‘ಭಗವಾನ್ ಕೃಷ್ಣನ ಸಣ್ಣ ವಿಗ್ರಹವನ್ನು ಹೊತ್ತೊಯ್ಯುತ್ತಿದ್ದ ಈ ಆನೆಯು ನೋಡಲು ಆಕರ್ಷಕವಾಗಿದ್ದ ಕಾರಣ, ಇದನ್ನು ‘ಗಜರತ್ನಂ’ ಎಂದೇ ಕರೆಯಲಾಗುತ್ತಿತ್ತು. ದಶಕಗಳ ಕಾಲ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಈ ಆನೆ ಬುಧವಾರ ಮಧ್ಯಾಹ್ನ 2.10ಕ್ಕೆ ಸಾವನ್ನಪ್ಪಿತು’ ಎಂದು ಗುರುವಾಯೂರು ದೇವಸ್ಥಾನದ ಅಧ್ಯಕ್ಷ ಕೆ.ಬಿ. ಮೋಹನ್ದಾಸ್ ಹೇಳಿದ್ದಾರೆ.