ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕದನ ವಿರಾಮ ಉಲ್ಲಂಘಿಸಿದ ಪಾಕ್‌ ಸೇನೆ: ಯೋಧ ಹುತಾತ್ಮ

Last Updated 24 ಮಾರ್ಚ್ 2019, 7:29 IST
ಅಕ್ಷರ ಗಾತ್ರ

ಪೂಂಚ್‌(ಜಮ್ಮು ಕಾಶ್ಮೀರ): ಜಿಲ್ಲೆಯ ಶಾಹ್ಪುರ್‌ ಪ್ರದೇಶದಲ್ಲಿರುವಅಂತರರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆ ನಡೆಸಿದಅಪ್ರಚೋದಿತದಾಳಿಗೆ ಓರ್ವ ಯೋಧ ಹುತಾತ್ಮರಾಗಿದ್ದಾರೆ ಎಂದು ಸೇನೆಯ ಮೂಲಗಳು ತಿಳಿಸಿವೆ.

ಹುತಾತ್ಮ ಯೋಧಹರಿ ವಾಕೆರ್‌ ರಾಜಸ್ಥಾನದವರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಸೇನೆ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಪ್ರಯೋಜನವಾಗಲಿಲ್ಲ.

ಶನಿವಾರ ಸಂಜೆ 5.30ರ ವೇಳೆಗೆ ಪಾಕ್‌ ಸೇನೆ ದಾಳಿ ನಡೆಸಿತ್ತು. ತಕ್ಕತಿರುಗೇಟು ನೀಡಿದ ಭಾರತೀಯ ಸೇನೆ, ನೆರೆ ರಾಷ್ಟ್ರದ ಸೈನಿಕರನ್ನು ಹಿಮ್ಮೆಟ್ಟಿಸಿದೆಎಂದು ತಿಳಿಯಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಪಾಕ್‌ ಸೈನಿಕರು ಶುಕ್ರವಾರವೂ ಅಪ್ರಚೋದಿತ ದಾಳಿ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT