ಲಖನೌ: ಎಚ್1ಎನ್1 ಸೋಂಕಿನಿಂದ ಮೀರತ್ನಲ್ಲಿ ಕಳೆದೆರಡು ದಿನಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ ಈ ಸೋಂಕಿಗೆ ಬಲಿಯಾದವರ ಸಂಖ್ಯೆ 10ಕ್ಕೇರಿದಂತಾಗಿದೆ.
71ಜನರಲ್ಲಿ ಸೋಂಕಿರುವುದು ದೃಢಪಟ್ಟಿದ್ದು, ಈ ಪೈಕಿ 17 ಜನರು ಉತ್ತರ ಪ್ರದೇಶದ ಪ್ರಾಂತೀಯ ಸಶಸ್ತ್ರ ದಳಕ್ಕೆ (ಪಿಎಸಿ) ಸೇರಿದ ಯೋಧರಿದ್ದಾರೆ. ತೀವ್ರವಾಗಿ ಸೋಂಕು ಹರಡುತ್ತಿರುವ ಕಾರಣ, ತಜ್ಞರ ತಂಡವೊಂದನ್ನು ರಾಜ್ಯ ಸರ್ಕಾರ ಮೀರತ್ಗೆ ಕಳುಹಿಸಿದೆ.