ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಾಯೂರು ದೇವಸ್ಥಾನದ ಆನೆ ಸಾವು

Last Updated 27 ಫೆಬ್ರುವರಿ 2020, 8:03 IST
ಅಕ್ಷರ ಗಾತ್ರ

ತ್ರಿಶೂರ್ : ಗುರುವಾಯೂರು ದೇವಸ್ಥಾನದ ಆಕರ್ಷಣೆಗಳಲ್ಲೊಂದಾಗಿದ್ದ ಆನೆ ‘ಗುರುವಾಯೂರು ಪದ್ಮನಾಭನ್’ (84) ಬುಧವಾರ ಮಧ್ಯಾಹ್ನ ನಿಧನ ಹೊಂದಿದೆ ಎಂದು ದೇವಸ್ಥಾನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಭಗವಾನ್ ಕೃಷ್ಣನ ಸಣ್ಣ ವಿಗ್ರಹವನ್ನು ಹೊತ್ತೊಯ್ಯುತ್ತಿದ್ದ ಈ ಆನೆಯು ನೋಡಲು ಆಕರ್ಷಕವಾಗಿದ್ದ ಕಾರಣ, ಇದನ್ನು ‘ಗಜರತ್ನಂ’ ಎಂದೇ ಕರೆಯಲಾಗುತ್ತಿತ್ತು. ದಶಕಗಳ ಕಾಲ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಈ ಆನೆ ಬುಧವಾರ ಮಧ್ಯಾಹ್ನ 2.10ಕ್ಕೆ ಸಾವನ್ನಪ್ಪಿತು’ ಎಂದು ಗುರುವಾಯೂರು ದೇವಸ್ಥಾನದ ಅಧ್ಯಕ್ಷ ಕೆ.ಬಿ. ಮೋಹನ್‌ದಾಸ್ ಹೇಳಿದ್ದಾರೆ.

ಕೆಲ ವಾರಗಳಿಂದ ಆನೆಯ ಮೈ ಊದಿಕೊಂಡಿತ್ತು. ಇದಕ್ಕಾಗಿ ಆನೆಗೆ ಚಿಕಿತ್ಸೆ ನೀಡಲಾಗುತ್ತಿತ್ತು. ‘ಪದ್ಮನಾಭನ್’ ನಿಧನದಿಂದ ದೇವಸ್ಥಾನದಲ್ಲಿರುವ ಆನೆಗಳ ಸಂಖ್ಯೆ 47ಕ್ಕೆ ಇಳಿದಿದೆ. ‘ಪದ್ಮನಾಭನ್’ ತ್ರಿಶೂರ್ ಪೂರ್ಣಂ ಸೇರಿದಂತೆ ಅನೇಕದೇಗುಲಗಳ ಉತ್ಸವದಲ್ಲಿ ಪಾಲ್ಗೊಂಡಿತ್ತು. 2004ರಲ್ಲಿ ಪಾಲಕ್ಕಾಡ್‌ ಜಿಲ್ಲೆಯಲ್ಲಿ ನಡೆದ ನೆನ್ಮರ–ವೆಲ್ಲಂಗಿ ವೇಳಾ ಹಬ್ಬದಲ್ಲಿ ಈ ಆನೆ ₹ 2.22 ಲಕ್ಷ ಸಂಭಾವನೆ ಪಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT