ಪಣಜಿಯ ಡೊಣಾ ಪೌಲಾದಲ್ಲಿ ಶಿನವಾರ ನಡೆದ ಕಾರ್ಯಕ್ರಮದಲ್ಲಿ ವಿಶ್ವಗುರು ಭಾರತ ಮತ್ತು ಆರ್ಎಸ್ಎಸ್ ದೃಷ್ಟಿಕೋನ ಎಂಬ ವಿಷಯದ ಬಗ್ಗೆ ಜೋಷಿ ಮಾತನಾಡಿದ್ದಾರೆ. ನಾನು ಮೇಧಾವಿಗಳೊಂದಿಗೆ ಮಾತನಾಡಿದ್ದು, 2020ರಲ್ಲಿ ಭಾರತವು ಉತ್ಕೃಷ್ಟ ರಾಷ್ಟ್ರವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ಭಾರತದಲ್ಲಿ ಕೆಲಸ ಮಾಡಲು ಬಯಸುವವರು ಹಿಂದೂ ಸಮುದಾಯದೊಂದಿಗೆ ಕೆಲಸ ಮಾಡಿ ಅದರ ಸಬಲೀಕರಣ ಮಾಡಬೇಕು. ಭಾರತದಲ್ಲಿ ಹಿಂದೂಗಳು ಏರಿಳಿತಗಳನ್ನು ಕಂಡಿದ್ದಾರೆ. ಭಾರತವನ್ನು ಹಿಂದೂ ಸಮುದಾಯದಿಂದ ವಿಭಜಿಸಲು ಆಗುವುದಿಲ್ಲ. ಹಿಂದೂಗಳು ಸದಾ ದೇಶದ ಕೇಂದ್ರವಾಗಿರುತ್ತಾರೆ ಎಂದು ಭಯ್ಯಾಜಿ ಜೋಷಿ ಹೇಳಿದ್ದಾರೆ.