ವಿಧಾನಸಭಾ ಚುನಾವಣೆ–2018ರ ಅಂಗವಾಗಿ ಸ್ವಯಂ ಸೇವಾ ಸಂಸ್ಥೆಗಳ ’ಪರ್ಯಾಯ ಪ್ರಜಾ ಪ್ರಣಾಳಿಕೆ’ ಮಂಡನೆ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ‘ಉತ್ತಮ ಸಮಾಜ ನಿರ್ಮಾಣದ ಬಗ್ಗೆ ಅಧಿಕಾರಶಾಹಿ ವರ್ಗಕ್ಕೆ ಯಾವುದೇ ಚಿಂತನೆಗಳಿಲ್ಲ. ಸರ್ಕಾರ ರಚಿಸುವ ಆಯೋಗಗಳು ರಾಜಕೀಯ ನಾಯಕರ ತಾಣಗಳಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಮುಂದು ಮಾಡಿಕೊಂಡು ಕೋರ್ಟ್ ಮೆಟ್ಟಿಲೇರಿದರೆ ಅಲ್ಲೂ ನಿರಾಶಾಭಾವ ಇದೆ’ ಎಂದರು.