ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರವಟ್ಟಿಗೆಯಲ್ಲಿ ‍ಪುಷ್ಕಳ ಭೋಜನ

Last Updated 30 ಮಾರ್ಚ್ 2018, 9:22 IST
ಅಕ್ಷರ ಗಾತ್ರ

ಮಾಗಡಿ: ತಿರುವೆಂಗಳನಾಥ ರಂಗನಾಥಸ್ವಾಮಿ ಬ್ರಹ್ಮರಥೋತ್ಸವ ಮಾ.30ರಂದು ಮಧ್ಯಾಹ್ನ12.30ರಿಂದ 1ರವರೆಗೆ ನಡೆಯಲಿದೆ. ರಥ ಬೀದಿ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ.

ಅರವಟಿಗೆಗಳಲ್ಲಿ ಉಚಿತವಾಗಿ ಪುಷ್ಕಳ ಭೋಜನ ನೀಡಲು ಸಕಲ ಸಿದ್ಧತೆ ನಡೆದಿದೆ. ತೇರಿನ ದಿನ ಬರುವ ಭಕ್ತರಿಗಾಗಿ ಅವರೆಕಾಳಿನ ಜೊತೆಗೆ ಹಲಸಿನ ಕೊತ್ತುಕಾಯಿ ಸಾರು, ಬಿಸಿಬಿಸಿ ರಾಗಿಮುದ್ದೆ, ತುಪ್ಪ, ಸಿಹಿಬೂಂದಿ, ಅನ್ನಸಾಂಬಾರು, ಮಜ್ಜಿಗೆಹುಳಿ ಹೊಟ್ಟೆ ತುಂಬುವಷ್ಟು ಬಡಿಸಲಾಗುವುದು.

ರಥಕ್ಕೆ ಪೂಜೆ ಸಲ್ಲಿಸಿದ ಕೂಡಲೇ ಹಣ್ಣಿನ ರಸಾಯನ, ಕೋಸುಂಬರಿ, ಬೇಲದ ಹಣ್ಣಿನ ಪಾನಕ, ಮಜ್ಜಿಗೆ ನೀಡಲಾಗುವುದು.

ತಿರುಪತಿ ತಿಮ್ಮಪ್ಪನನ್ನು ಚಿನ್ನದರಂಗ ಎಂದರೆ, ಮಾಗಡಿ ತಿರುವೆಂಗಳನಾಥ ರಂಗನಾಥಸ್ವಾಮಿಯನ್ನು ಅನ್ನದ ರಂಗ ಎಂದೇ ಕರೆಯುವ ಪ್ರತೀತಿ ಇದೆ ಎಂದು ತಾಲ್ಲೂಕು ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಎಂ.ಜಿ.ಗೋಪಾಲ್ ತಿಳಿಸಿದರು.

ಒಕ್ಕಲಿಗರ ಅರವಟ್ಟಿಗೆಗೆ ವಿಜಯನಗರ ಆದಿಚುಂಚನಗಿರಿ ಮಠದ ಸೌಮ್ಯನಾಥಸ್ವಾಮೀಜಿ ಚಾಲನೆ ನೀಡಲಿದ್ದಾರೆ. ಶಿರಾ ತಾಲ್ಲೂಕು ಪಟ್ಟನಾಯಕನಹಳ್ಳಿ ಗುರುಗುಂಡ ಬ್ರಹ್ಮೇಶ್ವರ ಮಠದ ನಂಜಾವಧೂತಸ್ವಾಮಿ, ಕುಮಾರ ಚಂದ್ರಶೇಖರಸ್ವಾಮಿ ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT