ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಬ್ಲ್ಯುಜಿಎ ವಿಧಾನ ಅಳವಡಿಸುವ ಸಮಯ ಬಂದಿದೆ: ಸೇನಾ ಮುಖ್ಯಸ್ಥ ನರವಾಣೆ

Last Updated 10 ಮೇ 2020, 15:42 IST
ಅಕ್ಷರ ಗಾತ್ರ

ನವದೆಹಲಿ:ಕಾರ್ಯತಂತ್ರದ ಅನಿಶ್ಚಿತತೆ ಮತ್ತು ಜಾಗತಿಕ ಪಿಡುಗುನಂತಿರುವ ಸಾಂಪ್ರದಾಯಿಕವಲ್ಲದ ಬೆದರಿಕೆಗಳನ್ನು ನಿರ್ಣಾಯಕವಾಗಿ ಎದುರಿಸಲು ಭಾರತವು ಡಬ್ಲ್ಯುಜಿಎ ವಿಧಾನ (whole-of-govt approach)ವನ್ನು ಅಳವಡಿಸಿಕೊಳ್ಳುವ ಸಮಯ ಬಂದಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಹೇಳಿದ್ದಾರೆ.

ಭಾರತದ ನೆರೆಹೊರೆಯಲ್ಲಿ ಸಂಕೀರ್ಣವಾದ ಭೌಗೋಳಿಕ-ರಾಜಕೀಯ ಶಕ್ತಿಗಳ ಬಗ್ಗೆ ಮಾತನಾಡಿದ ಅವರು ಭಾರತೀಯ ಸಶಸ್ತ್ರ ಪಡೆಗಳು ಈ ಪ್ರದೇಶದಲ್ಲಿ ಭದ್ರತಾ ಪೂರೈಕೆದಾರರಾಗಿ ದೇಶದ ಖ್ಯಾತಿಯನ್ನು ಸುದೃಢಗೊಳಿಸಲು ನಿರ್ಧರಿಸಿದೆ. ಕಾರ್ಯತಂತ್ರದ ಅನಿಶ್ಚಿತತೆಗಳ ಸಂಪೂರ್ಣ ಸಾಲು ಮುಂದಿದೆ ಮತ್ತು ಅವುಗಳನ್ನು ಎದುರಿಸಲು ಡಬ್ಲ್ಯುಜಿಎವಿಧಾನವನ್ನು ಅನುಸರಿಸುವ ಸಮಯ ಬಂದಿದೆ ಎಂದು ಸೇನಾಮುಖ್ಯಸ್ಥರು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಆದಾಗ್ಯೂ, ನರವಾಣೆ ಅವರು ಈ ಬಗ್ಗೆ ಹೆಚ್ಚು ವಿವರಿಸಿಲ್ಲ. ಪಾಕಿಸ್ತಾನ ಬೆಂಬಲಿತ ತಾಲೀಬಾನ್ ಅಫ್ಘಾನಿಸ್ತಾನದಲ್ಲಿ ಅಧಿಕಾರದ ಗುರಿ ಹೊಂದಿದೆ. ಅದೇ ವೇಳೆ ಶ್ರೀಲಂಕಾ, ನೇಪಾಳ, ಮ್ಯಾನ್ಮಾರ್ ಮತ್ತು ಮಾಲ್ಡೀವ್ಸ್‌ನಂತಹ ದೇಶಗಳೊಂದಿಗೆ ಮಿಲಿಟರಿ ಸಂಬಂಧವನ್ನು ವಿಸ್ತರಿಸಲು ಚೀನಾದ ನಿರಂತರ ಪ್ರಯತ್ನಗಳನ್ನು ನಡೆಸುತ್ತಿರುವ ಹೊತ್ತಲ್ಲಿ ನರವಾಣೆ ಈ ಅಭಿಪ್ರಾಯ ಮುಂದಿಟ್ಟಿದ್ದಾರೆ.

ಜಾಗತಿಕ ಪ್ರಕೃತಿಯ ಸಮಸ್ಯೆಗಳೊಂದಿಗೆ ವ್ಯವಹರಿಸುವಾಗ, ಸಶಸ್ತ್ರ ಪಡೆಗಳು ತಮ್ಮ ಅಂತರ್ಗತ ಸಾಮರ್ಥ್ಯಗಳು ಮತ್ತು ಸಾಮರ್ಥ್ಯಗಳನ್ನು ಹೊಂದಿದ್ದು, ಈ ಪ್ರದೇಶದಲ್ಲಿ ಭದ್ರತಾ ಪೂರೈಕೆದಾರರಾಗಿ ಭಾರತದ ಖ್ಯಾತಿಯನ್ನು ಭದ್ರಪಡಿಸುತ್ತದೆ ಮತ್ತು ಭದ್ರತೆಯನ್ನು ಸಮಗ್ರ ಪರಿಕಲ್ಪನೆಯಾಗಿ ತೆಗೆದುಕೊಳ್ಳುತ್ತವೆ ಎಂದು ಜನರಲ್ ನರವಾಣೆ ಹೇಳಿದರು.

ಯುದ್ಧದಿಂದ ಹಾನಿಗೊಳಗಾದ ದೇಶದಿಂದ ಅಮೆರಿಕದ ಸೈನ್ಯವನ್ನು ಹಿಂತೆಗೆದುಕೊಳ್ಳಲು ತಾಲಿಬಾನ್ ಜೊತೆಗಿನ ಐತಿಹಾಸಿಕ ಒಪ್ಪಂದವನ್ನು ಅಮೆರಿಕ ಸಹಿ ಮಾಡಿದ ನಂತರ ಅಫ್ಘಾನಿಸ್ತಾನದ ಅತ್ಯಂತ ದುರ್ಬಲ ಮತ್ತು ಕ್ರಿಯಾತ್ಮಕ ಪರಿಸ್ಥಿತಿಯ ಬಗ್ಗೆ ಭಾರತಕ್ಕೆ ತಿಳಿದಿದೆ.

ಭಾರತವು ರಾಷ್ಟ್ರೀಯ ಭದ್ರತೆಯ ಬಗ್ಗೆ ತನ್ನ ತಿಳುವಳಿಕೆಯನ್ನು ವಿಸ್ತರಿಸುವ ಅಗತ್ಯವಿದೆ ಮತ್ತು ಹೊಸ ಜಾಗತಿಕ ಪಿಡುಗಿನಂಥಾ ಸಾಂಪ್ರದಾಯಿಕವಲ್ಲದ ಬೆದರಿಕೆಗಳನ್ನು ಪರೀಕ್ಷಿಸಬೇಕು. ಏಕೆಂದರೆ ಅವುಗಳುದೇಶದ ಮೇಲೆ ತೀವ್ರ ಹಾನಿಯನ್ನುಂಟುಮಾಡುವ ಸಾಮರ್ಥ್ಯವನ್ನು ಹೊಂದಿವೆ. ನಾವು ಅದನ್ನು ಎದುರಿಸಲು ಅದಕ್ಕೆ ತಕ್ಕಂತೆ ನಮ್ಮನ್ನು ಸಿದ್ಧಪಡಿಸಿಕೊಳ್ಳಬೇಕು. ಭಾರತ ಎದುರಿಸುತ್ತಿರುವ ಸಾಂಪ್ರದಾಯಿಕ ಬೆದರಿಕೆಗಳು ಅಡೆತಡೆಯಿಲ್ಲದೆ ಉಳಿದಿವೆ ಮತ್ತು ಅವುಗಳನ್ನು ಎದುರಿಸಲು ಸಶಸ್ತ್ರ ಪಡೆಗಳನ್ನು ಸಂಪೂರ್ಣವಾಗಿ ಸಜ್ಜುಗೊಳಿಸಲಾಗಿದೆ ಎಂದಿದ್ದಾರೆ ನರವಾಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT