‘ಬುಧವಾರ ನಸುಕಿನ 1.30ರಲ್ಲಿ ಶಬರಿಮಲೆಯೆಡೆಗೆ ಯಾತ್ರೆ ಆರಂಭಿಸಿದೆವು. ಅಯ್ಯಪ್ಪನ ಸನ್ನಿಧಾನ ತಲುಪಿದಾಗ ಸುಮಾರು 3.30. ಅಯ್ಯಪ್ಪನ ಎದುರು ನಿಂತು ಕಣ್ಣು ಮುಚ್ಚಿ ಪ್ರಾರ್ಥಿಸಿದಾಗ ಬದುಕು ಧನ್ಯ ಎನಿಸಿತ್ತು. ಪುರುಷ ಭಕ್ತರೊಂದಿಗೆ ಬೆಟ್ಟ ಇಳಿದೆವು. ನಮಗೆ ಜೀವ ಬೆದರಿಕೆ ಇದ್ದ ಕಾರಣ,ಪಂಪಾ ತಲುಪಿದ ನಂತರ ಭದ್ರತೆಯ ಕಾರಣಕ್ಕೆ ಪೊಲೀಸರು ನಮ್ಮನ್ನು ರಹಸ್ಯ ಸ್ಥಳವೊಂದಕ್ಕೆ ಕರೆದೊಯ್ದರು.