಿಸಿಕೊಳ್ಳಲು ಹೋಗಿದ್ದಾರೆ. ಅದೇ ವೇಳೆ ತಮ್ಮ ಮಗನಿಗೆ ಕರೆ ಮಾಡಿ ಗ್ಯಾಸ್ ಸ್ಟೇಷನ್ ಬಳಿ ಬರುವಂತೆ ತಿಳಿಸಿದ್ದಾರೆ.</p>.<p>₹ 205 ಗ್ಯಾಸ್ ಭರ್ತಿ ಮಾಡಿದ ಬಳಿಕ, ಗ್ಯಾಸ್ ಸ್ಟೇಷನ್ನ ಕೆಲಸಗಾರ ಸಂತೋಷ್ ಯಾದವ್ ಎಂಬಾತನಿಗೆ ₹ 500ರ ನೋಟು ನೀಡಿದ್ದಾರೆ. ಸಂತೋಷ್ ₹ 295 ವಾಪಸ್ ಹಣ ನೀಡುವ ಬದಲು ₹ 290 ಮಾತ್ರ ನೀಡಿದ್ದಾನೆ. ಇದಕ್ಕೆ ಚಾಲಕ ರಾಮ್ದುಲಾರ್ ಆಕ್ಷೇಪ ವ್ಯಕ್ತಪಡಿಸಿ, ₹ 5 ವಾಪಸ್ ನೀಡುವಂತೆ ಕೇಳಿದ್ದಾರೆ.</p>.<p>‘ಇದರಿಂದ ಕೆರಳಿದ ಸಂತೋಷ್, ಅಲ್ಲಿದ್ದ ಇತರ ಉದ್ಯೋಗಿಗಳ ಜತೆ ಸೇರಿ ವೃದ್ಧ ಆಟೋ ಚಾಲಕಕನ್ನು ಥಳಿಸಿದ್ದಾನೆ. ಚಾಲಕ ಪ್ರಜ್ಞೆ ತಪ್ಪಿದ ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆತ ಈಗಾಗಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದರು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.</p>.<p>ಘಟನೆಗೆ ಸಂಬಂಧಿಸಿದಂತೆ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಗ್ಯಾಸ್ ಸ್ಟೇಷನ್ನ ಐವರು ಕೆಲಸಗಾರರನ್ನು ಬಂಧಿಸಲಾಗಿದೆ ಎಂದು ಕಸ್ತೂರ್ ಬಾ ಮಾರ್ಗ ಪೊಲೀಸ್ ಸ್ಟೇಷನ್ನ ಹಿರಿಯ ಪೊಲೀಸ್ ಅಧಿಕಾರಿ ನಾಮ್ದೇವ್ ಶಿಂಧೆ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ :</strong> ಕೇವಲ ಐದು ರೂಪಾಯಿಗಾಗಿ 68 ವರ್ಷದ ವೃದ್ಧ ಆಟೋರಿಕ್ಷಾ ಚಾಲಕನನ್ನು ಹತ್ಯೆ ಮಾಡಿದ ಘಟನೆ ಮುಂಬೈನ ಪಶ್ಚಿಮ ಉಪನಗರ ಬೊರಿವಾಲಿಯಾದಲ್ಲಿ ನಡೆದಿದೆ.</p>.<p>ಆಟೋ ಚಾಲಕ ರಾಮ್ದುಲಾರ್ ಸರ್ಜೂ ಯಾದವ್ ಬೊರಿವಾಲಿಯಾದ ಸಿಎನ್ಜಿ ಗ್ಯಾಸ್ ಸ್ಟೇಷನ್ನಲ್ಲಿ ಮಂಗಳವಾರ ಸಂಜೆ , ತನ್ನ ರಿಕ್ಷಾಕ್ಕೆ ಗ್ಯಾಸ್ ತುಂಬಿಸಿಕೊಳ್ಳಲು ಹೋಗಿದ್ದಾರೆ. ಅದೇ ವೇಳೆ ತಮ್ಮ ಮಗನಿಗೆ ಕರೆ ಮಾಡಿ ಗ್ಯಾಸ್ ಸ್ಟೇಷನ್ ಬಳಿ ಬರುವಂತೆ ತಿಳಿಸಿದ್ದಾರೆ.</p>.<p>₹ 205 ಗ್ಯಾಸ್ ಭರ್ತಿ ಮಾಡಿದ ಬಳಿಕ, ಗ್ಯಾಸ್ ಸ್ಟೇಷನ್ನ ಕೆಲಸಗಾರ ಸಂತೋಷ್ ಯಾದವ್ ಎಂಬಾತನಿಗೆ ₹ 500ರ ನೋಟು ನೀಡಿದ್ದಾರೆ. ಸಂತೋಷ್ ₹ 295 ವಾಪಸ್ ಹಣ ನೀಡುವ ಬದಲು ₹ 290 ಮಾತ್ರ ನೀಡಿದ್ದಾನೆ. ಇದಕ್ಕೆ ಚಾಲಕ ರಾಮ್ದುಲಾರ್ ಆಕ್ಷೇಪ ವ್ಯಕ್ತಪಡಿಸಿ, ₹ 5 ವಾಪಸ್ ನೀಡುವಂತೆ ಕೇಳಿದ್ದಾರೆ.</p>.<p>‘ಇದರಿಂದ ಕೆರಳಿದ ಸಂತೋಷ್, ಅಲ್ಲಿದ್ದ ಇತರ ಉದ್ಯೋಗಿಗಳ ಜತೆ ಸೇರಿ ವೃದ್ಧ ಆಟೋ ಚಾಲಕಕನ್ನು ಥಳಿಸಿದ್ದಾನೆ. ಚಾಲಕ ಪ್ರಜ್ಞೆ ತಪ್ಪಿದ ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆತ ಈಗಾಗಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದರು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.</p>.<p>ಘಟನೆಗೆ ಸಂಬಂಧಿಸಿದಂತೆ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಗ್ಯಾಸ್ ಸ್ಟೇಷನ್ನ ಐವರು ಕೆಲಸಗಾರರನ್ನು ಬಂಧಿಸಲಾಗಿದೆ ಎಂದು ಕಸ್ತೂರ್ ಬಾ ಮಾರ್ಗ ಪೊಲೀಸ್ ಸ್ಟೇಷನ್ನ ಹಿರಿಯ ಪೊಲೀಸ್ ಅಧಿಕಾರಿ ನಾಮ್ದೇವ್ ಶಿಂಧೆ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>